Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ

Public TV
Last updated: January 28, 2023 10:30 pm
Public TV
Share
4 Min Read
CT Ravi
SHARE

ಬೆಂಗಳೂರು: ಗುಜರಾತ್ ಗಲಭೆ ಕುರಿತ ಬಿಬಿಸಿ (BBC) ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ‌ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಸಿ.ಟಿ ರವಿಯವರು, ಈಗ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಭಾರತ ಸರ್ಕಾರ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿದೆ.‌ ಆದರೂ ಕೇರಳ, ದೆಹಲಿ ಸೇರಿ ಕೆಲ ರಾಜ್ಯಗಳು ಅದನ್ನು ಡೌನ್‌ಲೋಡ್ ಮಾಡಿ ತೋರಿಸುತ್ತಿವೆ. ಈ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ. ಮೋದಿ (Narendra Modi) ಯಶಸ್ಸು ಸಹಿಸದವರ ಪಿತೂರಿ ಇದಾಗಿದೆ. ಇಂಥ ಪಿತೂರಿ ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ. ಸಾಕ್ಷ್ಯಚಿತ್ರದ ಹಿಂದೆ ಕಾಂಗ್ರೆಸ್‌ನವರೂ ಇದ್ದಾರೆ ಎಂದು ಆರೋಪಿಸಿದರು.

Narendra Modi 1 2

ಕಾಂಗ್ರೆಸ್‌ನವರು ನಿರಂತರವಾಗಿ ಹತಾಶೆಗೊಂಡಿದ್ದಾರೆ. ತುಕ್ಡೇ ಗ್ಯಾಂಗ್, ಮೋದಿ ರಾಜಕೀಯ ವಿರೋಧಿಗಳ ಜತೆ ಕಾಂಗ್ರೆಸ್‌ನವರು ಶಾಮೀಲಾಗಿದ್ದಾರೆ. ಮೋದಿ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಗೆ ಕಾಂಗ್ರೆಸ್‌ನವರು ಸಹ ಕೈ ಜೋಡಿಸಿದ್ದಾರೆ. ಮೋದಿಯವರು ಅತ್ಯಂತ ಲೋಕಪ್ರಿಯ ನಾಯಕ ಅಂತ ಹಲವು ಸರ್ವೇ ಹೇಳಿವೆ. ಕೋವಿಡ್ ಲಸಿಕೆ, ಯೋಗ ಮೂಲಕ ಭಾರತದ ಲೋಕಪ್ರಿಯತೆಯನ್ನು ಜಗತ್ತಿಗೆ ತೋರಿಸಿದ್ದಾರೆ. ಈಗ ಸಾಕ್ಷ್ಯಚಿತ್ರಕ್ಕೆ ಆ್ಯಂಟಿ ಮೋದಿ ಗ್ಯಾಂಗ್‌ಗಳ ಸಹಕಾರ ಪಡೆಯಲಾಗಿದೆ ಎಂದು ಹೇಳಿದರು.

CONGRESS

ನಾನಾವತಿ ಆಯೋಗ, ಷಾ ಕಮಿಟಿಗಳ ವರದಿಯನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಿಲ್ಲ.‌ ಗಲಭೆಯಲ್ಲಿ ಮೋದಿಯವರ ಪಾತ್ರ ಇಲ್ಲ ಅಂತ ಸಾಬೀತಾದ‌ ಮೇಲೂ ಪಿತೂರಿ ಮಾಡಲಾಗುತ್ತಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರ ಇಲ್ಲ ಅಂತ ಕ್ಲೀನ್ ಚಿಟ್ ಕೊಟ್ಟಿತ್ತು.‌ ಇಷ್ಟಾದರೂ ಈಗ ಈ ಸಾಕ್ಷ್ಯಚಿತ್ರ ತಂದಿರುವುದರ ಹಿಂದಿನ ಉದ್ದೇಶ ಅರ್ಥ ಮಾಡ್ಕೋಬೇಕು.‌ ಆ್ಯಂಟಿ ಮೋದಿ ಗ್ಯಾಂಗ್, ರಾಜಕೀಯ ವಿರೋಧಿಗಳು, ತುಕ್ಡೇ ಗ್ಯಾಂಗ್ ಸೇರಿ ರೂಪಿಸಿಸಿರುವ ಪಿತೂರಿ ಇದು. ವಿದೇಶಿಯರು ಭಾರತದ ಹೆಸರು ಹಾಳಾಗಬೇಕು ಅಂತ ಕಾಯುತ್ತಿದ್ದಾರೆ.‌ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ಮೋದಿ ಉತ್ತಮ ಬಾಂಧವ್ಯ, ಸಹಕಾರ ಸಂಬಂಧ ಹೊಂದಿದ್ದಾರೆ. ಭಾರತದ ಜತೆಗೂ ಸಂಬಂಧ ಉತ್ತಮವಾಗಿದೆ. ಇದನ್ನು ಕೆಲವು ಜಾಗತಿಕ ಶಕ್ತಿಗಳು ಸಹಿಸಿಕೊಳ್ಳುತ್ತಿಲ್ಲ. ‌ಭಾರತದ ಶಕ್ತಿವೃದ್ಧಿ ಸಹಿಸದ ಅಂತರಾಷ್ಟ್ರೀಯ ಶಕ್ತಿಗಳ ಜತೆ ನಮ್ಮ ತುಕ್ಡೇ ಗ್ಯಾಂಗ್, ಆ್ಯಂಟಿ ಮೋದಿ ಟೀಂ ಸೇರಿ ಪಿತೂರಿ ಹೆಣೆಯಲಾಗಿದೆ ಎಂದು ತಿಳಿಸಿದರು.

MOdi BBC

ಆ ಸಾಕ್ಷ್ಯ ಚಿತ್ರ ನಾನು ನೋಡಿಲ್ಲ. ಆದರೆ ನಾನು ತಿಳಿದುಕೊಂಡ ಪ್ರಕಾರ ಆ ಸಾಕ್ಷ್ಯಚಿತ್ರದಲ್ಲಿ ಮಾತಾಡ್ಸಿರೋದೆಲ್ಲ ಈ ತುಕ್ಡೇ ಗ್ಯಾಂಗ್‌ನವರನ್ನೇ ಎಂದು ಹೇಳಿದರು.

ಗೋವಾ ಮಾಜಿ ಸಚಿವನ ಹೇಳಿದ್ರು ಅಂತ ನಾವು ದುರ್ಯೋಧನ ಆಗ್ತೀವಾ?: ಕರ್ನಾಟಕವನ್ನು ದುರ್ಯೋಧನನಿಗೆ ಹೋಲಿಸಿದ ಗೋವಾ ಬಿಜೆಪಿಯ ಮಾಜಿ ಸಚಿವ ದಯಾನಂದ ಮಾಂಡ್ರೇ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಮಹದಾಯಿ ಯೋಜನೆ ವಿಚಾರದಲ್ಲಿ ಗೋವಾದವರ ಆತಂಕ ದೂರ ಮಾಡಬೇಕು. ಮಹದಾಯಿ ನದಿಯೇ ಬತ್ತಿ‌ ಹೋಗ್ತಿದೆ ಅಂತ ಅಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ ಇದು ಸುಳ್ಳು, ಹಾಗಿಲ್ಲ ಪರಿಸ್ಥಿತಿ. ನಾವು ಕುಡಿಯುವ ನೀರಿಗೆ ಮಾತ್ರ ಮಹದಾಯಿ ಯೋಜನೆಗೆ ಮುಂದಾಗಿದ್ದೇವೆ. ಇದನ್ನು ಗೋವಾದವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಬಿಜೆಪಿ ಮಾಜಿ ಸಚಿವ ಮಾಂಡ್ರೇ ಅವರು ದುರ್ಯೋಧನ ಅಂತ ಹೇಳಿದ್ದಾರೆ ಅಂದ್ರೆ ನಾವು ದುರ್ಯೋಧನ ಆಗ್ತೀವಾ? ದುರ್ಯೋಧನ ಆಗಲು ಸಾಧ್ಯನಾ? ಗೋವಾದವರಿಗೆ ಮಹದಾಯಿಯಿಂದ ತೊಂದರೆ ಆಗಲ್ಲ, ಅವರಿಗೆ ಏನೂ ಭಯ ಬೇಡ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ವಿದ್ಯಮಾನ ಗಂಭೀರ ಅಲ್ಲ: ಮಂಡ್ಯದಲ್ಲಿ ಅಶೋಕ್ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರವಾಗಿ ಮಾತಾಡಿದ ಸಿ ಟಿ ರವಿ, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾರೋ ವಿರೋಧಿಸ್ತಾರೆ ಅಂದ್ರೆ ಅದನ್ನು ಗಂಭೀರವಾಗಿ ಪರಿಗಣಿಸೋದು ಬೇಡ. ಯಾರು ಇದ್ದಾರೆ ಇದರ ಹಿಂದೆ, ಹಿನ್ನೆಲೆ ಏನು ಅಂತ ನಾವೂ ಯೋಚನೆ ಮಾಡುತ್ತೇವೆ.‌ ನಮಗೆ ಯಾವ ಒಳ ಒಪ್ಪಂದವೂ ಯಾರ ಜತೆಗೂ ಇಲ್ಲ. ಅಶೋಕ್ ಅವರಿಗೆ ವಿರೋಧ ಬರುತ್ತಿದೆ ಅನ್ನೋದಕ್ಕಿಂತ ಅವರನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತವನ್ನೂ ಮಂಡ್ಯ ಕಾರ್ಯಕರ್ತರು ಮಾಡಿಕೊಂಡರು. ಆ ಸ್ವಾಗತವನ್ನೂ ನಾವು ನೋಡಿದ್ದೇವೆ ಎಂದು ಹೇಳಿದರು.

ಪಕ್ಷದ ನೀತಿ, ಸಿದ್ಧಾಂತ ಕೆಲವರಿಗೆ ಅರ್ಥವಾಗೋದು ನಿಧಾನ: ಬೆಳಗಾವಿ ಬಣ ಸಂಘರ್ಷಕ್ಕೆ ತೆರೆ ಎಳೆಯಲು ಇಂದು (ಶನಿವಾರ) ರಾತ್ರಿ ಅಮಿತ್ ಶಾ ಸಭೆ ಕರೆದ ಬಗ್ಗೆ ಮಾತಾಡಿದ ಅವರು, 2006ರವರೆಗೂ ನಮ್ಮ ಪಕ್ಷ ನೀತಿ ಅವಲಂಬಿಸಿತ್ತು. ಆ ನಂತರ ಜಾತಿ ಪ್ರಭಾವ ಹೆಚ್ಚಾಯ್ತು, ಉಪ ಜಾತಿಗಳ ಪ್ರಭಾವ ಹೆಚ್ಚಾಯ್ತು. ಆಮೇಲೆ ವ್ಯಕ್ತಿ ಕೇಂದ್ರಿತ ರಾಜಕಾರಣ ಬಂತು. ಈ ಎಲ್ಲ ನೀತಿಗೆ ಕೆಲವರನ್ನು ತಯಾರು ಮಾಡ್ಬೇಕಾಗುತ್ತೆ. ಕೆಲವರಿಗೆ ನಮ್ಮ ಪಕ್ಷದ ನೀತಿ ಸಿದ್ಧಾಂತಗಳನ್ನು ಅರ್ಥ ಮಾಡಿಸಬೇಕಾಗುತ್ತೆ. ಇದರಲ್ಲಿ ‌ಅವು ಯಶಸ್ವಿಯಾಗುವ ವಿಶ್ವಾಸ ಇದೆ. ನಮಗೆ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ರಾಜಕಾರಣ ಅಗತ್ಯ. ವ್ಯಕ್ತಿಗತ ಹಿತಾಸಕ್ತಿಯ ರಕ್ಷಣೆಯೂ ಇದರಿಂದ ಆಗುತ್ತದೆ. ಪಕ್ಷದ ನೀತಿ ಸಿದ್ಧಾಂತಗಳನ್ನು ಕೆಲವರು ಬೇಗ ಅರ್ಥ ಮಾಡ್ಕೋತಾರೆ, ಕೆಲವರು ನಿಧಾನ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಮಾತಾಡಿದರು.‌

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Facebook Whatsapp Whatsapp Telegram
Previous Article Twitter ಟ್ಟಿಟ್ಟರ್‌ ಬಳಕೆದಾರರು ಖಾತೆ ಅಮಾನತಿಗೆ ಮನವಿ ಮಾಡಲು ಅವಕಾಶ – ಫೆ.1ರಿಂದ ಜಾರಿ
Next Article Hanumanth Rao Sarathi Sukhoi, Mirage Fighter Jets Crash: ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ

Latest Cinema News

Ilaiyaraja Mookambika Temple Kolur
ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ
Cinema Districts Karnataka Latest Top Stories Udupi
ramesh aravind 1
ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್
Bengaluru City Cinema Latest Sandalwood Top Stories
darshan 4
ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?
Cinema Latest Sandalwood Top Stories
dhruva sarja
3.15 ಕೋಟಿ ವಂಚನೆ ಆರೋಪ ಪ್ರಕರಣ – ನಟ ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್‌
Cinema Court Latest Sandalwood Top Stories
Darshan Tharun Sudhir
ದರ್ಶನ್ ಆ ನಿರ್ಧಾರ ಮಾಡ್ತಾರೆ ಅಂದ್ರೆ ಅದೆಷ್ಟು ನೊಂದಿರಬೇಡ: ಆಪ್ತ ತರುಣ್ ಸುಧೀರ್ ಬೇಸರ
Cinema Latest Sandalwood Top Stories

You Might Also Like

Abhishek Sharma Asia Cup
Cricket

ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿದ ಟೀಂ ಇಂಡಿಯಾ – ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

1 hour ago
team india T20
Cricket

ಕುಲ್ದೀಪ್‌, ದುಬೆ ಮಿಂಚು; 57 ರನ್‌ಗೆ ಯುಎಇ ಆಲೌಟ್ – ಟಿ20 ಇತಿಹಾಸದಲ್ಲೇ ಕೆಟ್ಟ ದಾಖಲೆ

1 hour ago
Dr. Dinesh Jayadeva Hospital
Bengaluru City

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ. ಬಿ.ದಿನೇಶ್‌ ಅಧಿಕಾರ ಸ್ವೀಕಾರ

3 hours ago
Nepal Tribhuvan Airport
Latest

ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

3 hours ago
Varun Tej and Lavanya Tripathi welcome baby boy
Cinema

ಮೆಗಾಸ್ಟಾರ್ ಕುಟುಂಬದಲ್ಲಿ ಹೊಸ ಸ್ಟಾರ್ ಜನನ

4 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?