ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ತೃತೀಯ/ಉಪರಿ ಚತುರ್ಥಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ: 09:13 ರಿಂದ 10:40
ಗುಳಿಕಕಾಲ: 06:18 ರಿಂದ 07:46
ಯಮಗಂಡಕಾಲ: 01:34 ರಿಂದ 03:01
ಮೇಷ: ಸರ್ಕಾರಿ ಕೆಲಸ ಕಾರ್ಯಗಳಿಗೆ ಅನುಕೂಲ, ಮಾನ ಅಪಮಾನ ನಿಂದನೆ, ಆತ್ಮಗೌರವಕ್ಕೆ ಸ್ನೆಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ.
ವೃಷಭ: ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟವಾಗುವ ಆತಂಕ.
ಮಿಥುನ: ಅನಿರೀಕ್ಷಿತ ಪ್ರಯಾಣ, ಪ್ರೀತಿ ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಆರ್ಥಿಕವಾಗಿ ಮೋಸ, ಭೂಮಿ ವಾಹನ ಖರೀದಿಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಸ್ನೇಹಿತರ ನಡುವೆ ಸಮಸ್ಯೆ.
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವಕ್ಕೆ ದಕ್ಕೆ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೀತಿ ಪ್ರೇಮದ ವಿಷಯಗಳಿಂದ ಚಿಂತೆ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ
ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ ಕೆಟ್ಟ ಕನಸುಗಳು, ಪತ್ರ ವ್ಯವಹಾರದಲ್ಲಿ ನಷ್ಟ.
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಪ್ರಾಪ್ತಿ.
ವೃಶ್ಚಿಕ: ದುರಾಲೋಚನೆಗಳು ಹೆಚ್ಚು, ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
ಧನಸ್ಸು: ಸಾಲದ ಸಹಾಯ, ಮಾನಸಿಕ ನೋವು, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ.
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ಆತ್ಮೀಯರು ಪ್ರೀತಿಪಾತ್ರರು ದೂರ, ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು.
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು ಮತ್ತು ಆತಂಕ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ.
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು.

