ಶ್ರೀಕ್ಷೇತ್ರ ಕಾರಿಂಜೆಯ ತೀರ್ಥ ಕೆರೆಗೆ ಬಿದ್ದು ಯುವಕ ಸಾವು

Public TV
0 Min Read
MNG Death

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಇರುವ ಇತಿಹಾಸ ಪ್ರಸಿದ್ಧ ಕಾರಿಂಜ ಕ್ಷೇತ್ರದ ತೀರ್ಥ ಕೆರೆಯಲ್ಲಿ ಯುವಕನೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸುದೇಶ್ (26) ಮೃತಪಟ್ಟ ದುರ್ದೈವಿ. ಸುದೇಶ್ ಇಬ್ಬರು ಸ್ನೇಹಿತರೊಂದಿಗೆ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರಕ್ಕೆ ಆಗಮಿಸಿದ್ದರು. ಅಲ್ಲಿನ ರಸ್ತೆ ಪಕ್ಕದಲ್ಲೇ ಇದ್ದ ಗಜ ತೀರ್ಥ ಕೆರೆಗೆ ಸುದೇಶ್ ಆಯ ತಪ್ಪಿ ಬಿದ್ದಿದ್ದು ಸಾವನ್ನಪ್ಪಿದ್ದಾರೆ.

MNG Death A

ಈ ಕುರಿತು ಮಾಹಿತಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ದಳವು ಘಟನಾ ಸ್ಥಳಕ್ಕೆ ದೌಡಾಯಿಸಿತು. ಬಳಿಕ ಸುದೇಶ್ ಅವರ ಮೃತದೇಹ ಮೇಲೆಕ್ಕೆತ್ತಲಾಯಿತು. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *