ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್

Public TV
1 Min Read
darshan

ಮೈಸೂರು: ದರ್ಶನ್ ಆರಾಮವಾಗಿದ್ದು, ಅಪಘಾತವಾಗಿದೆ ಅಷ್ಟೇ. ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ ಎಂದು ನಟ ಸೃಜನ್ ಲೋಕೇಶ್ ಅಭಿಮಾನಿಗಳಲ್ಲಿ ಮನವಿಮಾಡಿಕೊಂಡಿದ್ದಾರೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಪಘಾತ ನಮಗೆ ಗೊತ್ತಿಲ್ಲದೆ ಆಗುವಂತದ್ದು. ಆಗಬಾರದಿತ್ತು ಆಗಿ ಹೋಗಿದೆ. ಸದ್ಯಕ್ಕೆ ಪ್ರಜ್ವಲ್ ಮತ್ತು ದೇವರಾಜ್ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ. ದರ್ಶನ್ ನಾಳೆ ರಾತ್ರಿ ಅಥವಾ ನಾಳಿದ್ದು ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ. ಈಗಾಗಲೇ ಎಲ್ಲ ಸರ್ಜರಿ ಮುಗಿದಿದೆ. ಅವರು ಮಲಗಿ ವಿಶಾಂತ್ರಿ ಮಾಡಬೇಕು. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

darshan 1

ಡಾಕ್ಟರ್ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುತ್ತಿರುವುದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದೇವರ ದಯೆ ಯಾರಿಗೂ ಏನೂ ಹಾಗಿಲ್ಲ. ಪ್ರತಿಯೊಬ್ಬರು ಸುರಕ್ಷಿತವಾಗಿದ್ದಾರೆ. ಅಭಿಮಾನಿಗಳೆಲ್ಲ ಅವರಿಗಾಗಿ ಪಾರ್ಥನೆ ಮಾಡಿ ಎಂದು ಸೃಜನ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *