ದಾಯಾದಿಗಳ ಕಲಹ- ಅಡಿಕೆ ಗಿಡಗಳ ಮಾರಣಹೋಮ

Public TV
1 Min Read
DVG Brothers Adike

ದಾವಣಗೆರೆ: ದಾವಣಗೆರೆ ತಾಲೂಕಿನ ಅಲೂರು ಗ್ರಾಮದಲ್ಲಿ ದಾಯಾದಿಗಳ ಜಗಳಕ್ಕೆ ಬೆಳೆದು ನಿಂತ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಲಿಯಾಗಿವೆ.

ಅಲೂರು ಗ್ರಾಮದ ನಟರಾಜ್ ಎಂಬವರಿಗೆ ಸೇರಿದ್ದ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿವೆ. ನಟರಾಜ್ ಮೂರು ಎಕರೆ ಭೂಮಿಗೆ 8 ತಿಂಗಳ ಅಡಿಕೆ ಗಿಡಗಳನ್ನು ಹಾಕಿ, ಅವುಗಳಿಗೆ ಡ್ರಿಪ್ ಮೂಲಕ ನೀರು ಹಾಕಿ ಬೆಳೆಸುತ್ತಿದ್ದರು. ಜಮೀನು ವ್ಯಾಜ್ಯದಲ್ಲಿದ್ದ ಹಿನ್ನಲೆ ನಟರಾಜ್ ಅವರ ಚಿಕ್ಕಪ್ಪ ಪಾಲಾಕ್ಷಪ್ಪ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಪಾಲಾಕ್ಷಪ್ಪ ಧಾರವಾಡ ವಿವಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಬೆಳೆದು ನಿಂತ ಅಡಿಕೆ ಗಿಡಗಳನ್ನು ತಮ್ಮದ ಕೈಯಾರೇ ಕಿತ್ತು ಹಾಕಿದ್ದಾರೆ ಎಂದು ನಟರಾಜ್ ಆರೋಪಿಸುತ್ತಿದ್ದಾರೆ.

ಕಷ್ಟ ಪಟ್ಟು ಅಡಿಕೆ ಗಿಡಗಳನ್ನು ಬೆಳೆಸಿದ್ದು, ಈಗ ದಾಯಾದಿಗಳೇ ನಾಶ ಮಾಡಿದ್ದಕ್ಕೆ ಜಮೀನು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಪ್ಪ ವಿರುದ್ಧ ದೂರು ದಾಖಲು ಮಾಡಲು ಜಮೀನು ಮಾಲೀಕರು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *