ನವದೆಹಲಿ: ಕ್ರಿಪ್ಟೋ ಕರೆನ್ಸಿ ವಿವಾದ ಹೆಚ್ಚಾಗ್ತಿರುವಾಗಲೇ ಕೇಂದ್ರದ ಸಂಸದೀಯ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಬೇಡ. ಬದಲಿಗೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ತನ್ನಿ ಅಂತ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಂಸದ ಜಯಂತ್ ಸಿನ್ಹಾ ನೇತೃತ್ವದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧ ಮೊದಲ ಸಭೆ ನಡೀತು. ಕೈಗಾರಿಕೋದ್ಯಮಿಗಳು, ತಜ್ಞರು ಭಾಗಿಯಾಗಿದ್ದರು. ಈ ವೇಳೆ, ಡಿಜಿಟಲ್ ಕರೆನ್ಸಿಯನ್ನು ಸ್ಥಗಿತಗೊಳಿಸಲು ಆಗಲ್ಲ, ನಿಯಂತ್ರಿಸಬಹುದು ಅನ್ನೊ ಒಮ್ಮತಕ್ಕೆ ಬರಲಾಯಿತು. ಆದರೆ, ಇದನ್ನು ನಿಯಂತ್ರಿಸೋದು ಯಾರು ಅನ್ನೋದರ ಬಗ್ಗೆ ಸ್ಪಷ್ಟ ನಿಲುವು ಮೂಡಲಿಲ್ಲ. ಪತ್ರಿಕೆಗಳಲ್ಲಿ ಫುಲ್ ಪೇಜ್ ಕ್ರಿಪ್ಟೋ ಕರೆನ್ಸಿಯ ಜಾಹೀರಾತು ಪ್ರಕಟವಾಗ್ತಿದೆ ಅಂತ ಸಂಸದರೊಬ್ಬರು ಸಭೆಯಲ್ಲಿ ಆಕ್ಷೇಪಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕರನ್ನು ದುಡ್ಡಿಗೆ ಖರೀದಿಸಿ ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿದೆ: ಎಚ್ಡಿಕೆ
ತಜ್ಞರು ಮಾತ್ರ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಿಗೆ ಒಂದು ರೀತಿಯ ಪ್ರಜಾಪ್ರಭುತ್ವ ಇದ್ದಂತೆ ಅಂತ ಅಭಿಪ್ರಾಯ ಮಂಡಿಸಿದ್ರು. ಹೀಗಾಗಿ, ನಿಯಂತ್ರಣ ಕ್ರಮಗಳಿಗೆ ಮುನ್ನ ಅಧಿಕಾರಿಗಳು ಹಾಜರಾಗಿ ತಮ್ಮ ನಿರ್ಧಾರ ತಿಳಿಸಬೇಕು ಅಂತ ಕೇಂದ್ರಕ್ಕೆ ಮಂಡಳಿ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ಪರಾಮರ್ಶೆ ನಡೆಸಿದರು. ಈ ಬೆನ್ನಲ್ಲೇ ಇವತ್ತು ಹಣಕಾಸು ಇಲಾಖೆ ಮೇಲಿನ ಸಂಸದೀಯ ಮಂಡಳಿ ಸಭೆ ನಡೆಸಿದೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ