ಯಾದಗಿರಿ: ಡೆಡ್ಲಿ ಕೊರೊನಾ ವೈರಸ್ ತಡೆಗೆ ಯಾದಗಿರಿಯಲ್ಲಿ ಯುವಕರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಯುವಕರ ಗೆಳೆಯರ ಬಳಗದಿಂದ ವಿಶೇಷ ಪೂಜೆ ಸಲ್ಲಿಸಿ, ಕೊರೊನಾ ವೈರಸ್ ನಾಶವಗಾಲಿ ಎಂದು ಪ್ರಾರ್ಥಿಸಿದ್ದಾರೆ.
ಚೀನಾ ದೇಶದಿಂದ ವಿಶ್ವದೆಲ್ಲಡೆ ಹರಡಿರುವ ವೈರಸ್ ಸಾವಿರಾರು ಜನರನ್ನು ಬಲಿ ಪಡೆದಿದ್ದು, ಭಾರತ ಹಾಗೂ ಕರ್ನಾಟಕಕ್ಕೂ ವೈರಸ್ ಒಕ್ಕರಿಸಿದೆ. ಜನರನ್ನು ಭಯಬೀತರನ್ನಾಗಿದೆ. ದೈವ ಶಕ್ತಿಯಿಂದ ವೈರಸ್ ನಾಶವಾಗುತ್ತದೆ ಎಂಬ ನಂಬಿಕೆ ಮೇಲೆ ಯುವಕರು ದೇವಿ ಮೊರೆ ಹೋಗಿದ್ದು, ಯಾದಗಿರಿ ಗಡಿ ಭಾಗದ ಹೈದ್ರಾಬಾದ್ ನಲ್ಲಿ ವೈರಸ್ ಶಂಕಿತ ವ್ಯಕ್ತಿ ಪತ್ತೆಯಾದ ಹಿನ್ನಲೆ ಜಿಲ್ಲೆಯ ಜನ ಮತ್ತಷ್ಟು ಗಾಬರಿಗೊಂಡಿದ್ದಾರೆ. ಹೀಗಾಗಿ ದೇವಿ ಅಂಬಾ ಭವಾನಿಗೆ ಯುವಕರು ಆರತಿ ಬೆಳಗಿ, ದೀರ್ಘ ದಂಡ ನಮಸ್ಕಾರ ಹಾಕಿ ಕೊರೊನಾ ತಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.