Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

Latest

ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

Public TV
Last updated: October 12, 2024 7:04 am
Public TV
Share
3 Min Read
Dasara Vijayadashami Goddess Chamundeshwari Rakteshwari Devi Mythology Story
SHARE

ದೇವಿ ಮಹಾತ್ಮೆಯ ಐದನೇ ಅಧ್ಯಾಯದಲ್ಲಿ ಶುಂಭ ನಿಶುಂಭರ (Shumba, Nishumba) ಕಥೆ ಬರುತ್ತದೆ. ಶುಂಭ, ನಿಶುಂಭರು ರಾಕ್ಷಸರಾಗಿದ್ದು ದೇವಲೋಕವನ್ನು ಆಕ್ರಮಿಸುವ ಕನಸು ಕಾಣುತ್ತಾರೆ. ಈ ಕನಸು ನನಸಾಗಬೇಕಾದರೆ ನಮಗೆ ವಿಶೇಷ ವರ ಸಿಗಬೇಕೆಂದು ತಿಳಿದು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡುತ್ತಾರೆ. ಇವರ ತಪಸ್ಸನ್ನು ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಈ ವೇಳೆ ಅಯೋನಿಜೆಯಾದ ಕನ್ಯೆ ಅಲ್ಲದೇ ಯಾರಿಂದಲೂ ನಮಗೆ ಮರಣ ಬಾರಬಾರದು ಎಂದು ವರ ಕೇಳುತ್ತಾರೆ. ಬ್ರಹ್ಮ ತಥಾಸ್ತು ಎಂದು ಹೇಳಿ ಈ ವಿಶೇಷ ವರವನ್ನು ದಯಪಾಲಿಸುತ್ತಾನೆ.

ವರ ಸಿಕ್ಕಿದ ಬೆನ್ನಲ್ಲೇ ಶುಂಭ, ನಿಶುಂಭರು ದೇವಲೋಕಕ್ಕೆ ಹೋಗಿ ಯುದ್ಧ ಮಾಡಿ ದೇವತೆಗಳನ್ನು ಅಲ್ಲಿಂದ ಓಡಿಸುತ್ತಾರೆ. ಈ ವೇಳೆ ಏನು ಮಾಡಬೇಕು ಎನ್ನುವುದನ್ನು ತಿಳಿಯದ ದೇವತೆಗಳು ನೇರವಾಗಿ ಆದಿಶಕ್ತಿಯಾದ ಪಾರ್ವತಿಯ ಬಳಿ ಬರುತ್ತಾರೆ. ಪಾರ್ವತಿಯ (Parvathi) ಬಳಿ ಬರುವುದಕ್ಕೂ ಕಾರಣವಿದೆ. ಹಿಂದೆ ಮಹಿಷಾಸುರನನ್ನು ಸಂಹಾರ ಮಾಡಿದ ಬಳಿಕ ದೇವಿ ನಿಮಗೆ ಯಾವುದೇ ಕಷ್ಟ ಬಂದರೂ ನನ್ನ ಬಳಿ ಬನ್ನಿ. ನಿಮ್ಮ ಕಷ್ಟವನ್ನು ನಾನು ಪಾರು ಮಾಡುತ್ತೇನೆ ಎಂದು ದೇವತೆಗಳಿಗೆ ಅಭಯ ನೀಡಿದ್ದಳು.

ದೇವತೆಗಳು ಲೋಕಕಂಟಕರಾಗಿರುವ ಶುಂಭ, ನಿಶುಂಭರ ಕಾಟವನ್ನು ವಿವರಿಸಿ ನಮ್ಮನ್ನು ರಕ್ಷಿಸಬೇಕೆಂದು ಆದಿಶಕ್ತಿಯ ಬಳಿ ಮೊರೆ ಇಡುತ್ತಾರೆ. ದೇವತೆಗಳು ಆದಿಶಕ್ತಿಯನ್ನು ಹೊಗಳಿದಾಗ ಆಕೆಯ ದೇಹದಿಂದ ಕೌಶಿಕಿಯೆಂಬ (Kaushiki) ಸ್ತ್ರೀ ಹೊರಬಂದು ದೇವತೆಗಳಿಂದ ಸಕಲ ಆಯುಧಗಳನ್ನು ಪಡೆಯುತ್ತಾಳೆ. ನಂತರ ಸೌಂದರ್ಯಭರಿತವಾದ ಬಾಲೆಯ ರೂಪವನ್ನು ತಳೆದು ಹಿಮಾಲಯದ ತಪ್ಪಲಿನಲ್ಲಿ ಉಯ್ಯಾಲೆಯಾಡುತ್ತಾ ವಿನೋದಲ್ಲಿ ಕುಳಿತು ತನ್ನದೇ ಲೋಕದಲ್ಲಿ ವಿಹರಿಸುತ್ತಿರುತ್ತಾಳೆ.

Mudhol Lokapur Durga Devi Temple Fair Bagalkot 3

ಈ ಸಂದರ್ಭದಲ್ಲಿ ಬೇಟೆಯಾಡಲು ಬಂದಿದ್ದ ಶುಂಭ, ನಿಶುಂಭರ ಸೇನಾಧಿಪತಿಯಾದ ಚಂಡ, ಮುಂಡರು (Chanda, Munda) ದೇವಿಯನ್ನು ನೋಡಿ ಮನಸೋಲುತ್ತಾರೆ. ಈಕೆಯ ಸೌಂದರ್ಯವನ್ನು ನೋಡಿ ಈ ವಿಚಾರವನ್ನು ಶುಂಭನಿಗೆ ತಿಳಿಸುತ್ತಾರೆ. ಶುಂಭ ಆಕೆಯನ್ನು ಕರೆ ತರುವಂತೆ ಧೂಮ್ರಲೋಚನಿಗೆ ಸೂಚಿಸುತ್ತಾನೆ. ಈ ವೇಳೆ ದೇವಿ,”ನನ್ನ ಕೈ ಹಿಡಿಯಬೇಕಾದ ವರನಾದವನು ನನಗಿಂತಲೂ ಬಲಶಾಲಿಯಾಗಿರಬೇಕು. ನನ್ನನ್ನು ಯಾರು ಯುದ್ಧದಲ್ಲಿ ಸೋಲಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಹೀಗಾಗಿ ಯುದ್ಧದಲ್ಲಿ ಸೋಲಿಸಿದರೆ ಮಾತ್ರ ಶುಂಭನನ್ನು ಮದುವೆಯಾಗುತ್ತೇನೆ” ಎಂದು ಹೇಳುತ್ತಾಳೆ. ಈ ಕಾದಾಟದಲ್ಲಿ ಧೂಮ್ರಲೋಚನ ಹತನಾದ ವಿಚಾರ ತಿಳಿದು ಶುಂಭ ಚಂಡ, ಮುಂಡರಿಗೆ ಆಕೆಯನ್ನು ಕರೆ ತರುವಂತೆ ಆದೇಶಿಸುತ್ತಾನೆ. ಚಂಡಮುಂಡರು ದೇವಿ ಜೊತೆ ಯದ್ಧ ಮಾಡುತ್ತಾರೆ. ಈ ಸಮಯದಲ್ಲಿ ದೇವಿ ಕಪ್ಪು ಬಣ್ಣಕ್ಕೆ ತಿರುಗಿ ಆಕೆಯ ಹಣೆಯಿಂದ ಕಾಳಿ ಹೊರ ಬಂದು ಇಬ್ಬರನ್ನು ಸಂಹಾರ ಮಾಡುತ್ತಾಳೆ. ಇಬ್ಬರನ್ನು ಸಂಹಾರ ಮಾಡಿದ್ದಕ್ಕೆ ʼಚಾಮುಂಡಿʼ, ʼಚಾಮುಂಡೇಶ್ವರಿʼ ಎಂಬ ಹೆಸರು ದೇವಿಗೆ ಬರುತ್ತದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

chamundi Temple 1

ಚಂಡಮುಂಡರನ್ನು ದೇವಿ ಹತ್ಯೆ ಮಾಡಿದ ವಿಚಾರ ತಿಳಿದು ಶುಂಭ ರಕ್ತ ಬೀಜನನನ್ನು (Raktabeeja) ಯುದ್ಧಕ್ಕೆ ಕಳುಹಿಸುತ್ತಾನೆ. ಯುದ್ಧದ ಸಮಯದಲ್ಲಿ ಆತನ ರಕ್ತದ ಬಿಂದುಗಳು ನೆಲಕ್ಕೆ ಬೀಳುತ್ತಿದ್ದಂತೆ ಮತ್ತಷ್ಟು ರಾಕ್ಷಸರು ಹುಟ್ಟುತ್ತಿರುತ್ತಾರೆ. ರಕ್ತದಿಂದ ರಾಕ್ಷಸರು ಜನಿಸಲು ಕಾರಣವಿದೆ. ತನ್ನ ದೇಹದಿಂದ ಬಿದ್ದ ಒಂದೊಂದು ತೊಟ್ಟು ರಕ್ತವೂ ತನ್ನಂತೆಯೇ ಪರಾಕ್ರಮಶಾಲಿಯಾದ ರಾಕ್ಷಸರು ಹುಟ್ಟುವಂತೆ ಈಶ್ವರನಿಂದ ವರ ಪಡೆದಿದ್ದ. ಯುದ್ಧದಲ್ಲಿ ಈತನನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ದೇವಿ ನಾಲಗೆಯನ್ನು ಹೊರ ಚಾಚಿ ಯುದ್ಧ ಮಾಡುತ್ತಾಳೆ. ನಾಲಗೆಯ ಮೇಲೆ ನಿಂತು ರಕ್ತಬೀಜ ಯುದ್ಧ ಮಾಡಿದ. ಆತನ ದೇಹದಿಂದ ಬಿದ್ದ ರಕ್ತವನ್ನು ನಾಲಗೆಯ ಮೂಲಕ ಹೀರಿದ್ದರಿಂದ ರಕ್ತಬೀಜನ ಶಕ್ತಿ ಕಡಿಮೆಯಾಗಿ ಕೊನೆಗೆ ಹತನಾಗುತ್ತಾನೆ. ರಕ್ತಬೀಜನನ್ನು ಸಂಹರಿಸಿದ್ದಕ್ಕೆ ದೇವಿಗೆ ʼರಕ್ತೇಶ್ವರಿʼ ಎಂಬ ಹೆಸರು ಬರುತ್ತದೆ.

ದುಮ್ರಲೋಚನ, ಚಂಡ, ಮುಂಡ, ರಕ್ತ ಬೀಜನನ್ನು ಹತ್ಯೆ ಮಾಡಿದ್ದಕ್ಕೆ ಸಿಟ್ಟಾದ ನಂತರ ಶುಂಭ, ನಿಶುಂಭರು ದೇವಿಯೊಡನೆ ಯುದ್ಧಕ್ಕೆ ಬರುತ್ತಾರೆ. ಇವರಿಬ್ಬರನ್ನು ಕೌಶಿಕಿ ಸಂಹಾರ ಮಾಡಿ ದೇವಲೋಕವನ್ನು ಮರಳಿ ದೇವತೆಗಳಿಗೆ ನೀಡುತ್ತಾಳೆ.

TAGGED:ChamundeshwariDasara VijayadashamiRakteshwariಚಾಮುಂಡಿಧೂಮ್ರಲೋಚನಪುರಾಣರಕ್ತೇಶ್ವರಿವಿಜಯ ದಶಮಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories
Zee Short Film Contest
ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಜೀ ಕಿರುಚಿತ್ರ ಸ್ಪರ್ಧೆ
Cinema Latest Top Stories
Krishna Vamshi serial
ಕೃಷ್ಣವಂಶಿ: ನಾಚಿಕೆ ಕೃಷ್ಣನ ಜೊತೆ ವಂಶಿ ಡೇಟ್ ಫಿಕ್ಸ್
Cinema Latest Sandalwood Top Stories

You Might Also Like

Mitchell Santner
Cricket

ವಿಶ್ವಕಪ್‌ನಿಂದ ಶ್ರೀಲಂಕಾ ಔಟ್‌ – ನ್ಯೂಜಿಲೆಂಡ್‌ ಸೆಮಿ ಆಸೆ ಜೀವಂತ

Public TV
By Public TV
17 minutes ago
Narendra Modi Israel Parliament speech
Latest

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ: ಮೋದಿ

Public TV
By Public TV
21 minutes ago
Retired BBMP officer commits suicide due to fear of CBI
Bengaluru City

ಸಿಬಿಐ ಭಯಕ್ಕೆ ನಿವೃತ್ತ ಬಿಬಿಎಂಪಿ ಅಧಿಕಾರಿ ಆತ್ಮಹತ್ಯೆ?

Public TV
By Public TV
1 hour ago
Sirsi Marikamba Jatre
Districts

ಶಿರಸಿ ಮಾರಿಕಾಂಬಾ ದೇವಿಯ ಮಹಾ ರಥೋತ್ಸವಕ್ಕೆ ಅದ್ಧೂರಿ ಚಾಲನೆ

Public TV
By Public TV
1 hour ago
BILL GATES 2
Latest

ರಷ್ಯಾದ ಇಬ್ಬರು ಮಹಿಳೆಯರ ಜೊತೆ ಸಂಬಂಧವಿದೆ: ಎಪಿಸ್ಟೀನ್‌ ಜೊತೆಗಿನ ಸ್ನೇಹಕ್ಕೆ ಕ್ಷಮೆಯಾಚಿದ ಬಿಲ್‌ ಗೇಟ್ಸ್‌

Public TV
By Public TV
1 hour ago
Goa Thar Accident
Crime

ಗೋವಾ ಥಾರ್ ಅಪಘಾತ ಪ್ರಕರಣ – 19 ವರ್ಷದ ದೆಹಲಿ ಯುವಕನ ವಿರುದ್ಧ FIR

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?