ಮಣ್ಣಿನಲ್ಲಿ ವಿಶ್ವಕಪ್ ಕಲಾಕೃತಿ ರಚಿಸಿ ಭಾರತ ತಂಡಕ್ಕೆ ಕಲಾವಿದ ವಿಶ್

Public TV
1 Min Read
DHRWAD WORLDCUP 1

ಧಾರವಾಡ: ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ (IND Vs AUS) ತಂಡದ ನಡುವೆ 2023ರ ವಿಶ್ವಕಪ್ (World Cup 2023) ಫೈನಲ್ ಪಂದ್ಯಾವಳಿ ನಡೆಯಲಿದ್ದು, ಇದಕ್ಕಾಗಿ ಧಾರವಾಡದ ಕಲಾವಿದರೊಬ್ಬರು ಭಾರತ ತಂಡಕ್ಕೆ ವಿಶಿಷ್ಟವಾಗಿ ಶುಭ ಹಾರೈಸಿದ್ದಾರೆ.

DHRWAD WORLDCUP 2

ಧಾರವಾಡದ ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ ಅವರು 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್ ಅನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನಸೆಳೆಯುವುದರ ಮೂಲಕ ಭಾರತ ತಂಡಕ್ಕೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.

ಥೇಟ್ ವಿಶ್ವಕಪ್‍ನಂತೆಯೇ ಮಣ್ಣಿನಲ್ಲಿ ತಯಾರಿಸಿರುವ ಕಲಾವಿದ ಮಂಜುನಾಥ್, ಗೆದ್ದು ಬಾ ಟೀಂ ಇಂಡಿಯಾ ಎಂದು ಹೇಳುವ ಮೂಲಕ ಭಾರತ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

DHRWAD WORLDCUP

ಅಹಮ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾನುವಾರ ನಡೆಯಲಿರುವ ವಿಶ್ವಕಪ್ 2023ರ (World Cup 2023) ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮಾರ್ಲೆಸ್‍ ಸಾಕ್ಷಿಯಾಗಲಿದ್ದಾರೆ.

Share This Article