ದಾವಣಗೆರೆ: ಯುವತಿಗೊಬ್ಬಳಿಗಾಗಿ ಕಾರ್ಪೋರೇಟರ್ ಮಗ ತನ್ನ ಸ್ನೇಹಿತನಿಗೆ ಚಾಕುವಿಂದ ಇರಿದು ಅಟ್ಟಹಾಸ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಕೆಟಿಜೆ ನಗರದ ನಿವಾಸಿಗಳಾದ ಹರೀಶ್ ಹಾಗೂ ರಾಕೇಶ್ ಸ್ನೇಹಿತರಾಗಿದ್ದು, ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಅತೀ ರೇಕಕ್ಕೆ ಹೋಗಿದ್ದು, ಕಾರ್ಪೋರೇಟರ್ ಪುತ್ರ ರಾಕೇಶ್ ಸ್ನೇಹಿತ ಹರೀಶ್ ಗೆ ನಡುಬೀದಿಯಲ್ಲಿ ಚಾಕು ಹಾಕಿದ್ದಾನೆ.
ಹರೀಶ್ ಎದೆ ಮತ್ತು ತಲೆ ಭಾಗಕ್ಕೂ ಪೆಟ್ಟು ಬಿದ್ದಿದೆ. ತಕ್ಷಣ ಗಾಯಾಳು ಹರೀಶ್ ನನ್ನು ಸಮೀಪದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಾಕೇಶ್ ಮತ್ತು ಹರೀಶ್ ಇಬ್ಬರು ಯುವತಿಯ ಸ್ನೇಹಿತರಾಗಿದ್ದು, ಇತ್ತೀಚೆಗೆ `ಡೇಂಜರ್ಸ್ ಗರ್ಲ್’ ಎಂಬ ವಿಡಿಯೋ ಆಲ್ಬಂ ಸಾಂಗ್ ಶೂಟ್ ಮಾಡಿದ್ದರು.
ಆಲ್ಬಂ ಶೂಟಿಂಗ್ ನಡೆದ ನಂತರ ರಾಕೇಶ್ ಮತ್ತು ಯುವತಿ ನಡುವೆ ಪ್ರೇಮಾಂಕುರ ಇತ್ತು. ಇತ್ತ ಹರೀಶ್ ಕೂಡ ಯುವತಿ ಜೊತೆ ಕ್ಲೋಸ್ ಆಗಿ ಇದ್ದ ಕಾರಣ ರಾಕೇಶ್ ಅನುಮಾನಗೊಂಡು ಹರೀಶ್ ಜೊತೆ ಜಗಳಕ್ಕಿಳಿದು ಚಾಕು ಹಾಕಿದ್ದಾನೆ.
ಸದ್ಯಕ್ಕೆ ರಾಕೇಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ. ಕಾರ್ಪೋರೇಟರ್ ಪುತ್ರನ ಅಟ್ಟಹಾಸಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.