ನೀರು ಕುಡಿಯಲು ಹೋಗಿ ನಾಲೆಗೆ ಬಿದ್ದ ಅಣ್ಣ – ರಕ್ಷಿಸಲು ಹೋಗಿ ನೀರುಪಾಲಾದ ತಮ್ಮ

Public TV
1 Min Read
Davanagere brothers

ದಾವಣಗೆರೆ: ನೀರು ಕುಡಿಯಲು ಹೋಗಿ ಕಾಲು ಜಾರಿ ಭದ್ರಾ ನಾಲೆಗೆ ಬಿದ್ದ ಅಣ್ಣನನ್ನ ರಕ್ಷಿಸಲು ಹೋಗಿ ತಮ್ಮ ಸಹ ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ನಡೆದಿದೆ.

ಕೃಷ್ಣಮೂರ್ತಿ (21) ಬೀರಲಿಂಗೇಶ್ (19) ಸಾವನ್ನಪ್ಪಿದ ಸಹೋದರರು. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ ಹಾಗೂ ಬೀರಲಿಂಗೇಶ್ ಹಬ್ಬಕ್ಕಾಗಿ ಸಂಬಂಧಿಕರ ಮೆದಿಕೆರೆ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

Davanagere brothers2

ಮೆದಿಕೆರೆ ಗ್ರಾಮದಲ್ಲಿ ಹರಿಯುವ ನಾಲೆಗೆ ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಅಣ್ಣ ಕೃಷ್ಣಮೂರ್ತಿ ಕಾಲು ಜಾರಿ ನಾಲೆಗೆ ಬಿದ್ದಿದ್ದು, ಅಣ್ಣನನ್ನು ರಕ್ಷಿಸಲು ಹೋಗಿ ತಮ್ಮ ಬೀರಲಿಂಗೇಶ್ ಸಹ ನೀರು ಪಾಲಾಗಿದ್ದಾನೆ. ಶವಕ್ಕಾಗಿ ಹುಡುಕಾಟ ನಡೆದಿದ್ದು, ಸ್ಥಳಕ್ಕೆ ಸಂತೆಬೆನ್ನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *