ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವೆಂದು ಹೇಳಿ ಕಾಂಗ್ರೆಸ್ ಸಂಭ್ರಮಿಸಿದೆ.
ಇಂದು ಭಾರತವು ದ್ವೇಷವನ್ನು ಬಿಟ್ಟು ಪ್ರೀತಿ ಮತ್ತು ಸ್ನೇಹವನ್ನು, ಹಿಂಸೆಯನ್ನು ಬಿಟ್ಟು ಶಾಂತಿಯನ್ನು, ಸುಳ್ಳನ್ನು ಬಿಟ್ಟು ಸತ್ಯವನ್ನು ಆಯ್ಕೆ ಮಾಡಿಕೊಂಡಿದೆ. ಈ ಜಯ ನಿಮ್ಮದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
5 ರಾಜ್ಯಗಳ ಫಲಿತಾಂಶ ದೇಶದ ಜನತೆ ಬಿಜೆಪಿ ಆಡಳಿತದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ತೋರಿಸುತ್ತದೆ.
ಸುಳ್ಳುಗಳು, ಕೋಮು ದ್ವೇಷ ಹರಡುವ
ವಿಷಯಗಳ ಮೇಲಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ.
ನೈಜ ವಿಚಾರಗಳು ಮತ್ತು ಅಭಿವೃದ್ಧಿ ಬಯಸಿ ಮತ ಚಲಾವಣೆಯಾಗಿದೆ.
ಈ ಬದಲಾವಣೆ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ.#Results2018
— Karnataka Congress (@INCKarnataka) December 11, 2018
5 ರಾಜ್ಯಗಳ ಫಲಿತಾಂಶ ದೇಶದ ಜನತೆ ಬಿಜೆಪಿ ಆಡಳಿತದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ತೋರಿಸುತ್ತದೆ. ಸುಳ್ಳುಗಳು, ಕೋಮು ದ್ವೇಷ ಹರಡುವ ವಿಷಯಗಳ ಮೇಲಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ನೈಜ ವಿಚಾರಗಳು ಮತ್ತು ಅಭಿವೃದ್ಧಿ ಬಯಸಿ ಮತ ಚಲಾವಣೆಯಾಗಿದೆ. ಈ ಬದಲಾವಣೆ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮೂರು ರಾಜ್ಯಗಳ ಭರ್ಜರಿ ಜಯದಿಂದಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಲ್ಲದೇ ಕಾಂಗ್ರೆಸ್ ಮತದಾರರಿಗೆ ಟ್ವೀಟ್ ಮೂಲಕ ಧನ್ಯವಾದವನ್ನು ಸಲ್ಲಿಸಿದೆ.
Democracy has won!
Thank you India, you have chosen love over hate, peace over violence & truth over lies.
This victory is yours. #CongressWinsBIG pic.twitter.com/8d9JjsQuKP
— Congress (@INCIndia) December 11, 2018
ಈ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ. ದ್ವೇಷದ ಮೇಲಿನ ಪ್ರೀತಿಯನ್ನು, ಹಿಂಸೆಯ ಮೇಲಿನ ಶಾಂತಿಯನ್ನು ಹಾಗೂ ಸುಳ್ಳಿನ ಮೇಲಿನ ಸತ್ಯವನ್ನು ಆಯ್ಕೆಮಾಡಿಕೊಂಡ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಜಯ ನಿಮ್ಮದು ಎಂದು ಬರೆದುಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv