ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

Public TV
1 Min Read
DVG CEO

ದಾವಣಗೆರೆ: ಪಾಳು ಬಿದ್ದ ಪುಷ್ಕರಣಿಯನ್ನು ಅಧಿಕಾರಿಗಳೊಂದಿಗೆ ಸೇರಿ ಸ್ವಚ್ಛತೆ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ತೋರಿಸಿಕೊಟ್ಟಿದ್ದಾರೆ.

vlcsnap 2017 09 19 16h16m59s257

ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೊಣಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕರಣಿಯು ಹಲವು ವರ್ಷಗಳಿಂದ ಪಾಳು ಬಿದ್ದು, ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವಂತಿತ್ತು. ಇದನ್ನ ಅರಿತ ಸಿಇಒ ಅಶ್ವತಿ ಮಂಗಳವಾರ ಬೆಳ್ಳಂಬೆಳಗ್ಗೆ ಸ್ವತಃ ಅವರೇ ಕೈಯಲ್ಲಿ ಪೆÇರಕೆ, ಕುಡಗೋಲು ಹಿಡಿದುಕೊಂಡು ತನ್ನ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಜೊತೆಗೂಡಿಸಿಕೊಂಡು ಪುಷ್ಕರಣಿ ಸ್ವಚ್ಛ ಮಾಡಿದ್ದಾರೆ.

vlcsnap 2017 09 19 16h17m58s746

ಸ್ವಚ್ಛಗೊಳಿಸಿದ ನಂತರ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಸಹ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಇನ್ನು ಮುಂದೆ ಪುಷ್ಕರಣಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ಸಹ ನೀಡಿದರು.

vlcsnap 2017 09 19 16h15m48s100

ಅಶ್ವತಿ ಅವರು ಈ ರೀತಿಯ ಹಲವು ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಶೌಚಾಲಯಕ್ಕಾಗಿ ಗುದ್ದಲಿ ಹಿಡಿದಿದ್ರು ಜಿ.ಪಂ. CEO- ಗ್ರಾ.ಪಂ. ಸಿಬ್ಬಂದಿಯಿಂದಲೇ ಗೋಲ್ಮಾಲ್ !

Share This Article
Leave a Comment

Leave a Reply

Your email address will not be published. Required fields are marked *