ವಾಸ್ತು ಪ್ರಕಾರದಂತೆ ಡಿಸಿಎಂ ಸರ್ಕಾರಿ ಬಂಗಲೆ ಚೇಂಜ್- 25 ಕೋಟಿಯ ಮನೆಯಿದ್ರೂ ಕೂಗಳತೆಯಲ್ಲಿ ಬಂಗಲೆ!

Public TV
1 Min Read
DCM copy

ಬೆಂಗಳೂರು: ಜನ ಸತ್ತರೂ ಚಿಂತೆ ಇಲ್ಲ, ರೋಡಿಗಿಳಿದ್ರೆ ಝೀರೋ ಟ್ರಾಫಿಕ್ ದರ್ಬಾರು ಮಾಡಿ ಚರ್ಚೆಗೀಡಾಗಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್, ಇದೀಗ ಸ್ವಂತ ಮನೆಯಿಂದ ಕೂಗಳತೆ ದೂರದಲ್ಲೇ ಇರೋ ಸರ್ಕಾರಿ ಬಂಗಲೆಯನ್ನು ವಾಸ್ತುಪ್ರಕಾರವಾಗಿ ಬದಾವಣೆ ಮಾಡುತ್ತಿದ್ದಾರೆ.

DCM 3

ಹೌದು. ಡಿಸಿಎಂ ಅವರಿಗೆ ಸದಾಶಿವನಗರದಲ್ಲಿ 25 ಕೋಟಿಯ ಮನೆ ಇದ್ರೂ ಕೂಗಳತೆಯಲ್ಲಿ ಸರ್ಕಾರಿ ಬಂಗಲೆಯಿದೆ. ಇದೀಗ ಈ ಬಂಗಲೆಗೆ ಲಕ್ಷ ಲಕ್ಷ ಸರ್ಕಾರಿ ವೆಚ್ಚದಲ್ಲಿ ವಾಸ್ತು ಪ್ರಕಾರದಂತೆ ಬದಲಾವಣೆ ಮಾಡುವ ಮೂಲಕ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

DCM 12

ಬದಲಾವಣೆ ಏನು?:
ಮೂರು ರಸ್ತೆ ಕೂಡುವ ಜಾಗದಲ್ಲಿ ಮನೆ ಇರೋದ್ರಿಂದ ಎಲ್ಲವೂ ವಾಸ್ತುಪ್ರಕಾರವಾಗಿ ಚೇಂಜ್ ಮಾಡಲಾಗುತ್ತಿದೆ. ಮನೆಯಿಂದ ಹೊರಗೆ ಬಂದ್ರೆ ಕಾಣುವಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನೆಯ ಎಡಭಾಗದಲ್ಲಿ ಮತ್ಸ್ಯಾಕಾರ ಕಲ್ಲಿನ ಆಕೃತಿ, ಮನೆಯ ಒಳಭಾಗವನ್ನು ವಾಸ್ತುಪ್ರಕಾರವೇ ಸಿದ್ಧಪಡಿಸಿದ್ದಾರೆ.

DCM 2

ಚಂದ್ರಶೇಖರ ಸ್ವಾಮೀಜಿ ಸೂಚನೆಯಂತೆ ಪರಮೇಶ್ವರ್ ಅವರು ಈ ಮನೆ ಬದಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

DCM 4

Share This Article
Leave a Comment

Leave a Reply

Your email address will not be published. Required fields are marked *