ಸಾಬೀತಾಯ್ತು ಗೋಲ್ಮಾಲ್- ಕೃಷ್ಣಮಠದ ಪಾರ್ಕಿಂಗ್ ವ್ಯವಹಾರ ಅಧಿಕಾರ ಶೀರೂರು ಸ್ವಾಮೀಜಿಗೆ

Public TV
3 Min Read
udp MataParkingGolmal

ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಗೋಲ್ಮಾಲ್ ವಿರುದ್ಧ ಕಳೆದ ಕೆಲವು ದಿನಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಿಡಿದೆದ್ದಿದ್ದರು. ಅಲ್ಲದೇ ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಜೆಸಿಬಿ ತಂದು ಒಡೆಸಿದ್ದರು. ಆದರೆ ಇದೀಗ ಪೇಜಾವರ ಶ್ರೀಗಳ ಆಪ್ತರು ಈ ಅಕ್ರಮದ ಹಿಂದೆ ಇದ್ದಾರೆ ಎಂದು ಸಾಬೀತಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಶೀರೂರು ಸ್ವಾಮೀಜಿ ಪಾಲಾಗಿದೆ.

ಪೇಜಾವರ ಮಠದಲ್ಲಿ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ನಡೆದಿದೆ. ಅಷ್ಟಮಠಾಧೀಶರ ಅಭಿಪ್ರಾಯದಂತೆ ಶೀರೂರು ಸ್ವಾಮೀಜಿಗೆ ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಕೊಡಲಾಗಿದೆ. ಪಾರ್ಕಿಂಗ್ ಶುಲ್ಕ ಸಂಗ್ರಹ ಹಾಗೂ ಸ್ಥಳದ ಕಟ್ಟಡಗಳ ವ್ಯವಹಾರ ಎಲ್ಲವನ್ನೂ ಶೀರೂರು ಸ್ವಾಮೀಜಿ ನೋಡಿಕೊಳ್ಳಬೇಕು ಎಂದು ಅಷ್ಟಮಠಗಳ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ.

udp MataParkingGolmal 5

ಪಾರ್ಕಿಂಗ್ ರಸೀದಿ ಪುಸ್ತಕವನ್ನು ನಕಲು ಮಾಡಿದ್ದು, ಒಂದೇ ಸಂಖ್ಯೆ ಇರುವ ಪುಸ್ತಕಗಳು ತಪಾಸಣೆ ವೇಳೆ ಲಭ್ಯವಾಗಿದೆ. ಹೀಗಾಗಿ ಪಾರ್ಕಿಂಗ್ ನಲ್ಲಿ ನಡೆದ ಅವ್ಯವಹಾರವನ್ನು ಶೀರೂರು ಸ್ವಾಮೀಜಿ ಪೇಜಾವರ ಶ್ರೀಗಳ ಗಮನಕ್ಕೆ ತಂದಿದ್ದಾರೆ. ಆರೋಪ ಸಾಬೀತಾಗಿರುವುದರಿಂದ ಅಧಿಕಾರವನ್ನು ಶೀರೂರು ಸ್ವಾಮೀಜಿಗೆ ನೀಡಲಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಜೊತೆ ರಥಬೀದಿಯ ಆಸುಪಾಸಿನ ಅಂಗಡಿಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಶಿಫ್ಟ್ ಮಾಡುವ ಕನಸಿದೆ ಎಂದು ಶೀರೂರು ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಪೇಜಾವರ ಶ್ರೀ ಹಾಗೂ ಪರ್ಯಾಯ ಪಲಿಮಾರು ಸ್ವಾಮೀಜಿ ಸಹಿತ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠ ಪರಿಸರ ಸೇವಾ ಪ್ರತಿಷ್ಠಾನದ ಸಭೆ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ನಡೆಯಿತು.

udp MataParkingGolmal 8

ಸಭೆಯ ಬಳಿಕ ಮಾತನಾಡಿದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ಟ್ರಸ್ಟ್ ವತಿಯಿಂದ ಪಾರ್ಕಿಂಗ್ ಹಣ ಸಂಗ್ರಹ ಉಸ್ತುವಾರಿಯಾಗಿ ಉದಯ ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡಲಾಗಿತ್ತು. ಅವರು ಒಂದೇ ರೀತಿಯ ನಂಬರ್ ಇರುವ ಎರಡು ರಶೀದಿ ಪುಸ್ತಕಗಳನ್ನು ಇಟ್ಟುಕೊಂಡು ಪಾರ್ಕಿಂಗ್ ಹಣ ಸಂಗ್ರಹಿಸಿ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಶೀರೂರು ಸ್ವಾಮೀಜಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉದಯ ಅವರನ್ನು ಆ ಜವಾಬ್ದಾರಿಯಿಂದ ತೆಗೆದುಹಾಕಿದ್ದೇವೆ. ಅವರ ಬದಲು ಪಾರ್ಕಿಂಗ್ ಹಣ ಸಂಗ್ರಹದ ಜವಾಬ್ದಾರಿಯನ್ನು ಶೀರೂರು ಶ್ರೀಗಳಿಗೆ ವಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಪಾರ್ಕಿಂಗ್ ಪ್ರದೇಶದಲ್ಲಿರುವ ವಿಷ್ಣುಮೂರ್ತಿ ಅವರ ಎರಡು ಅಂಗಡಿಗಳಿಗೆ ಮಠಾಧೀಶರ ವಿರೋಧ ಇರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಅದೇ ರೀತಿ ಬೇರೆ ಅಂಗಡಿಗಳನ್ನು ಕೂಡ ತೆರವುಗೊಳಿಸಬೇಕು ಎಂಬುದು ಶೀರೂರು ಸ್ವಾಮೀಜಿಗಳ ಅಪೇಕ್ಷೆ. ಅದಕ್ಕೆ ನಾವು ಎಲ್ಲ ಒಪ್ಪಿಗೆ ಕೊಟ್ಟಿದ್ದೇವೆ ಎಂದರು.

udp MataParkingGolmal 6

ಕಳೆದ ಪರ್ಯಾಯ ಅವಧಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಮಠಕ್ಕೆ ಯಾವುದೇ ನಷ್ಟ ಆಗಿಲ್ಲ. ಅದಕ್ಕಿಂತ ಹೆಚ್ಚಿನ ಪಾಲು ಹಣವನ್ನು ನಾವು ಟ್ರಸ್ಟ್‍ಗೆ ಕೊಟ್ಟಿದ್ದೇವೆ. 50 ಲಕ್ಷ ರೂ. ಯಾತ್ರಿ ನಿವಾಸಕ್ಕೆ ಮತ್ತು 2.5 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ಕಟ್ಟಡವನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿದ್ದೇವೆ. ಹಾಗಾಗಿ ಟ್ರಸ್ಟ್‍ಗೆ ನಮ್ಮಿಂದ ಯಾವುದೇ ರೀತಿಯ ಅನ್ಯಾಯ ಆಗಲಿ, ನಷ್ಟ ಆಗಲಿ ಆಗಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.

ಇದು ಶ್ರೀ ಕೃಷ್ಣ ಮಠದ ಭಕ್ತರಿಗಾಗಿ ಮಾಡಿರುವ ಹೋರಾಟ. ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ರಥಬೀದಿ ಹಾಗೂ ಕೃಷ್ಣ ಮಠದ ಪರಿಸರ ವಾಹನ ಮುಕ್ತ ಹಾಗೂ ವಾಣಿಜ್ಯ ಮುಕ್ತ ಆಗಬೇಕು. ಆದರೆ ಕೆಲವರು ಅದನ್ನು ಹಾಳು ಮಾಡುವ ಯತ್ನ ಮಾಡುತ್ತಿದ್ದಾರೆ. ಈ ಕುರಿತು ಪೇಜಾವರ ಶ್ರೀಗಳಿಗೆ ಎಲ್ಲ ರೀತಿಯ ಆಧಾರಗಳನ್ನು ನೀಡಿದ್ದೇನೆ. ಮುಂದೆ ಪಾರ್ಕಿಂಗ್ ಪ್ರದೇಶದಲ್ಲಿ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆ ಹಾಗೂ ವಾಣಿಜ್ಯ ಅಂಗಡಿಗಳನ್ನು ಮಾಡಲಾಗುವುದು ಎಂದರು.

ಮಠಗಳ ವತಿಯಿಂದ ಖರೀದಿಸಲಾದ ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಶೀರೂರು ಶ್ರೀ ತಿಳಿಸಿದರು. ಸಭೆಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾಲ್ಲಭ ತೀರ್ಥ ಸ್ವಾಮೀಜಿ ಹಾಜರಿದ್ದರು.

udp MataParkingGolmal 4

udp MataParkingGolmal 3

udp MataParkingGolmal 2

udp ShirooruGarjane 2

udp ShirooruGarjane 2

udp ShirooruGarjane 1

udp ShirooruGarjane 3

udp ShirooruGarjane 4

udp ShirooruGarjane 5

udp ShirooruGarjane 6

udp ShirooruGarjane 7

udp ShirooruGarjane 8

udp ShirooruGarjane 9

udp ShirooruGarjane 10

udp ShirooruGarjane 11

udp ShirooruGarjane 12

udp ShirooruGarjane 13

udp ShirooruGarjane 1

Share This Article
Leave a Comment

Leave a Reply

Your email address will not be published. Required fields are marked *