ಮುಂಬೈ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ರನ್ನ ಜೆಂಟಲ್ ಮ್ಯಾನ್ ಅಂತ ಸುಮ್ಮನೆ ಕರೆಯಲ್ಲ. ತಮ್ಮ ಜೊತೆಯಲ್ಲಿರುವ ಮಹಿಳೆಯರನ್ನ ಆರಾಮಾಗಿ ಆಗಿ ಇರುವಂತೆ ನೋಡಿಕೊಳ್ಳೋದು ಶಾರೂಖ್ ಗೆ ಗೊತ್ತು. ತಮ್ಮ ಸಹ-ನಟರಿಗೆ ಅವರು ಒಳ್ಳೆಯ ಮಾರ್ಗದರ್ಶಕರಾಗಿತ್ತಾರೆ ಅನ್ನೋದನ್ನ ನಿರೂಪಿಸಿದ್ದಾರೆ.
ಲಕ್ಸ್ ಗೋಲ್ಡನ್ ದೀವಾಸ್ ಅರ್ಪಿಸುವ ಬಾತೇ ವಿತ್ ಬಾದ್ಶಾ ರಿಯಾಲಿಟಿ ಶೋನಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತನ್ನ ತಾಯಿ ಉಜಾಲಾ ಬಗ್ಗೆ ಮಾತಾಡುವ ವೇಳೆ ಪದ್ಮಾವತಿ ಚಿತ್ರದ ನಾಯಕಿಯ ಕಣ್ಣಂಚಲ್ಲಿ ನೀರು ಬಂದಿದ್ದು, ಶೋ ನಡೆಸಿಕೊಡ್ತಿದ್ದ ಶಾರುಖ್ ಖಾನ್ ಎದ್ದು ಬಂದು ಡಿಪ್ಪಿಗೆ ಕಣ್ಣೀರು ಒರೆಸಿದ್ರು.
ದೀಪಿಕಾ ಪಡುಕೋಣೆ ಅವರ ತಾಯಿ ಉಜಾಲಾ ಪಡುಕೋಣೆ ದೀಪಿಕಾ ಅವರ ಯಶಿಸ್ಸಿನ ಕುರಿತು ಪತ್ರ ಬರೆದಿದ್ದರು. ಶಾರೂಖ್ ಆ ಪತ್ರವನ್ನು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಓದಿದ್ದರು. ನೀನು ನಿನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀಯ. ನಿನ್ನ ಬಗ್ಗೆ ನನಗೆ ತುಂಬ ಹೆಮ್ಮೆಯಾಗುತ್ತೆ. ನೀನು ನಿನ್ನ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಸರಿಯಾಗಿ ನಡೆಸಿಕೊಂಡು ಹೋಗುತ್ತಿದ್ದೀಯ ಎಂದು ದೀಪಿಕಾ ಅವರ ತಾಯಿ ಪತ್ರದಲ್ಲಿ ಬರೆದಿದ್ದರು. ಇದನ್ನು ಕೇಳಿದ ದೀಪಿಕಾ ಅಳಲಾರಂಭಿಸಿದ್ದರು. ಅವರು ಕಣ್ಣಿನಿಂದ ನೀರು ಬಂದ ತಕ್ಷಣ ಶಾರೂಖ್ ಅವರ ಕಣ್ಣಿರನ್ನು ಒರೆಸಿ ಆಕೆಯನ್ನು ಸಮಾಧಾನ ಮಾಡಿದ್ರು.
ದೀಪಿಕಾ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನವನ್ನು ಶಾರೂಖ್ ಜೊತೆ ಆರಂಭಿಸಿದ್ದರು. 2007 ರಲ್ಲಿ ತೆರೆಕಂಡ ಓಂ ಶಾಂತಿ ಓಂ ಚಿತ್ರದಲ್ಲಿ ಮೊದಲ ಬಾರಿಗೆ ಶಾರೂಖ್ ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. ನಂತರ ಚನ್ನೈ ಎಕ್ಸ್ ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಶಾರೂಖ್ ಜೊತೆ ನಟಿಸಿದ್ದರು.
ಸದ್ಯ ದೀಪಿಕಾ ಪಡುಕೋಣೆ ಪದ್ಮಾವತಿ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ನಟಿಸಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಆಗಿ ನಟ ರಣ್ವೀರ್ ಸಿಂಗ್ ನಟಿಸಿದ್ದಾರೆ.