ಯಾದಗಿರಿ: ಮೀನುಗಾರನೊಬ್ಬ ಮೊಸಳೆ ಬಾಯಿಗೆ ಸಿಲುಕಿ ಪಾರಾದ ಘಟನೆ ಯಾದಗಿರಿ ಜಿಲ್ಲೆಯ ಯಮನೂರಿನಲ್ಲಿ ನಡೆದಿದೆ.
ಜಟ್ಟೆಪ್ಪ ನಾಗಪ್ಪ (40) ಕೃಷ್ಣಾ ನದಿಯಲ್ಲಿ ಮೊಸಳೆಯೊಂದಿಗೆ ಸೆಣಸಾಡಿದ ಮೀನುಗಾರ. ನಾಗಪ್ಪ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ದಡದ ಸಮೀಪವಿದ್ದ ಮೊಸಳೆಯೊಂದು ನಾಗಪ್ಪ ಎಡಗಾಲನ್ನು ಕಚ್ಚಿ ಹಿಡಿಯಿತು. ಇದಕ್ಕೆ ದೃತಿಗೆಡದ ಜಟೆಪ್ಪ, ಭಾರೀ ಸಾಹಸದಿಂದ ಅದರ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.
- Advertisement 2
- Advertisement 3
ತೀವ್ರವಾಗಿ ಗಾಯಗೊಂಡ ನಾಗಪ್ಪ ಅವರನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕಾಲಿಗೆ 16 ಹೊಲಿಗೆ ಹಾಕಲಾಗಿದೆ. ಇನ್ನೂ ಇತ್ತೀಚೆಗೆ ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
- Advertisement 4
ನದಿಗಿಳಿಯುವ ಮೀನುಗಾರು, ನದಿ ದಾಟುವವರ ಮೇಲೆ ಮೊಸಳೆಗಳು ದಾಳಿ ನಡೆಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.