Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru Rural

ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು

Public TV
Last updated: October 28, 2019 8:23 am
Public TV
Share
3 Min Read
DHShi Siddu
SHARE

ಬೆಂಗಳೂರು: ಡಿಕೆಶಿ ಜೆಡಿಎಸ್ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದ ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠದಲ್ಲಿ ಮಾತನಾಡಿದ ಮಾಜಿ ಸಚಿವರು, ನಾನು ಜೈಲಿನಿಂದ ಹೊರ ಬರಲು ಎಲ್ಲ ಸಮಾಜ, ಪಕ್ಷ, ಸಂಘಗಳು ಪಕ್ಷಾತೀತವಾಗಿ ಹೋರಾಟ ನಡೆಸಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ನಾನು ಬರುವಾಗ ಜೆಡಿಎಸ್ ಕಾರ್ಯಕರ್ತರು ದಾರಿಯಲ್ಲಿ ನಿಂತು ಹಾರೈಸಿದರು. ನನ್ನನ್ನು ನೋಡಲು ಮಾಜಿ ಸಿಎಂ ಕುಮಾರಸ್ವಾಮಿ ಜೈಲಿಗೆ ಬಂದಿದ್ದರು. ಅವರನ್ನು ಬರಬೇಡಿ ಎನ್ನುವುದಕ್ಕೆ ಆಗುತ್ತಾ? ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಕೂಡ ಬಂದಿದ್ದರು. ಆದರೆ ಅವರಿಗೆ ನನ್ನನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂದರು.

Siddu A 1

ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ, ಗೌರವ ಇದೆ. ಅವರು ಆ ರೀತಿ ಮಾತನಾಡಿರುವುಕ್ಕೆ ಸಾಧ್ಯವಿಲ್ಲ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಿಎ ರಮೇಶ್ ನನ್ನ ಹುಡುಗ. ಸೋಮವಾರ ರಮೇಶ್ ಮನೆಗೂ ಹೋಗಿ ಕುಟುಂಬಕ್ಕೆ ಧೈರ್ಯ ತುಂಬುತ್ತೇನೆ ಎಂದರು. ಆದರೆ ಕೇಂದ್ರ ಸರ್ಕಾರ ಐಟಿ, ಇಡಿ ದುರ್ಬಳಕೆ ಬಗ್ಗೆ ಹೇಳಿಕೆ ನೀಡಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು.

ನಾನು ಪಕ್ಷಾತೀತ ನಾಯಕ, ನನಗೆ ಎಲ್ಲ ವರ್ಗದವರ ಆಶೀರ್ವಾದ ಇದೆ. ನಾನು ಅರೆಸ್ಟ್ ಆದಾಗ ನಂಜಾವಧೂತ ಶ್ರೀಗಳು ನನ್ನ ಪರವಾಗಿ ಹೋರಾಟ ಮಾಡಿದ್ರು. ಪಾದಯಾತ್ರೆ ನಡೆಸಿ ರಾಜ್ಯಕ್ಕೆ ಸಂದೇಶ ಕೊಟ್ಟರು. ನಾನು ಎಲ್ಲರ ಮನೆಗೆ ಹೋಗಿ ವೈಯಕ್ತಿಕವಾಗಿ ಭೇಟಿ ಆಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು, ರಾಜ್ಯದ ಜನಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

DKShi

ನಾನೇನು ತಪ್ಪು ಮಾಡಿಲ್ಲ, ನನಗೆ ಅನ್ಯಾಯವಾಗಿದೆ ಅಂತ ಜನ ಬೀದಿಗಿಳಿದರು. ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ, ಹಾಗಾಗಿ ಭೇಟಿ ನೀಡಿದ್ದೇನೆ. ದಸರಾ ಹಬ್ಬದ ವೇಳೆ ತಂದೆ ಸಮಾಧಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ. ಸೋಮವಾರ ತಂದೆ ಸಮಾಧಿಗೆ, ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುತ್ತೇನೆ. ಮೈಸೂರಿಗೆ ಹೋಗಿ ಅಲ್ಲಿಯೂ ದೇವಸ್ಥಾನ, ಹಿರಿಯರ ಭೇಟಿ ಮಾಡಲಿದ್ದೇನೆ. ನನ್ನಿಂದ ನನ್ನ ಸ್ನೇಹಿತರ, ಸಂಬಂಧಿಕರ ಮನೆ ಮೇಲೂ ಐಟಿ ರೇಡ್ ಆಗಿತ್ತು. ಅವರ ಮನೆಗಳಿಗೆ ಹೋಗಿ ಮಾತನಾಡುತ್ತೇನೆ, ಧೈರ್ಯ ತುಂಬುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು?:
ಕಾವೇರಿ ನಿವಾಸದಲ್ಲಿ ಕುಳಿತು ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆಗೆ ಮಾತನಾಡುತ್ತಿದ್ದರು. ಈ ವೇಳೆ ಹುಣಸೂರು ಮಂಜುನಾಥ್ ಅವರು ಮಾತು ಆರಂಭಿಸಿ, ಲಿಂಗಾಯತ ಕಮ್ಯೂನಿಟಿ ಬಿಜೆಪಿ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಸರ್ ಎಂದರು. ಆಗ ಸಿದ್ದರಾಮಯ್ಯ, ಲಿಂಗಾಯತರು ಯಡಿಯೂರಪ್ಪಗೆ ಮೊದಲಿನ ತರ ಇರಲ್ಲಾ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲಿನ ತರ ಇರಲ್ಲಾ ಎಂದಿದ್ದರು.

Siddu Main App

ಈ ಮಧ್ಯೆ ಧ್ವನಿಗೂಡಿಸಿದ ಪಿರಿಯಾಪಟ್ಟಣ ವೆಂಕಟೇಶ್, ಅದು ಸರಿ. ಆದರೆ ಎನ್ ಕ್ಯಾಶ್ ಮಾಡಿಕೊಳ್ಳೋಕೆ ನಮ್ಮವರೆ ತಯಾರಿಲ್ವಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕರೆಕ್ಟ್ ಎಂದು ಹೇಳಿದ್ದರು.

ಮಾತು ಮುಂದುರಿಸಿದ ವೆಂಕಟೇಶ್ ಅವರು, ಡಿ.ಕೆ.ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿಯುತ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯನವರು, ಅದು ಹೌದು, ಏನು ಅರ್ಥ? ಬರುವಾಗ ಜೆಡಿಎಸ್ ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬಂದ್ರು ಏನ್ ಹೇಳೋದು. ಏನು ಅರ್ಥ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಪಿರಿಯಾಪಟ್ಟಣ ವೆಂಕಟೇಶ್, ಏನ್ ಹೇಳೋದು ಎಂದು ಕುಟುಕಿದ್ದರು.

ನಾನು ನಿನ್ನೆ ಗದಗ್‍ನಲ್ಲಿ ಹೇಳಿ ಬಂದಿದ್ದೇನೆ. ಜೆಡಿಎಸ್‍ನವರ ಸಹವಾಸ ಇನ್ನು ಇಲ್ಲಾ ಅಂದಿದ್ದೀನೆ ಎಂದು ಸಿದ್ದರಾಮಯ್ಯ ಧ್ವನಿಗೂಡಿಸಿದರು. ಈ ವೇಳೆ ವೆಂಕಟೇಶ್ ಅವರು, ನೀವೆಲ್ಲಾ ಸ್ಟಿಕ್ಕಾನ್ ಆಗಬೇಕು. ಏನು ಆಗುತ್ತೋ ಆಗ್ಲಿ ಎಂದರು. ಆಗ ಸಿದ್ದರಾಮಯ್ಯನವರು ಕೂಡ, ಏನು ಆಗುತ್ತೋ ಆಗ್ಲಿ ಎಂದು ಗುಡುಗಿದ್ದರು.

Share This Article
Facebook Whatsapp Whatsapp Telegram
Previous Article Renukacharya Savadi ಲಕ್ಷ್ಮಣ ಸವದಿ ಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ: ರೇಣುಕಾಚಾರ್ಯ ಕಿಡಿ
Next Article DKshi Fan ಡಿಕೆಶಿ ಸಿಎಂ ಆಗೋವರೆಗೂ ಮದ್ವೆಯಾಗಲ್ಲ: ಅಭಿಮಾನಿ ಶಪಥ

Latest Cinema News

Pawan Kalyan 4
ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ ಪವನ್ ಕಲ್ಯಾಣ್
Cinema Latest Top Stories
Darshan vijayalakshmi 1
ದರ್ಶನ್ ಜೊತೆ ಥಾಯ್ಲೆಂಡ್ ಪ್ರವಾಸದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ
Cinema Latest Sandalwood
Bigg Boss Kannada 12
ಬಿಗ್‌ಬಾಸ್ ಮನೆಯಲ್ಲಿ ಜಗಳ ಕಿಕ್‌ಸ್ಟಾರ್ಟ್ – ಗಿಲ್ಲಿ ನಟ ತರಾಟೆಗೆ ತೆಗೆದುಕೊಂಡ ಅಶ್ವಿನಿ ಗೌಡ
Cinema Latest Sandalwood Top Stories TV Shows
Yashwant Sardeshpande
ಯಶವಂತ್ ಸರದೇಶಪಾಂಡೆ ಅವರಿಗೆ ಸ್ಯಾಂಡಲ್‌ವುಡ್ ಗಣ್ಯರ ನಮನ
Cinema Karnataka Latest Top Stories
Actor Vijay
ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ
Cinema Latest Main Post National South cinema

You Might Also Like

Bengaluru Koramangala Under Cinstruction Building Land slide
Bengaluru City

ಬೆಂಗಳೂರು | ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮಣ್ಣು ಕುಸಿದು ಇಬ್ಬರು ಸಾವು

14 minutes ago
DK Shivakumar 7
Bengaluru City

ಡಿಸಿಎಂ ಸಿಟಿ ರೌಂಡ್ಸ್ – ಗುಂಡಿ, ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಿಸಿದ ಡಿಕೆಶಿ

53 minutes ago
ELECTION COMMISSION OF INDIA
Latest

ಬಿಹಾರ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಡಿಲೀಟ್ – ಅಂತಿಮ ಪಟ್ಟಿ ರಿಲೀಸ್

1 hour ago
CHIDAMBARAM
Latest

ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ

1 hour ago
DK Shivakumar
Bengaluru City

ನಾನು ಜೈಲಿಗೆ ಹೋಗ್ತೀನಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ, ಇದಕ್ಕೆ ಕೊನೆ ಹಾಡಲೇಬೇಕು: ಡಿಕೆಶಿ

1 hour ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?