– ಬಿಜೆಪಿ ನಾಯಕರು, ಸಂಘಟನೆಯಿಂದಲೇ ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆ
– ಆ ಬುರುಡೆ ಗಿರಾಕಿ ಯಾರವನು ಎಂದು ಪ್ರಶ್ನಿಸಿದ ಡಿಸಿಎಂ
ಬೆಂಗಳೂರು: ಪ್ರತಾಪ್ ಸಿಂಹನನ್ನು ಬಿಜೆಪಿಯವರು ಕಿತ್ತು ಬಿಸಾಕಿದ್ದಾರೆ. ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ ಪಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಟಾಂಗ್ ಕೊಟ್ಟರು.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತಡೆ ಕೋರಿ ಹೈಕೋರ್ಟ್ಗೆ ಅರ್ಜಿ ವಿಚಾರವಾಗಿ ಮಾತನಾಡಿದ ಡಿಕೆಶಿ, ಪಾಪ ಅವರದ್ದು ರಾಜಕೀಯ. ಬಿಜೆಪಿಯವರು ಪ್ರತಾಪ್ ಸಿಂಹನನ್ನು (Pratap Simha) ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಅಂತಾ ತೋರಿಸಿಕೊಳ್ಳಬೇಕು. ಅದಕ್ಕೆ ಪಾಪ ಪ್ರಯತ್ನ ಪಡ್ತಿದ್ದಾರೆ. ಬಿಜೆಪಿವರಿಗೆ ಬೇರೆ ಏನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟಿಗೆ ಪರ್ಮಿಷನ್ ಕೊಡಿಸಲಿ. ಕೃಷ್ಣ ಯೋಜನೆಗೆ ಪರ್ಮಿಶನ್ ಕೊಡಿಸಲಿ. ದೆಹಲಿಗೆ ಹೋಗಿ ಅನುದಾನ ಕೊಡಿಸಲಿ. ಕೇವಲ ಪ್ರಚಾರಕ್ಕೋಸ್ಕರ ಮಾಡ್ತಿದ್ದಾರೆ, ಬಾಯಿ ಮುಚ್ಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
ಧರ್ಮಸ್ಥಳಕ್ಕೆ ನ್ಯಾಯ ಒದಗಿಸಿಕೊಡ್ತಿರೋದು ನಾವು. ಧರ್ಮಸ್ಥಳದಲ್ಲಿ ಅವರದ್ದು ಎರಡು ಗುಂಪು ಇವೆ. ಅವರಿಂದಲೇ ಇದೆಲ್ಲಾ ಆಗ್ತಿರೋದು. ಆ ಬುರುಡೆ ಗಿರಾಕಿ ಯಾರವನು? ಅವರು ಯಾರು ಅಂತಾ ಬಿಜೆಪಿಯವರು ಹೇಳಿಕೊಳ್ಳೋಕೆ ಆಗ್ತಿಲ್ಲ. ಅವರೆಲ್ಲಾ ಬಿಜೆಪಿಯವರು. ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆಯಂದ್ರೆ ಬಿಜೆಪಿಯ ನಾಯಕರಿಂದ, ಅವರ ಸಂಘಟನೆಯಿಂದ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆ ಎಲೆಕ್ಷನ್ನಲ್ಲಿ ಬ್ಯಾಲೆಟ್ ವಿಚಾರವಾಗಿ ಮಾತನಾಡಿ, ನಾಳೆ-ನಾಡಿದ್ದು ನಾನು ಕಾನೂನು ತಂದು ತೋರಿಸ್ತೀನಿ. ಅವರೇ ಮಾಡಿರುವ ಕಾನೂನು ತಂದು ತೋರಿಸ್ತೀನಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್ ಸಿಂಹ
ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಸದಾಶಿವನಗರ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೈಕ್ ರೈಡ್ ಮಾಡಿದ್ದಾರೆ. ಬಳಿಕ ಕೆಪಿಸಿಸಿ ಯುವ ಕಾಂಗ್ರೆಸ್ನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದರು.