ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಮಾಘಮಾಸ, ಶುಕ್ಲ ಪಕ್ಷ, ತೃತೀಯ ನಂತರ ಚತುರ್ಥಿ,
ಶನಿವಾರ, ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ – 09:43 ರಿಂದ 11:10
ಗುಳಿಕಕಾಲ – 06:49 ರಿಂದ 08:16
ಯಮಗಂಡಕಾಲ – 02:04 ರಿಂದ 03:31
Advertisement
ಮೇಷ: ಉತ್ತಮ ಹೆಸರು ಕೀರ್ತಿ ಸನ್ಮಾನಗಳು, ದಾಂಪತ್ಯ ಕಲಹ, ಮಕ್ಕಳಿಗೆ ಬೇಸರ, ಅಧಿಕ ಖರ್ಚು.
Advertisement
ವೃಷಭ: ಸ್ಥಿರಾಸ್ತಿ ಭಾಗ್ಯ, ಧಾರ್ಮಿಕ ಕ್ಷೇತ್ರದವರಿಗೆ ಅನುಕೂಲ, ದೊರೆಯುವ ಸಾಲಕ್ಕೆ ಅಡೆತಡೆ.
Advertisement
ಮಿಥುನ: ಮಾತಿನಿಂದ ಕಿರಿಕಿರಿ, ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅನುಕೂಲ, ಬಂಧು ಬಾಂಧವರೊಂದಿಗೆ ಆತ್ಮೀಯತೆ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ.
ಸಿಂಹ: ಅಧಿಕ ಖರ್ಚು, ಸಹೋದರಿಯೊಂದಿಗೆ ವಾಗ್ವಾದ, ಸಂತಾನ ದೋಷಕ್ಕೆ ಸೂಕ್ತ ಸಲಹೆ.
ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಮಾನಸಿಕ ನೆಮ್ಮದಿ ಭಂಗ.
ತುಲಾ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರೊಂದಿಗೆ ಆತ್ಮೀಯತೆ.
ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಅಡೆತಡೆ.
ಧನಸ್ಸು: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪತ್ರ ವ್ಯವಹಾರದಿಂದ ಹೊಸ, ಉದ್ಯೋಗ ಪ್ರಾರಂಭದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯದಲ್ಲಿ ಕಲಹ.
ಕುಂಭ: ಆರ್ಥಿಕ ನಷ್ಟ, ಸಂಗಾತಿ ಮತ್ತು ಮಿತ್ರರಿಂದ ಅನುಕೂಲ, ಆಧ್ಯಾತ್ಮದ ಕಡೆ ಹೆಚ್ಚು ಒಲವು.
ಮೀನ: ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ.