ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ!

Public TV
1 Min Read
RMG DARSHAN copy

ರಾಮನಗರ: ನೂತನ ಆಭರಣ ಮಳಿಗೆ ಉದ್ಘಾಟನೆಗೆ ನಟ ದರ್ಶನ್ ಆಗಮಿಸಿದ ವೇಳೆ ರಸ್ತೆ ತಡೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬಳಿ ನಿರ್ಮಾಣವಾಗಿರುವ ಎಂ.ಎಸ್.ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯನ್ನು ಇಂದು ದರ್ಶನ್ ಉದ್ಘಾಟಿಸಿದರು. ಉದ್ಘಾಟನೆ ಮಾಡಿ ಕಾರಿನಲ್ಲಿ ಹತ್ತಿ ಅಭಿಮಾನಿಗಳಿಗೆ ಕೈಬೀಸಿ ಹೊರಟಿದ್ದಾರೆ. ಈ ವೇಳೆ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಪರಿಣಾಮ ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.

RAM

ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನಿಂದ ಬರುತ್ತಿರುವ ಮಾರ್ಗದಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಎಷ್ಟು ಮನವಿ ಮಾಡಿದರೂ ಕೇಳದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

RMG

ಇತ್ತ ದರ್ಶನ್ ಅಭಿಮಾನಿಗಳು ಗಲಾಟೆ ಕೂಡ ಶುರು ಮಾಡಿಕೊಂಡಿದ್ದು, ದರ್ಶನ್ ಬರುವಿಕೆ ಸಿದ್ಧವಾಗಿದ್ದ ವೇದಿಕೆಯ ಮೇಲೆ ಹಾಡುಗಾರರು ತಮಿಳು, ಮಲೆಯಾಳಂ ಮತ್ತು ಹಿಂದಿ ಹಾಡು ಹಾಡುತ್ತಿದ್ದರು. ಇದರಿಂದ ಕೋಪಗೊಂಡ ದರ್ಶನ್ ಅಭಿಮಾನಿಗಳು ದರ್ಶನ್ ಸಾಂಗ್ ಹಾಡುವಂತೆ ನೀರಿನ ಬಾಟಲ್ ಎಸೆದಿದ್ದಾರೆ. ಬಾಟಲ್ ಎಸೆತಕ್ಕೆ ಎಂ.ಎಸ್. ಗೋಲ್ಡ್ ಅಂಡ್ ಡೈಮಂಡ್ಸ್ ಮುಂಭಾಗದ ವಿದ್ಯುತ್ ಕಂಬದಲ್ಲಿನ ಟ್ಯೂಬ್ ಲೈಟ್ ಪುಡಿ ಪುಡಿಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *