ಬೆಂಗಳೂರು: ಹಣದಾಸೆಗೆ ಮದುವೆಯಾಗಿ ಬಳಿಕ ಅನಾರೋಗ್ಯದ ನೆಪ ಹೇಳಿ ಸೊಸೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೊಸೆ ಗೌತಮಿ ವಿರುದ್ಧ ಪತಿ ಕುಟುಂಬಸ್ಥರು ದೂರು ನೀಡಿದ್ದಾರೆ. ಮೊದಲೇ ನಿರ್ಧರಿಸಿದ್ದಂತೆ ಮದುವೆ ಬಳಿಕ ದಂಪತಿ ಅಮೆರಿಕಾಗೆ ಹೋಗಲು ಸಿದ್ಧತೆ ನಡೆಸಲಾಗಿತ್ತು. ಆದ್ರೆ ಅಮೆರಿಕಾಗೆ ತೆರಳಲು ಎತ್ತಿಟ್ಟಿದ್ದ 1.25 ಲಕ್ಷ ನಗದು, ಚಿನ್ನಾಭರಣ ಸಮೇತ ಸೊಸೆ ಎಸ್ಕೇಪ್ ಆಗಿದ್ದಾಳೆ.
ಗೌತಮಿಗೆ 18 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, 3 ಲಕ್ಷಕ್ಕೂ ಅಧಿಕ ಮೌಲ್ಯದ ಬಟ್ಟೆ ಕೊಡಿಸಲಾಗಿತ್ತು. ಅಷ್ಟೇ ಅಲ್ಲ ಸೊಸೆಯ ವಿದ್ಯಾಭ್ಯಾಸ ಸಲುವಾಗಿ 40 ಲಕ್ಷ ವರ್ಗಾವಣೆ ಮಾಡಲಾಗಿತ್ತು. ಇಷ್ಟೆಲ್ಲಾ ತೆಗೆದುಕೊಂಡಿದ್ದ ಸೊಸೆ ಅನಾರೋಗ್ಯದ ನೆಪ ಹೇಳಿ ಹೈಡ್ರಾಮಾ ಶುರುಮಾಡಿದ್ಲು. ಇನ್ನು ಸೊಸೆ ಗೌತಮಿ ತಾಯಿ ಮನೆಗೆ ಹೋಗಿ ನಾನು ಯಾವುದೇ ಕಾರಣಕ್ಕೂ ವಾಪಸ್ ಬರಲ್ಲ. ನೀವೇನಾದ್ರೂ ಬಂದ್ರೆ ಕಿರುಕುಳ ಕೊಡ್ತಿದ್ದೀರಾ ಅಂತ ಕೇಸ್ ಹಾಕ್ತೀನಿ ಅಂತ ಆವಾಜ್ ಹಾಕ್ತಿದ್ದಾರೆ.
ಸದ್ಯ ಗೌತಮಿಯನ್ನು ತೋರಿಸಿ ಮದುವೆ ಮಾಡಿಸಿದ್ದ ವರಲಕ್ಷ್ಮೀ, ರವಿಚಂದ್ರನ್, ಹರೀಶ್ ಎಂಬುವರಿಗೂ ದುಡ್ಡು ನೀಡಲಾಗಿತ್ತು. ಹೀಗಾಗಿ ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬನಶಂಕರಿ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.