ತುಮಕೂರು: ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಬಾಸ್ ಎಂದು ಕರೆದಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಜಿಲ್ಲಾ ಉಸ್ತುವಾರಿ ಪಟ್ಟ ಹೊತ್ತಿರುವ ಪರಮೇಶ್ವರ್ ಸಾಹೆಬ್ರೆ ಸದ್ಯ ನಮಗೆಲ್ಲ ಬಾಸ್ ಅಂತ ಹೇಳಿದ್ರು.
ನಗರ ಕ್ಷೇತ್ರದ ಸಮಸ್ಯೆ ಅವರಿಗೆ ಮನವರಿಕೆ ಮಾಡಿ ಅಭಿವೃದ್ದಿಗಾಗಿ ಹೆಚ್ಚಿನ ಪ್ಯಾಕೇಜ್ ತರುವಂತೆ ಪರಮೇಶ್ವರ್ ಸಾಹೆಬರ ಬಳಿ ಮನವಿ ಮಾಡಿಕೊಳ್ಳುತ್ತೆವೆ. ಉಳಿದಂತೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನ ನಾನು ಇಲ್ಲಿವರೆಗೆ ಸೂಕ್ಷ್ಮವಾಗಿ ಗಮನಿಸಿಲ್ಲ. ಏನಾದರೂ ಲೋಪ ಕಂಡುಬಂದರೆ ಸುಮ್ಮನೆ ಕೂರಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.