-ಬೈಕ್ ದಾಖಲಾತಿಗಳಿಂದ ಯುವಕನ ಗುರತು ಪತ್ತೆ
ಲಕ್ನೋ: ಯುವ ಪ್ರೇಮಿಗಳು ಕೈ-ಕೈ ಹಿಡಿದುಕೊಂಡು ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೇಥಿ ಜಿಲ್ಲೆಯ ದೇವಿಪಾಟ್ನಾ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಯುವಕ-ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳದ ಸಮೀಪದಲ್ಲಿ ಬೈಕ್ ಪತ್ತೆಯಾಗಿದೆ. ಅದರಲ್ಲಿ ಕೆಲ ದಾಖಲೆಗಳಿಂದ ಯುವಕನ ಗುರುತು ಪತ್ತೆಯಾಗಿದೆ. ಮೃತ ಯುವಕನನ್ನು ಸಂಗ್ರಮಾಪುರದ ಅರ್ಜುನ್ ಕುಮಾರ್ ಎಂದು ಗುರುತಿಸಲಾಗಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ರೈಲ್ವೇ ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ ಗೌರಿಗಂಜ್ ನಿಂದ ಪ್ರತಾಪಗಢಕ್ಕೆ ಗೂಡ್ಸ್ ರೈಲು ಹೊರಟಿತ್ತು. ರೈಲು ಬರೋವರೆಗೂ ಟ್ರ್ಯಾಕ್ ಪಕ್ಕವೇ ನಿಂತಿದ್ದ ಜೋಡಿ, ಟ್ರೈನ್ ಸಮೀಪಿಸುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದರು ಎಂದು ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ. ಅಮೇಥಿ ರೈಲ್ವೇ ನಿಲ್ದಾಣದ ಸಿಬ್ಬಂದಿಗೆ ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ.