ಚಾಮರಾಜನಗರ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 15 ದಿನಗಳೇ ಕಳೆದಿವೆ. ಆದರೆ ಅವರ ನೆನಪು ಕೋಟ್ಯಂತರ ಹೃದಯಗಳನ್ನು ಕಾಡುತ್ತಿದೆ. ಹೀಗಿರುವಾಗ ಪುನೀತ್ ತವರು ಜಿಲ್ಲೆ ಚಾಮರಾಜನಗರದಲ್ಲಿ ಕಾಲವಾದ ತರುವಾಯ ಇದೀಗ ಪುನೀತ್ ಫೋಟೋಗೆ ಬೇಡಿಕೆ ಹೆಚ್ಚಾಗಿದೆ.
ದೇವರ ಫೋಟೋಗಿಂತ ಹೆಚ್ಚಾಗಿ ಪುನೀತ್ ಫೋಟೋವನ್ನು ಕೊಂಡೊಯ್ದು ಜನ ಪೂಜಿಸಲು ಶುರು ಮಾಡಿದ್ದಾರೆ. ಪುನೀತ್ ಬದುಕಿದ್ದಾಗ ಸಾವಿರಾರು ಜನರಿಗೆ ನೆರವಾಗಿದ್ದಾರೆ. ಅವರೊಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದ್ದರು. ಇದೀಗ ಅವರಿಲ್ಲ ಆದರೂ ಅಭಿಮಾನಿಗಳ ಮನೆ, ಮನಗಳಲ್ಲಿ ಪುನೀತ್ ಆರಾಧನೆ ಜೋರಾಗಿದೆ. ಕಳೆದ 15 ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋಗಳನ್ನು ಜನ ಕೊಂಡೊಯ್ದಿದ್ದಾರೆ. ಇದೀಗ ಮತ್ತೇ ಪುನೀತ್ ಫೋಟೋ ಮನೆಗೆ ಕೊಂಡೊಯ್ಯಲು ಆರ್ಡರ್ ಬರ್ತಿದೆ ಅಂತಾ ಫೋಟೋ ಅಂಗಡಿ ಮಾಲೀಕರು ಹೇಳ್ತಿದ್ದಾರೆ.
ಜೊತೆಗೆ ನಾವು ಮನೆಗೆ ಫೋಟೋ ಕೊಂಡೊಯ್ದು ದೇವರ ಮನೆಯಲ್ಲಿ ಇಟ್ಟು ಆರಾಧನೆ ಮಾಡ್ತಿದ್ದೀವಿ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ. ಒಟ್ಟಿನಲ್ಲಿ ಪುನೀತ್ ನಿಧನವಾಗಿರಬಹುದು ಆದರೆ ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದನ್ನೂ ಓದಿ: ಪುನೀತ್ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ