ಪಂಚಾಂಗ
ರಾಹುಕಾಲ: 7:51 ರಿಂದ 9:17
ಗುಳಿಕಕಾಲ: 1:35 ರಿಂದ 3:02
ಯಮಗಂಡಕಾಲ: 10:43 ರಿಂದ 12:09
ವಾರ: ಸೋಮವಾರ, ತಿಥಿ: ಚತುರ್ಥಿ
ನಕ್ಷತ್ರ: ಪೂರ್ವಾಷಾಡ
ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ಮೇಷ: ಕೃಷಿಕರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕಾರ್ಯಸಿದ್ಧಿ, ಉತ್ತಮ ಬುದ್ಧಿಶಕ್ತಿ, ಯತ್ನ ಕಾರ್ಯಗಳಲ್ಲಿ ಜಯ.
ವೃಷಭ: ದ್ರವ್ಯ ವ್ಯಾಪಾರಿಗಳಿಗೆ ಲಾಭ, ಆತ್ಮೀಯರ ಆಗಮನ, ಅನಾರೋಗ್ಯ, ಮಾತಾ ಪಿತ್ರರಲ್ಲಿ ವಾತ್ಸಲ್ಯ, ತೀರ್ಥ ಯಾತ್ರಾ ದರ್ಶನ.
ಮಿಥುನ: ಅಧಿಕಾರಿಗಳಿಂದ ನಿಂದನೆ ಎಚ್ಚರ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು. ವಾಹನ ಅಪಘಾತ.
ಕಟಕ: ಮಂಗಳ ಕಾರ್ಯಗಳಲ್ಲಿ ಭಾಗಿ, ಹಿರಿಯರ ಆಶೀರ್ವಾದ, ಮನಶಾಂತಿ, ವಿದ್ಯಾರ್ಥಿಗಳಿಗೆ ಶ್ರದ್ಧೆ, ಅಭಿವೃದ್ಧಿಯಿಂದ ವಿಶೇಷ ಲಾಭ.
ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ತ್ರೀ ಸೌಖ್ಯ, ಅನ್ಯರಿಗೆ ಉಪಕಾರ ಮಾಡುವಿರಿ.
ಕನ್ಯಾ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ನಾನ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ಅತಿಯಾದ ಮುಂಗೋಪ, ಆರ್ಥಿಕ ನೆರವು.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಲಾಭ, ಹಿತಶತ್ರುಗಳಿಂದ ತೊಂದರೆ, ಎಲ್ಲರ ಮನಸ್ಸನ್ನು ಗೆಲುವಿರಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ನಿಮ್ಮ ಜಾಣ್ಮೆಯಿಂದ ನಿಮಗೆ ವಿಶೇಷ ಬೇಡಿಕೆ, ದಾಂಪತ್ಯದಲ್ಲಿ ಪ್ರೀತಿ, ಸಕಾಲದಲ್ಲಿ ಹಣ ಬರುವುದು.
ಧನಸ್ಸು: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಹಿರಿಯರ ಬೆಂಬಲ, ಸುಖ ಭೋಜನ, ಅಪವಾದಗಳು ದೂರವಾಗುತ್ತವೆ.
ಮಕರ: ತೀರ್ಥಯಾತ್ರ ದರ್ಶನ, ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಹೊಸ ವ್ಯಕ್ತಿಗಳ ಪರಿಚಯ, ದುಷ್ಟ ಜನರ ಸಹವಾಸ.
ಕುಂಭ: ದೂರ ಪ್ರಯಾಣ, ಗಣ್ಯ ವ್ಯಕ್ತಿಗಳ ಭೇಟಿ, ಇತರರ ಮಾತಿಗೆ ಮರುಳಾಗಬೇಡಿ, ನಂಬಿದ ಜನರಿಂದ ಮೋಸ.
ಮೀನ: ವಿವಿಧ ಮೂಲಗಳಿಂದ ಧನ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು..
