ಉಳುಮೆಗೆ ಹೋದ ರೈತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

Public TV
1 Min Read
HVR MURDER

ಹಾವೇರಿ: ಜಮೀನು ಉಳುಮೆ ಮಾಡಲು ಹೋದ ರೈತರಿಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಓರ್ವ ರೈತ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ನಜಿಕಲಕಮಾಪುರ ಗ್ರಾಮದಲ್ಲಿ ನಡೆದಿದೆ.

HVR MURDER AV 3

ಮೃತ ವ್ಯಕ್ತಿಯನ್ನ ಸಿದ್ದಪ್ಪ ಪಡಗೋದಿ 46 ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನ ಬೆನ್ನೆಪ್ಪ ಡಬ್ಬಣ್ಣನವರ್ 48 ವರ್ಷ ವ್ಯಕ್ತಿಯನ್ನ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ.

HVR MURDER AV 2

ಕಳೆದ ಒಂದೂವರೆ ವರ್ಷದಿಂದ 27 ಎಕರೆ ಜಮೀನು ವಿವಾದ ನ್ಯಾಯಾಲಯದಲ್ಲಿತ್ತು. ನ್ಯಾಯಾಲಯ ಸಿದ್ದಪ್ಪ ಪಡಗೋದಿ ಅವರಿಗೆ ಜಮೀನು ಎಂದು ತೀರ್ಪು ನೀಡಿತ್ತು. ಆದ್ರೆ ಇಂದು ಜಮೀನು ಉಳುಮೆ ಮಾಡಲು ಹೋದ ಸಿದ್ದಪ್ಪ ಪಡಗೋದಿಯನ್ನ ಬೀರಪ್ಪ ಪಡಗೋದಿ, ಸಿದ್ದಪ್ಪ, ಸುನೀಲ ಸೇರಿದಂತೆ 15 ಕ್ಕೂ ಹೆಚ್ಚು ಜನರು ಜಮೀನಿಗೆ ತೆರಳಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

HVR MURDER AV 1

ವಿಷಯ ತಿಳಿಯುತ್ತಿದ್ದ ಹೆಚ್ಚುವರಿ ಎಸ್ಪಿ ಶ್ರೀನಾಥ ಜೋಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

HVR MURDER AV 5

HVR MURDER AV 4

Share This Article
Leave a Comment

Leave a Reply

Your email address will not be published. Required fields are marked *