ಮೈಸೂರು: ವಿಶ್ವ ವಿಖ್ಯಾತ ದಸರಾದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ಮಾಡಿದರು.
ಬೆಳಗ್ಗೆ 10:15 ರಿಂದ 10:45 ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಸರಸ್ವತಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ. ಇಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಲಿದೆ.
ದಸರಾದ ಪ್ರಮುಖ ಅಕರ್ಷಣೆಯಾದ ಏರ್ ಶೋವನ್ನು ಸಚಿವ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಉದ್ಘಾಟಿಸಿದರು. ನಗರದ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.
ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಲರವದಿಂದ ಕೂಡಿದ್ದು, ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜ ಮೂಡಿತು. ಆಗಸದಲ್ಲಿ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಿತು. ಬಾನೆತ್ತರದ ಸ್ಕೈಡೈವಿಂಗ್ ನೆರೆದಿದ್ದ ಪ್ರವಾಸಿಗರ ಮೈ ನವಿರೇಳಿಸಿತು. ಹೆಲಿಕಾಪ್ಟರ್ ನಿಂದ 115 ಅಡಿ ಎತ್ತರದಿಂದ ಯೋಧರು ಪುಷ್ಪಾರ್ಚನೆ ಮಾಡಿದರು.
ಮೈಸೂರಿನ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಾಕು ಪ್ರಾಣಿಗಳು ಪ್ರದರ್ಶನ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿತು. ಈ ಪ್ರದರ್ಶನದಲ್ಲಿ ಡಾಬರ್ ಮನ್, ಜರ್ಮನ್ ಶೆಫರ್ಡ್, ಮುದೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರಾರಯಟ್, ವ್ಹೀಲರ್, ಪಿಟ್ಬುಲ್, ಸೇಂಟ್ ಬರ್ನಾಟ್, ಸೈಬೀರಿಯನ್ ಹಸ್ಕಿ ಸೇರಿದಂತೆ 21 ಜಾತಿಯ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾಣಿ ಪ್ರೀಯರ ಮನಸ್ಸು ಗೆದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv