Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dakshina Kannada

Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

Public TV
Last updated: March 20, 2024 9:25 pm
Public TV
Share
4 Min Read
Dakshina Kannada
SHARE

– ಕಟೀಲ್‌ಗೆ ಕೊಕ್‌, ಕ್ಯಾ. ಬ್ರಿಜೇಶ್ ಚೌಟಗೆ ಟಿಕೆಟ್‌
– ‘ಕೈ’ ಟಿಕೆಟ್‌ ಇನ್ನೂ ಕಗ್ಗಂಟು

ಹಿಂದುತ್ವದ ನೆಲೆ, ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆ. ‘ಲೋಕ’ಸಮರದ ಕಳೆದ ಮೂರು ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಕಮಲ ಅರಳಿದೆ. ಎರಡು ಕ್ಷೇತ್ರದ ಜನ ಕೈ ಪಕ್ಷವನ್ನು ಹಿಡಿದಿದ್ದಾರೆ.

ಮೋದಿ ಹೆಸರಿನ ಬಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇದೆಲ್ಲವೂ ಹಿಂದುತ್ವದ ಅಲೆ ಇರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ವರದಾನವಾಗಿದೆ. ಇತ್ತ ಕಾಂಗ್ರೆಸ್ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿದೆ. ಗ್ಯಾರೆಂಟಿಗಳ ಲಾಭ ಪಡೆದುಕೊಳ್ಳುತ್ತಿರುವ ಮತದಾರರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸದಲ್ಲಿದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಜಿಲ್ಲೆಯಲ್ಲಿ ಬಂಟ, ಬಿಲ್ಲವ ಮತಗಳೇ ನಿರ್ಣಾಯಕ. ಅದರ ಜೊತೆ ಮೊಗವೀರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಮತಗಳು ಕೂಡ ಗೆಲುವಿನ ಮೆಟ್ಟಿಲನ್ನು ಸುಲಭ ಮಾಡಲು ಬೇಕೇ ಬೇಕು.

ಕ್ಷೇತ್ರ ಪರಿಚಯ
ದಕ್ಷಿಣ ಕನ್ನಡ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. 1950 ರ ದಶಕದಿಂದ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತತ ಗೆಲುವಿನ ಸರಪಳಿಯು 1991 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಧನಂಜಯ ಕುಮಾರ್ ಅವರ ಗೆಲುವಿನೊಂದಿಗೆ ಕಳಚಿತ್ತು. ಅಲ್ಲಿಂದ ಸತತ ಎಂಟು ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ. 2004 ರಲ್ಲಿ ಬಿಜೆಪಿ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನೀಡಿ ಗೆಲುವಿನ ಓಟವನ್ನು ಮುಂದುವರಿಸಿತು. 2009 ರಲ್ಲಿ ಗೌಡರ ವಿರುದ್ಧ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾದಾಗ, ಸಂಘ ಪರಿವಾರದ ಹಿನ್ನೆಲೆಯ ನಳಿನ್ ಕುಮಾರ್ ಕಟೀಲ್‌ಗೆ ಪಕ್ಷ ಮಣೆ ಹಾಕಿತು. ಸತತ ಮೂರು ಬಾರಿ ಕಟೀಲ್ ಸಂಸದರಾಗಿ ಆಯ್ಕೆಯಾದರು.

ವಿಧಾನಸಭಾ ಕ್ಷೇತ್ರಗಳೆಷ್ಟು?
ಕ್ಷೇತ್ರವು ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮಂಗಳೂರು ದಕ್ಷಿಣ (ವೇದವ್ಯಾಸ ಕಾಮತ್-ಬಿಜೆಪಿ), ಮಂಗಳೂರು ಉತ್ತರ (ಭರತ್ ಶೆಟ್ಟಿ-ಬಿಜೆಪಿ), ಬಂಟ್ವಾಳ (ರಾಜೇಶ್ ನಾಯಕ್-ಬಿಜೆಪಿ), ಬೆಳ್ತಂಗಡಿ (ಹರೀಶ್ ಪೂಂಜಾ-ಬಿಜೆಪಿ), ಸುಳ್ಯ (ಭಾಗೀರಥಿ ಮುರುಳ್ಯಾ-ಬಿಜೆಪಿ), ಪುತ್ತೂರು (ಅಶೋಕ್ ರೈ-ಕಾಂಗ್ರೆಸ್), ಉಳ್ಳಾಲ (ಯು.ಟಿ.ಖಾದರ್-ಕಾಂಗ್ರೆಸ್).

ಒಟ್ಟು ಮತದಾರರ ಸಂಖ್ಯೆ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,96,303 ಮತದಾರರಿದ್ದಾರೆ. ಅವರ ಪೈಕಿ 8,76,957 ಪುರುಷರು ಮತ್ತು 9,19,279 ಮಹಿಳಾ ಮತದಾರರಿದ್ದಾರೆ. 67 ತೃತೀಯಲಿಂಗಿ ಮತದಾರರು ಇದ್ದಾರೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ಮಿಥುನ್ ರೈ ವಿರುದ್ಧ ಕಟೀಲ್ 2,74,621 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರು.

ಹ್ಯಾಟ್ರಿಕ್ ಸರದಾರ ಕಟೀಲ್‌ಗೆ ತಪ್ಪಿದ ಟಿಕೆಟ್
2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಸಂದರ್ಭದಲ್ಲಿ ಕಟೀಲ್ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬಾರಿ ಬಿಜೆಪಿಯಲ್ಲಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಅದರ ಜೊತೆ ಪುತ್ತೂರಿನ ಅರುಣ್ ಪುತ್ತಿಲ ಬಿಜೆಗೆ ಬಂಡಾಯವಾಗಿ ನಿಂತಿದ್ದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತ್ತು. ಈ ಎಲ್ಲ ರಾಜಕೀಯ ಬೆಳವಣಿಗೆಯಿಂದಾಗಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿದೆ. ಅರುಣ್ ಪುತ್ತಿಲ ಬಣದ ವಿರೋಧ ಇದ್ದದ್ದು ನಳಿನ್ ಸ್ಪರ್ಧೆಗೆ ಮಾತ್ರ. ಹೀಗಾಗಿ ಹೊಸ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿತು.

ಬಹುಸಂಖ್ಯಾತರಿರೋ ಬಿಲ್ಲವರಿಗೆ ಮಣೆ ಹಾಕುತ್ತಾ ಕಾಂಗ್ರೆಸ್?
1991 ರ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಮರೀಚಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶ ನಿರಾಸೆ ಮೂಡಿಸಿತ್ತು. ಎಂಟರಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಗೆದ್ದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗತ ವೈಭವ ಮರಳಿ ಪಡೆಯಬೇಕೆಂದು ಪಕ್ಷದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯದವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ವಿನಯ್ ಕುಮಾರ್ ಸೊರಕೆ (ಬಿಲ್ಲವ), ಬಿ.ಕೆ.ಹರಿಪ್ರಸಾದ್ (ಬಿಲ್ಲವ), ಆರ್.ಪದ್ಮರಾಜ್ (ಬಿಲ್ಲವ) ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಯು.ಟಿ.ಇಫ್ತಿಕಾರ್ (ಮುಸ್ಲಿಂ) ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪಕ್ಷವು ಯಾರಿಗೆ ಮಣೆ ಹಾಕುತ್ತೆ ಎಂಬುದು ಕುತೂಹಲ ಮೂಡಿಸಿದೆ.

ಬಿಜೆಪಿ ಪ್ಲಸ್: ಹಿಂದುತ್ವದ ಭದ್ರಕೋಟೆ, ಮೋದಿ ಪರವಾದ ಅಲೆ, ಅಯೋಧ್ಯೆಯ ರಾಮಮಂದಿರ, ಹಿಂದೂ ಮತ ನಿರ್ಣಾಯಕ, ತಳಮಟ್ಟದ ಕಾರ್ಯಕರ್ತರ ಶ್ರಮ.

ಕಾಂಗ್ರೆಸ್ ಪ್ಲಸ್: ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ, ಮುಸ್ಲಿಂ ಮತಗಳ ಕ್ರೋಢಿಕರಣ, ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ, ಸಾಫ್ಟ್ ಹಿಂದುತ್ವ ಧೋರಣೆ.

ಜಾತಿವಾರು ಲೆಕ್ಕಾಚಾರ
ಬಿಲ್ಲವ- 3.60 ಲಕ್ಷ
ಮುಸ್ಲಿಂ- 3.50 ಲಕ್ಷ
ಎಸ್ಸಿ/ಎಸ್‌ಟಿ- 2.80 ಲಕ್ಷ
ಗೌಡ- 2 ಲಕ್ಷ
ಬಂಟ್ಸ್- 1.25 ಲಕ್ಷ
ಕ್ರಿಶ್ಚಿಯನ್- 1 ಲಕ್ಷ
ಬ್ರಾಹ್ಮಣ- 1 ಲಕ್ಷ
ಕೊಂಕಣಿ- 1 ಲಕ್ಷ
ಇತರ- 3.50 ಲಕ್ಷ

Share This Article
Facebook Whatsapp Whatsapp Telegram
Previous Article d.k.shivakumar 1 ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರಬೀಳುತ್ತೆ: ಡಿಕೆಶಿ ಸುಳಿವು
Next Article Mrinal Hebbalkar ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ ಸ್ಪರ್ಧೆ: ಮೃಣಾಲ್ ಹೆಬ್ಬಾಳ್ಕರ್

Latest Cinema News

Kothalavadi producers have been treated unfair Actress Swarna
ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ
Cinema Latest Main Post
Modi Biopic 1
ಪ್ರಧಾನಿ ಮೋದಿ ಬಯೋಪಿಕ್: ಮೋದಿ ಪಾತ್ರದಲ್ಲಿ ಮಲಯಾಳಂ ನಟ
Cinema Latest South cinema Top Stories
Darshan 8
ಇಂದಾದ್ರೂ ಜೈಲಲ್ಲಿ ದರ್ಶನ್‌ಗೆ ಸಿಗುತ್ತಾ ಹಾಸಿಗೆ ಭಾಗ್ಯ?
Cinema Court Latest Main Post Sandalwood
Multiplex Theatre
ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್
Bengaluru City Cinema Karnataka Latest Top Stories
Vishnuvardhan 1
ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್
Cinema Court Latest Sandalwood South cinema Top Stories

You Might Also Like

Banglegudde SIT Serch
Dakshina Kannada

ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್‌ಐಟಿಯಿಂದ ಅಸ್ಥಿಪಂಜರದ ಶೋಧ ಕಾರ್ಯ

24 seconds ago
Robbers threaten woman with a long stick and snatch her necklace Bengaluru
Bengaluru City

ವಾಕಿಂಗ್‌ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್‌ – ಬೆದರಿಸಿ ಸರ ಕಿತ್ತ ದರೋಡೆಕೋರರು

30 minutes ago
Vasikaran Bear
Bengaluru Rural

ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ

33 minutes ago
Haveri
Districts

ಹಾವೇರಿ | ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕಿದ 16 ಮಂದಿ ವಿರುದ್ಧ ಎಫ್‌ಐಆರ್

34 minutes ago
banashankari robbery
Bengaluru City

ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

48 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?