Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ

Districts

ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ

Public TV
Last updated: July 16, 2019 4:52 pm
Public TV
Share
2 Min Read
udp 3
SHARE

ಉಡುಪಿ: ಚಂದ್ರ ಗ್ರಹಣದ ನಂತರ ರಾಜ್ಯಕ್ಕೆ ದಲಿತ ಸಿಎಂ ಆಯ್ಕೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರಕ್ಕೆ ನಿಮ್ಮ ವರ್ಗದವರು ಅಧಿಕಾರ ಚುಕ್ಕಾಣಿ ಹಿಡಿಯಲು ಗ್ರಹಣ ಸಹಕಾರ ಕೊಡುತ್ತದೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕಾರಣಿಗಳ ಪರವಾಗಿ ಮಾತನಾಡಲ್ಲ. ಕರ್ನಾಟಕದ ಜನತೆಯ ಪರವಾಗಿ ಹೇಳುತ್ತೇನೆ. ವಾತಾವರಣಕ್ಕೆ ಹಿತವಾಗಿ ರಾಜಕಾರಣ ಇದ್ದರೆ ಮಾತ್ರ ರಾಜ್ಯದ ಭವಿಷ್ಯ ಚೆನ್ನಾಗಿರುತ್ತದೆ. ರಾಜ್ಯಕ್ಕೂ ಜನಕ್ಕೂ ಅದು ಹಿತ ಎಂದು ಹೇಳಿದರು. ಮೈತ್ರಿ ಸರ್ಕಾರದ ರಚನೆ ಪ್ರಕೃತಿಯ ಸ್ಥಿತಿಗೆ ವಿರೋಧವಿದೆ. ಬೆಳಕಿಗೆ ತಕ್ಕಂತೆ ಜನ ಬದುಕಬೇಕು. ರಾಜ್ಯದ ಜನ ಬಿಜೆಪಿ ಕಡೆ ಒಲವು ತೋರಿರುವಾಗ, ಜೆಡಿಎಸ್- ಬಿಜೆಪಿ ಮೈತ್ರಿಯಾಗಿದ್ದರೆ ಸರ್ಕಾರ ಐದು ವರ್ಷ ಪೂರೈಸುತ್ತಿತ್ತು. ಕೇಂದ್ರದ ಅನುದಾನ ಬಂದು ಅಭಿವೃದ್ಧಿ ಆಗುತಿತ್ತು. ಈಗಿನ ಸ್ಥಿತಿಯಲ್ಲಿ ಸರ್ಕಾರ ಬೀಳುವ ಸಾಧ್ಯತೆಯೇ ಹೆಚ್ಚು ಎಂದರು.

collage jds

ಗ್ರಹಗತಿಯಲ್ಲಿ ದುರ್ಯೋಗಕ್ಕೂ- ಸುಯೋಗಕ್ಕೂ ಗ್ರಹಣದ ನಂತರ ಭಂಗವಿದೆ. ಸರ್ಕಾರ ಅಸ್ಥಿರವಾಗಿದೆ. ಕರ್ನಾಟಕ ಜನಕ್ಕೆ ಜವಾಬ್ದಾರಿಯುತ ವ್ಯಕ್ತಿಯ ನೇತೃತ್ವ ಇಲ್ಲ. ಅಸಂಬದ್ಧ ಮಾತು, ಅಸಂಬದ್ಧ ನಡವಳಿಕೆಯನ್ನು ಜನ ಸಹಿಸುತ್ತಿಲ್ಲ ಎಂದರು. ದಲಿತ ಸಿಎಂ ಎಂದಾಗ ಮಲ್ಲಿಕಾರ್ಜುನ ಖರ್ಗೆ ಹೆಸರು ಮೇಲ್ಪಂಕ್ತಿಗೆ ಬರುತ್ತದೆ. ಖರ್ಗೆ ರಾಜಕೀಯ ಮುತ್ಸದ್ಧಿ. ಮಲ್ಲಿಕಾರ್ಜುನ ಖರ್ಗೆಯನ್ನು ಈ ಮೊದಲೇ ಸಿಎಂ ಮಾಡಿದರೆ ಇಂತಹ ಯಾವುದೇ ಗೊಂದಲಗಳು ಬರುತ್ತಿರಲಿಲ್ಲ ಎಂದರು.

rebel congress jds resigns B 1 1000x329 1

ಅಧಿಕಾರದಲ್ಲಿರುವವರ ಹಣೆಬರಹ ಸರಿ ಇಲ್ಲದಿದ್ದರೆ ಹೀಗೆಲ್ಲ ಆಗುತ್ತದೆ. ಕರ್ನಾಟಕದ ಸುಗಮ ಸ್ಥಿತಿಗೆ ಒಂದು ಕಾಲದಲ್ಲಿ ಶೋಷಿತರು, ನಿಮ್ಮ ವರ್ಗದವರು ಮೇಲ್ಪಂಕ್ತಿಗೆ ಬರಬೇಕು ಎಂದಿದ್ದರು. ಮೈತ್ರಿಯೊಳಗಿರುವ ನಾಯಕರ ಪರಿಸ್ಥಿತಿ ಸರಿಯಿಲ್ಲದಿರುವಾಗ ಖರ್ಗೆ ಸಿಎಂ ಆದರೂ ಬಾಳಲಿಕ್ಕಿಲ್ಲ. ಬಿಜೆಪಿ ಸರ್ಕಾರ ಬಂದರೂ ದಲಿತ ಸಿಎಂ ಆಗುವ ಅವಕಾಶ ಇದೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

BJP SULLAI 1

ದಲಿತ ನಾಯಕನಿಗೆ ಆ ಸ್ಥಾನಮಾನ ಕೊಟ್ಟರೆ ಎಲ್ಲರೂ ಬೆಂಬಲ ಕೊಡುತ್ತಾರೆ. ಚುನಾವಣೆಗೆ ಹೋಗದೆ ಇದ್ದರೂ ಚುನಾವಣೆಗೆ ಹೋದರೂ ದಲಿತ ಸಿಎಂ ಆದರೆ ಪಕ್ಷದ, ರಾಜ್ಯದ ಭವಿಷ್ಯ ಒಳ್ಳೆದಿರುತ್ತದೆ. ಪ್ರಜೆಗಳು ಪ್ರಬುದ್ಧರಾಗಿದ್ದಾರೆ- ಎಲ್ಲವನ್ನೂ ನೋಡುತ್ತಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮಾಸ್ ಲೀಡರ್. ದೊಡ್ಡ ಸಂಘಟಕ- ಅಭಿವೃದ್ಧಿಯ ಚಿಂತನೆ ಇರುವ ವ್ಯಕ್ತಿ. ಯಡಿಯೂರಪ್ಪ ಜಾತಕದ ಪ್ರಕಾರ ವೃಷಭದಲ್ಲಿ ಶನಿ ಇರುವಾಗ ಅವರ ಜಾತಕ ಸಿಎಂ ಗಾದಿಗೆ ಸೂಕ್ತವಾಗಿಲ್ಲ. ಗ್ರಹಗತಿ ಸರಿ ಇಲ್ಲದಿರುವಾಗ ಅವರು ಸಿಎಂ ರೇಸ್‍ನಿಂದ ಹಿಂದೆ ಉಳಿದುಕೊಳ್ಳುವುದು ಒಳ್ಳೆಯದು ಎಂದು ಅಮ್ಮಣ್ಣಾಯ ಹೇಳಿದರು.

12c32eaa ed89 4cfc 8ecc 617dedb81ef7

ಬಿಜೆಪಿಯಲ್ಲಿ ಸಿಎಂ ಆಗುವ ಜಾತಕಫಲ ಇರುವ ಸಾಕಷ್ಟು ಜನ ದಲಿತ ನಾಯಕರು ಇರುವುದರಿಂದ ಈ ಬಗ್ಗೆ ದೃಷ್ಟಿ ನೆಡಬಹುದು. ಆರ್‍ಎಸ್‍ಎಸ್ ಗರಡಿಯಲ್ಲಿ ಪಳಗಿದವರು, ಯಡಿಯೂರಪ್ಪನವರ ಶಿಷ್ಯರು ಸಿಎಂ ಆಗುವ ಎಲ್ಲ ಅವಕಾಶ ಇದೆ. ಗಟ್ಟಿ ನಾಯಕತ್ವ ಇರುವ ಜಾತಕಫಲ ಚೆನ್ನಾಗಿರುವ ದಲಿತ ನಾಯಕ ಸಿಎಂ ಆಗುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದರು.

TAGGED:cmCoalition Governmenthoroscopeprakash ammannayaPublic TVudupiಉಡುಪಿಪಬ್ಲಿಕ್ ಟಿವಿಪ್ರಕಾಶ್ ಅಮ್ಮಣ್ಣಾಯಭವಿಷ್ಯಸಮ್ಮಿಶ್ರ ಸರ್ಕಾರಸಿಎಂ
Share This Article
Facebook Whatsapp Whatsapp Telegram

Cinema news

Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National

You Might Also Like

CRIME
Crime

ಹಾಡಹಗಲೇ ಕತ್ತು ಕೊಯ್ದು ಪತ್ನಿಯ ಬರ್ಬರ ಹತ್ಯೆ – ಶವದ ಮೇಲೆ ಕಾರು ಹಾಯಿಸಿ ವಿಕೃತಿ, ಪತಿ ವಶಕ್ಕೆ

Public TV
By Public TV
35 minutes ago
Belagavi Ministers
Bagalkot

ಬೆಳಗಾವಿಯ ನಾಯಕರಿಗೆ ಉಪಕದನ ಗೆಲ್ಲಿಸುವ ಜವಾಬ್ದಾರಿ – ಕಾಂಗ್ರೆಸ್ ಹೈಕಮಾಂಡ್ ಆದೇಶ

Public TV
By Public TV
1 hour ago
Petrol 5
Bagalkot

ರಾಜ್ಯದಲ್ಲಿ ಪೆಟ್ರೋಲ್ ʻಹುಸಿ ಬಾಂಬ್ʼ ವದಂತಿ – ಪೆಟ್ರೋಲ್‌ಗೆ 300 ರೂಪಾಯಿ ಲಿಮಿಟ್

Public TV
By Public TV
1 hour ago
Koppal JE Suspend
Districts

ಲೋಕಾ ದಾಳಿ ವೇಳೆ 10 ಕೋಟಿ ಭ್ರಷ್ಟಾಚಾರ ಬಯಲು – ಕೊಪ್ಪಳ ನಗರಸಭೆಯ ಜೆಇ ಸಸ್ಪೆಂಡ್

Public TV
By Public TV
2 hours ago
biriyani
Bengaluru City

ಒಂದು ಸಿಲಿಂಡರ್ ಕೊಟ್ರೆ ತಿಂಗಳ ಪೂರ್ತಿ ಬಿರಿಯಾನಿ ಫ್ರೀ

Public TV
By Public TV
2 hours ago
SSLC Exams
Bengaluru City

SSLC ಹಿಂದಿ ಪರೀಕ್ಷೆ ರದ್ದಿಗೆ ಆಗ್ರಹ – ಪರೀಕ್ಷಾ ಕೇಂದ್ರಗಳಿಗೆ ಭದ್ರತೆ ಪಡೆಯುವಂತೆ DDPI ಗಳಿಗೆ ಪತ್ರ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?