– 3 ಸಾವಿರ ಕೋಟಿ ರೂ. ವೆಚ್ಚವಾಗಿಲ್ಲ
ರಾಯಚೂರು: ಟ್ರಂಪ್ ಕಾರ್ಯಕ್ರಮಕ್ಕೆ 100 ಕೋಟಿ ರೂ. ಮಾತ್ರ ಖರ್ಚಾಗಿದೆ 3 ಸಾವಿರ ಕೋಟಿ ಅನ್ನೋದು ಸುಳ್ಳು, ಇಂತಹ ಭವ್ಯ ಸ್ವಾಗತ ಕೊಡುವ ಸಾಮಥ್ರ್ಯ ಯಾರ ಹತ್ತಿರವೂ ಇರಲಿಲ್ಲ ಮೋದಿ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಜೊತೆಗೆ ಇತರ ರಾಷ್ಟಗಳೊಂದಿಗೂ ಸಂಬಂಧ ಬೆಸೆಯುವ ಕೆಲಸ ಆಗಿದೆ. ಇತರ ದೇಶಗಳೊಂದಿಗಿನ ಬಾಂಧವ್ಯ ಮುಖ್ಯ. ಅಮೇರಿಕಕ್ಕೆ ಹೋದರೆ ಅಲ್ಲಿಯೂ ಸಮಸ್ಯೆ ಇರುತ್ತೆ. ಸಮಸ್ಯೆ ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯಿಲ್ಲ, ಎಲ್ಲ ಸಮಸ್ಯೆ ಒಂದೇ ಬಾರಿಗೆ ಬಗೆಹರಿಯುವುದಿಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಪಾಕಿಸ್ತಾನವನ್ನು ಕೈಬಿಟ್ಟರೆ ಪೂರ್ಣ ಕೈತಪ್ಪುತ್ತದೆ ಎಂದು ಅಮೆರಿಕ ಜೊತೆಗಿಟ್ಟುಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರು ಇದ್ದಾರೆ ಎಂದರು.
30 ಜನ ಬಿಜೆಪಿ ಶಾಸಕರು ರಾಜಿನಾಮೆ ನೀಡುತ್ತಾರೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ, ನಾವು ಒಗ್ಗಟ್ಟಾಗೇ ಇದ್ದೇವೆ ಎಂದು ತಿರುಗೇಟು ನೀಡಿದರು.
ರಾಯಚೂರು ವಿಶ್ವವಿದ್ಯಾಲಯ, ಐಐಐಟಿ ಸ್ಥಳ ವಿಕ್ಷಣೆ, ಮಹಿಳಾ ಪದವಿ ಕಾಲೇಜು ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಡಿಸಿಎಂ ಅಶ್ವತ್ ನಾರಾಯಣ ಭಾಗವಹಿಸಿದರು.