ಚಿಕ್ಕಮಗಳೂರು: ಶೃಂಗೇರಿ (Sringeri) ಶಾರದಾಂಬೆ ದೇಗುಲಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಭೇಟಿ ನೀಡಿದ್ದಾರೆ. ಈ ವೇಳೆ ದೇಗುಲದ ಗೋಡೆ ಮೇಲಿರುವ ಕಾರ್ತ ವೀರ್ಯಾರ್ಜುನನಿಗೆ (Kartavirya Arjuna) ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ಮೊದಲ ಬಾರಿಗೆ ಡಿಕೆಶಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಸಿದ್ದಾರೆ. ಅಧಿಕಾರ ಹಾಗೂ ಶತೃ ಸಂಹಾರಕ್ಕಾಗಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಅಲ್ಲದೇ ಕಳೆದು ಹೋದ ವಸ್ತುವಿಗಾಗಿ ಇಲ್ಲಿ ವಿಶೇಷ ಪೂಜೆ ಮಾಡುತ್ತಾರೆ.
ಶೃಂಗೇರಿ ಮಠದ ಆವರಣದ ನವಗ್ರಹ ಆಕಾರದ ದೇವಾಲಯದ ಗೋಡೆ ಮೇಲೆ ಕಾರ್ತ ವೀರ್ಯಾರ್ಜುನ ಕೆತ್ತನಿ ಇದೆ.
ಮಹಾಭಾರತದ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಪಾಂಡವರು ಕಾರ್ತ ವೀರ್ಯಾರ್ಜುನನ ಮೊರೆ ಹೋಗಿದ್ದರು ಎಂಬ ಪ್ರತೀತಿ ಇದೆ.