ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ

Public TV
1 Min Read
jaipur father

ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು ಆಂಬುಲೆನ್ಸ್ ನೀಡದ ಕಾರಣ ಪೋಷಕರು ಮಗುವಿನ ಶವವನ್ನು ಸುಮಾರು 6 ಕಿಮೀ ವರೆಗೆ ಹೆಗಲ ಮೇಲೆ ಹೊತ್ತಿಕೊಂಡು ನಡೆದಿದ್ದಾರೆ.

ಹೌದು, ರಾಜಸ್ಥಾನ ರಾಜ್ಯದ ಬಾರಾ ಜಿಲ್ಲೆಯ ಶಾಹಬಾದ್ ಹೋಬಳಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಶಾಹಬಾದ್ ಹೋಬಳಿಯ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗ ವಾಸವಾಗಿದೆ. ಈ ಬುಡಕಟ್ಟು ಜನಾಂಗದ ಕೌಂಸಾ ಬಾಯಿ ಎಂಬವರ ಮೊಮ್ಮಗ ರವಿವಾರ ತೀವ್ರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದನು. ಸೋಮವಾರ ಬೆಳಗ್ಗೆ ಮಗುವಿನ ತಂದೆ ಹಾಗು ತಾಯಿ ಮಗುವನ್ನು ಚಿಕಿತ್ಸೆಗಾಗಿ ಶಾಹಬಾದ್ ಆಸ್ಪತ್ರೆಗೆ ತೆರಳಿದ್ದಾರೆ. ಇವರುಗಳು ಹೋದಾಗ ಆಸ್ಪತ್ರೆಯಲ್ಲಿ ಸಿಬ್ಬಂದಿಯೇ ಇರಲಿಲ್ಲ.

ಕೊನೆಗೆ ಪೋಷಕರು ವೈದ್ಯರ ವಸತಿ ನಿಲಯಕ್ಕೆ ಹೋಗಿ ಮಗುವಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ರೋಗಿಗಳ ಕಷ್ಟಕ್ಕೆ ಸ್ಪಂದಿಸದೇ ಡಾಕ್ಟರ್ ಸಂಜೆ 5 ಗಂಟೆಗೆ ಬರುವಂತೆ ತಿಳಿಸಿದ್ದಾರೆ. ಕೊನೆಗೇ ಬಾರಾ ಜಲ್ಲಾಸ್ಪತ್ರೆಗೆ ತೆರಳುವಂತೆ ಉಚಿತ ಸಲಹೆಯನ್ನ ನೀಡಿದ್ದಾರೆ. ವೈದ್ಯರು ಶಿಫಾರಸ್ಸು ಪತ್ರ ನೀಡುವ ಸಮುದಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆಯನ್ನು ಸಹ ನೀಡಲಿಲ್ಲ. ಕೊನೆಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಲಿಲ್ಲ ಎಂದು ಮಗುವಿನ ಅಜ್ಜಿ ಕೌಂಸಾ ಬಾಯಿ ಹೇಳಿದ್ದಾರೆ.

ಕೊನೆಗೆ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಹಣ ಹೊಂದಾಯಿಸಲು ನಾವು ಮನೆಗೆ ತೆರಳುವ ಮಾರ್ಗ ಮಧ್ಯೆಯೇ ಮಗು ಸಾವನ್ನಪ್ಪಿದೆ. ಕೊನೆಗೆ ತಂದೆ ತನ್ನ ಮಗುವನ್ನು ಸುಮಾರು 6 ಕಿಮೀ ವರೆಗೆ ಹೊತ್ತುಕೊಂಡು ನಡೆದಿದ್ದಾರೆ. ಅದೇ ಮಾರ್ಗವಾಗಿ ಹೊರಟಿದ್ದ ಕಾರ ಚಾಲಕರೊಬ್ಬರು ಅವರನ್ನು ಮನೆಯವರೆಗೂ ತಲುಪಿಸಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ, ಶಾಹಬಾದ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಅಟಲರಾಜ್ ಮೆಹ್ತಾ, ಮಗುವಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿತ್ತು ಮತ್ತು ಹೆಚ್ಚಿನ ಚಿಕಿತ್ಸೆಗೆ ಬಾರಾ ಜಿಲ್ಲಾಸ್ಪತ್ರೆಗೆ ತೆರಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಪೋಷಕರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸದೇ ಹೊರ ಹೋಗಿದ್ದಾರೆ. ಮಗು ಸಾವನ್ನಪ್ಪಿರುವ ಮಾಹಿತಿ ನನಗಿಲ್ಲ ಎಂದು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *