ಯಾವ ಮಸೀದಿಗೂ ನಮಾಜ್ ಮಾಡಲು ಬರಬೇಡಿ: ಮೌಲ್ವಿಗಳು ಮನವಿ

Public TV
1 Min Read
KWR

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದೆಹಲಿಯ ನಿಜಾಮುದ್ದೀನ್ ಜಮಾಯತ್ ಸಭೆಗೆ 8 ಜನ ಭಾಗವಹಿಸಿದ ಹಾಗೂ ಕೊರೊನಾ ಸೊಂಕು ಹರಡುವ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ಮಸೀದಿಗೂ ನಮಾಜ್ ಮಾಡಲು ಬಾರದಂತೆ ಮೌಲ್ವಿಗಳು ಇಂದು ಮನವಿ ಮಾಡಿದ್ದಾರೆ.

KWR 1

ಜಿಲ್ಲೆಯ ವಿವಿಧ ಮಸೀದಿಗಳ ಮೌಲ್ವಿಗಳಿಂದ ತಮ್ಮ ಜನಾಂಗದವರಿಗೆ ಮಸೀದಿಗೆ ಬಾರದಂತೆ ವಿಡಿಯೋ ಮಾಡಿ ಮನವಿ ಮಾಡಿದ್ದು, ನಮಾಜ್ ಮಾಡಲು ಮಸೀದಿಗೆ ಬರುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಇದ್ದು ನಮಾಜ್ ಮಾಡುವಂತೆ ಕೋರಿಕೊಂಡಿದ್ದಾರೆ. ದೆಹಲಿಯ ಧಾರ್ಮಿಕ ಸಭೆಗೆ ತೆರಳಿದವರಿಗೂ ಮನವಿ ಮಾಡಿ ಹೋಮ್ ಕ್ವಾರಂಟೈನ್ ಇರುವಂತೆ ತಿಳಿಸಿದ್ದಾರೆ.

KWR 2

ಇಂದು ಶುಕ್ರವಾರ ವಾದ್ದರಿಂದ ಮಸೀದಿಗೆ ಜನರು ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ಮಸೀದಿಯ ಮೌಲ್ವಿಗಳು ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿದ ಮುಸ್ಲಿಂ ಜನಾಂಗದವರು ಮಸೀದಿಗೆ ಆಗಮಿಸದೇ ಮನೆಯಲ್ಲಿಯೇ ಉಳಿದಿದ್ದು ಮಸೀದಿಗಳು ಸಂಪೂರ್ಣ ಬಂದ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *