ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

Public TV
1 Min Read
vlcsnap 2021 10 28 07h42m35s68 Copy

ದಾವಣಗೆರೆ: ಪ್ರೀತಿಯಿಂದ ಸಾಕಿ ಸಲಹಿದ್ದ ಜಾನುವಾರುಗಳು ಶಾರ್ಟ್ ಸರ್ಕ್ಯೂಟ್ ಗೆ ಬಲಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ನವಲೇಹಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಹಸು ಹಾಗೂ ಎಮ್ಮೆ ಮಂಜುನಾಥ್ ಎಂಬವರಿಗೆ ಸೇರಿದ್ದಾಗಿವೆ.

DVG 1

ಮಂಜುನಾಥ್ ಕುಟುಂಬ ಹಸುಗಳನ್ನು ಕೊಟ್ಟಿಗೆಯಲ್ಲಿ ಬಿಟ್ಟು ಊರಿಗೆ ಹೋಗಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ 1 ಲಕ್ಷ 40 ಸಾವಿರ ಬೆಲೆಯ 2 ಜರ್ಸಿ ಆಕಳು, 10 ಸಾವಿರ 1 ಕರು, 50 ಸಾವಿರದ 1 ಎಮ್ಮೆ ಸಾವನ್ನಪ್ಪಿವೆ. ಇದನ್ನೂ ಓದಿ: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ

ಊರಿಂದ ವಾಪಸ್ ಬರುವಷ್ಟರಲ್ಲಿ ಎಮ್ಮೆ ಹಾಗೂ ಹಸು ಕೊಟ್ಟಿಗೆಯಲ್ಲಿ ಸತ್ತು ಬಿದ್ದಿದ್ದವು. ಪ್ರೀತಿಯಿಂದ ಸಾಕಿದ್ದ ಜಾನುವಾರು ಸಾವು ಕಂಡು ಮಂಜುನಾಥ್ ಕುಟುಂಬ ಕಣ್ಣೀರಿಟ್ಟಿದೆ.

vlcsnap 2021 10 28 07h42m26s241 Copy

Share This Article
Leave a Comment

Leave a Reply

Your email address will not be published. Required fields are marked *