– ನಗರದೆಲ್ಲೆಡೆ ಆರ್ಭಟ ತೋರಿಸಿದ ಕಾಡುಕೋಣ ಕೊನೆಗೂ ಸೆರೆ
ಮಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಖಾಲಿ ಖಾಲಿಯಾಗಿದ್ದ ಮಂಗಳೂರು ನಗರಕ್ಕೆ ಕಾಡಿನಿಂದ ಬಂದಿದ್ದ ಕಾಡುಕೋಣವೊಂದು ಜನರಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ಕೆಲ ದಿನದಿಂದ ನಿಶ್ಯಬ್ದದಿಂದ ಇದ್ದ ನಗರವವೂ ಕಾಡೆಂದುಕೊಂಡು ಆಗಮಿಸಿದ್ದ ಕಾಡುಕೋಣ ಇಂದು ಬೆಳ್ಳಂಬೆಳಗ್ಗೆ ಪ್ರತ್ಯೇಕವಾಗಿತ್ತು. ನಗರದ ಬಿಜೈ, ಅಳಕೆ, ಮಣ್ಣುಗುಡ್ಡೆ ಪರಿಸರದಲ್ಲಿ ತನ್ನ ರಂಪಾಟವನ್ನು ತೋರಿಸಿತ್ತು. ರಸ್ತೆಯಲ್ಲಿದ್ದ ಹಲವು ಕಾರುಗಳಿಗೆ ಹಾನಿಯನ್ನು ಮಾಡಿತ್ತು.
ಮನೆಯ ಕಾಂಪೌಡು ಹಾರಿ ಬರುತ್ತಿದ್ದ ಕಾಡುಕೋಣದ ಆರ್ಭಟಕ್ಕೆ ಆತಂಕಗೊಂಡಿದ್ದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕೊನೆಗೂ ಮಣ್ಣಗುಡ್ಡೆಯಲ್ಲಿ ಕಾಡುಕೋಣವನ್ನು ಸೆರೆಹಿಡಿದಿದ್ದಾರೆ.
ಒಂದು ಕಡೆಯಿಂದ ಇನ್ನೊಂದು ಕಡೆಗೆ ಭಯಂಕರವಾಗಿ ಓಡುತ್ತಿದ್ದ ಕಾಡುಕೋಣಕ್ಕೆ ಎರಡು ಅರಿವಳಿಕೆ ಚುಚ್ಚು ನೀಡಿ ನಿಯಂತ್ರಣಕ್ಕೆ ತರಲಾಯಿತು. ಕಾಡಿನಲ್ಲಿರುವ ಈ ಕಾಡುಕೋಣ ಲಾಕ್ಡೌನ್ ಕಾರಣದಿಂದ ಖಾಲಿರಸ್ತೆಯಲ್ಲಿ ನಗರಕ್ಕೆ ಎಂಟ್ರಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.