Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಇಬ್ಬರ ಜಗಳ 3ನೇಯವರಿಗೆ ಲಾಭ; ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ವರದಾನ ಆಗಿದ್ಹೇಗೆ?

Public TV
Last updated: February 8, 2025 7:53 pm
Public TV
Share
4 Min Read
rahul gandhi aravind kejriwal narendra modi
SHARE

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) 10 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ, ಬಿಜೆಪಿ ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ದಿಲ್ಲಿ ಕಾಂಗ್ರೆಸ್‌ನ ಏಕಾಂಗಿ ಸ್ಪರ್ಧೆಯು ಆಪ್‌ಗೆ ದೊಡ್ಡ ಪೆಟ್ಟು ನೀಡಿದೆ. ವಿರೋಧ ಪಕ್ಷದ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತೆ? ಎಂಬ ಚರ್ಚೆ ದಿಲ್ಲಿ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಎಎಪಿ ಶೇ.43 ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇ. 45 ರಷ್ಟು ಮತಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಶೇ. 6 ರಷ್ಟು ಮತಗಳನ್ನು ಪಡೆದರೂ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿಯನ್ನು (BJP) ವಿರೋಧ ಪಕ್ಷದಲ್ಲಿ ಉಳಿಸಬಹುದಿತ್ತು. ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಳ್ಳದೇ ಇದ್ದದ್ದು, ದೆಹಲಿ ಚುನಾವಣೆಯಲ್ಲಿ (Delhi Election Results) ಬಹುದೊಡ್ಡ ಬೆಲೆ ತೆರುವುದಕ್ಕೆ ಕಾರಣವಾಯಿತು ಎಂಬುದು ಸದ್ಯದ ವಿಶ್ಲೇಷಣೆ.

Narenndra Modi BJP Victory Specch delhi lection

ರಾಜ್ಯದ 11 ಪ್ರಮುಖ ಕ್ಷೇತ್ರಗಳ ಫಲಿತಾಂಶ ಗಮನಿಸಿದರೆ, ಎಎಪಿ ನಾಯಕರು ಬಿಜೆಪಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗಮನಾರ್ಹ ಮತಗಳನ್ನು ಗಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ 4,089 ಮತಗಳ ಅಂತರದಲ್ಲಿ ಸೋತರು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಕಾಂಗ್ರೆಸ್‌ನ (Congress) ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಎಎಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರೆ, ಕೇಜ್ರಿವಾಲ್ ಅಲ್ಪ ಮತಗಳ ಗೆಲುವು ಸಾಧಿಸುತ್ತಿದ್ದರು.

Arvind Kejriwal 3

ಜಂಗ್‌ಪುರ: ಮಾಜಿ ಉಪಮುಖ್ಯಮಂತ್ರಿ ಮತ್ತು ‘ಎಎಪಿ ನಂಬರ್ 2’ ಮನೀಶ್ ಸಿಸೋಡಿಯಾ ಅವರು ಬಿಜೆಪಿಯ ತರ್ವೀಂದರ್‌ ಸಿಂಗ್ ಮಾರ್ವಾ ವಿರುದ್ಧ ಕೇವಲ 675 ಮತಗಳ ಅಂತರದಿಂದ ಸೋತರು. ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಕಾಂಗ್ರೆಸ್‌ನ ಫರ್ಹಾದ್ ಸೂರಿ 7,350 ಮತಗಳನ್ನು ಪಡೆದಿದ್ದಾರೆ. ಒಂದು ವೇಳೆ ಕಾಂಗ್ರೆಸ್‌-ಎಎಪಿ ಮೈತ್ರಿಯಾಗಿದ್ದರೆ, ಈ ಮತಗಳನ್ನು ಸಿಸೋಡಿಯಾ ಅವರಿಗೆ ವರ್ಗಾಯಿಸಿ ಅವರ ಆರಾಮದಾಯಕ ಗೆಲುವನ್ನು ಖಚಿತಪಡಿಸಬಹುದಿತ್ತು.

ಗ್ರೇಟರ್ ಕೈಲಾಶ್: ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಎಎಪಿಗೆ ಸುರಕ್ಷಿತ ಸ್ಥಾನವೆಂದೇ ಪರಿಗಣಿಸಲ್ಪಟ್ಟಿತ್ತು. ಮೂರು ಬಾರಿ ಶಾಸಕ ಮತ್ತು ಸಚಿವ ಸೌರಭ್ ಭಾರದ್ವಾಜ್ ಸುಲಭವಾಗಿ ಗೆಲ್ಲುತ್ತಾರೆ ಎಂದು ಹಲವರು ಆಶಿಸಿದ್ದರು. ಆದರೆ ಬಿಜೆಪಿಯ ಶಿಖಾ ರಾಯ್, ಭಾರದ್ವಾಜ್ ಅವರನ್ನು 3,188 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ಗರ್ವಿತ್ ಸಿಂಘ್ವಿ 6,711 ಮತಗಳನ್ನು ಪಡೆದರು. ಮೈತ್ರಿಯಾಗಿ ಸ್ಪರ್ಧಿಸಿದ್ದರೆ ಭಾರದ್ವಾಜ್ ಆ ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿತ್ತು. ಇದನ್ನೂ ಓದಿ: ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

ಮಾಳವೀಯ ನಗರ: ಮಾಳವೀಯ ನಗರದಲ್ಲಿಯೂ ಇದೇ ರೀತಿಯಾಗಿದೆ. ಅಲ್ಲಿ ಬಿಜೆಪಿಯ ಸತೀಶ್ ಉಪಾಧ್ಯಾಯ ಮೂರು ಬಾರಿ ಶಾಸಕರಾಗಿದ್ದ ಸೋಮನಾಥ್ ಭಾರ್ತಿ ಅವರನ್ನು 2,131 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ಜಿತೇಂದರ್ ಕುಮಾರ್ ಕೊಚಾರ್ 6,770 ಮತಗಳನ್ನು ಪಡೆದು ಎಎಪಿ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾದರು.

Rahul Gandhi 4

ಬದ್ಲಿ: ಬದ್ಲಿಯಲ್ಲಿ ಬಿಜೆಪಿಯ ಆಹಿರ್ ದೀಪಾಲ್ ಚೌಧರಿ ಅವರು ಎಎಪಿಯ ಅಜೇಶ್ ಯಾದವ್ ಅವರನ್ನು 15,163 ಮತಗಳಿಂದ ಸೋಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ದೇವೇಂದ್ರ ಯಾದವ್ 41,071 ಮತಗಳನ್ನು ಗಳಿಸಿದ್ದಾರೆ. ಮೈತ್ರಿ ಇದ್ದಿದ್ದರೆ ಎಎಪಿ ಸುಗಮವಾಗಿ ಗೆಲ್ಲಬಹುದಿತ್ತು.

ತಿಮಾರ್ಪುರ: ಬಿಜೆಪಿಯ ಸೂರ್ಯ ಪ್ರಕಾಶ್ ಖತ್ರಿ ಅವರು ತಿಮಾರ್ಪುರ ಕ್ಷೇತ್ರದಲ್ಲಿ 1,168 ಮತಗಳ ಅಂತರದಿಂದ ಗೆದ್ದರು. ಎಎಪಿಯ ಸುರೀಂದರ್ ಪಾಲ್ ಸಿಂಗ್ ಅವರನ್ನು ಸೋಲಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲೋಕೇಂದ್ರ ಕಲ್ಯಾಣ್ ಸಿಂಗ್ 8,361 ಮತಗಳನ್ನು ಗಳಿಸಿದರು. ಇದು ಬಿಜೆಪಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಇದನ್ನೂ ಓದಿ: ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

ನಂಗ್ಲೋಯಿ ಜಾಟ್: ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,251 ಮತಗಳ ಅಂತರದಿಂದ ಎಎಪಿಯ ರಘುವಿಂದರ್ ಶೋಕೀನ್ ಅವರನ್ನು ಮಣಿಸಿದರು. ಕಾಂಗ್ರೆಸ್‌ನ ರೋಹಿತ್ ಚೌಧರಿ 32,028 ಮತಗಳನ್ನು ಪಡೆದು ಆಪ್‌ಗೆ ಹೋಗುತ್ತಿದ್ದ ವಿರೋಧ ಪಕ್ಷದ ಮತಗಳನ್ನು ತಪ್ಪಿಸಿದರು.

ರಾಜಿಂದರ್ ನಗರ: ಹಿರಿಯ ಎಎಪಿ ನಾಯಕ ದುರ್ಗೇಶ್ ಪಾಠಕ್ ಬಿಜೆಪಿಯ ಉಮಾಂಗ್ ಬಜಾಜ್ ವಿರುದ್ಧ 1,231 ಮತಗಳ ಅಂತರದಿಂದ ಸೋತರು. 4,105 ಮತಗಳನ್ನು ಪಡೆದ ಕಾಂಗ್ರೆಸ್‌ನ ವಿನೀತ್ ಯಾದವ್, ಎಎಪಿ ಸೋಲಿಗೆ ಕಾರಣರಾಗಿದ್ದಾರೆ.

ಛತ್ತರ್‌ಪುರ: ದಕ್ಷಿಣ ದೆಹಲಿಯ ಛತ್ತರ್‌ಪುರದಲ್ಲಿ, ಬಿಜೆಪಿಯ ಕರ್ತಾರ್ ಸಿಂಗ್ ತನ್ವರ್ ಅವರು ಎಎಪಿಯ ಬ್ರಹ್ಮ್ ಸಿಂಗ್ ತನ್ವರ್ ಅವರನ್ನು 6,239 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್‌ನ ರಾಜೇಂದರ್ ಸಿಂಗ್ ತನ್ವರ್ ಅವರು ಸೋಲಿನ ಅಂತರಕ್ಕಿಂತ ಹೆಚ್ಚು 6,601 ಮತಗಳನ್ನು ಪಡೆದಿದ್ದಾರೆ. ಇದು ಬಿಜೆಪಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

ಸಂಗಮ್ ವಿಹಾರ್: ಬಿಜೆಪಿಯ ಚಂದನ್ ಕುಮಾರ್ ಚೌಧರಿ ಇಡೀ ದಿಲ್ಲಿಯಲ್ಲಿ ಅತಿ ಕಡಿಮೆ ಅಂತರದಿಂದ ಚುನಾವಣೆ ಗೆದ್ದಿದ್ದಾರೆ. ಎಎಪಿಯ ದಿನೇಶ್ ಮೊಹಾನಿಯಾ ಅವರನ್ನು ಕೇವಲ 344 ಮತಗಳಿಂದ ಮಣಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ಷ್ ಚೌಧರಿ 15,863 ಮತಗಳನ್ನು ಪಡೆದು ಎಎಪಿಗೆ ಪೆಟ್ಟು ನೀಡಿದ್ದಾರೆ.

ತ್ರಿಲೋಕ್‌ಪುರಿ: ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ರವಿಕಾಂತ್ ಕೇವಲ 392 ಮತಗಳ ಅಂತರದಿಂದ ಗೆದ್ದರು. ಎಎಪಿಯ ಅಂಜನಾ ಪರ್ಚಾ ಬಿಜೆಪಿ ವಿರುದ್ಧ ಸೋತರು. 6,147 ಮತಗಳನ್ನು ಗಳಿಸಿದ ಕಾಂಗ್ರೆಸ್‌ನ ಅಮರ್‌ದೀಪ್ ಮತ ವಿಭಜನೆಗೆ ಕಾರಣರಾದರು.

TAGGED:aapbjpcongressDelhi Election Results 2025ಎಎಪಿಕಾಂಗ್ರೆಸ್ದೆಹಲಿ ಚುನಾವಣಾ ಫಲಿತಾಂಶಬಿಜೆಪಿ
Share This Article
Facebook Whatsapp Whatsapp Telegram

Cinema Updates

Ramya 2
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ
Cinema Karnataka Latest Main Post
Darshan Vijayalakshmi
ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ
Cinema Latest Sandalwood Top Stories
Darshan Pavithra
ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ
Bengaluru City Cinema Court Latest Main Post National Sandalwood
Darshan Court
ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ
Bengaluru City Cinema Court Latest Main Post National Sandalwood
Appu Cup League
ಅಪ್ಪು ಕಪ್ ಸೀಸನ್ 3; ಜರ್ಸಿ ಅನಾವರಣ
Bengaluru City Cinema Karnataka Latest Top Stories

You Might Also Like

Dharmasthala SIT 1
Dakshina Kannada

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಕೇಸ್; ಬೆಳ್ತಂಗಡಿಯಲ್ಲಿ ಕಚೇರಿ ತೆರೆಯಲಿರುವ ಎಸ್‌ಐಟಿ

Public TV
By Public TV
42 seconds ago
School Building Collapses
Latest

ಶಾಲಾ ಕಟ್ಟಡ ಕುಸಿದು 4 ಮಕ್ಕಳ ದಾರುಣ ಸಾವು – ಅವಶೇಷಗಳ ಅಡಿ ಸಿಲುಕಿದ 60 ಮಕ್ಕಳು

Public TV
By Public TV
1 hour ago
Prahlad Joshi 3
Latest

ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

Public TV
By Public TV
1 hour ago
Ramanagara Suicide Case
Crime

ವಿಷ ಕುಡಿದು ಪತಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಗಂಡನನ್ನೇ ಕೊಲೆ ಮಾಡಿಸಿದ ಗ್ರಾಪಂ ಸದಸ್ಯೆ!

Public TV
By Public TV
2 hours ago
Tigers Death Case 3
Chamarajanagar

ಚಾ.ನಗರದಲ್ಲಿ 5 ಹುಲಿಗಳ ಸಾವು ಕೇಸ್‌ – ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

Public TV
By Public TV
2 hours ago
Chikkamagaluru Suicide
Chikkamagaluru

ಮಗನ ಸಾವಿನಿಂದ ಮನನೊಂದ ತಾಯಿ – ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?