Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೆಂಪು ಗುಲಾಬಿ ಮೇಲೆ ಕೊರೊನಾದ ಕರಿನೆರಳು- ಕಂಗಾಲಾದ ಕಾಫಿನಾಡ ರೈತ ಮಹಿಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkamagaluru | ಕೆಂಪು ಗುಲಾಬಿ ಮೇಲೆ ಕೊರೊನಾದ ಕರಿನೆರಳು- ಕಂಗಾಲಾದ ಕಾಫಿನಾಡ ರೈತ ಮಹಿಳೆ

Chikkamagaluru

ಕೆಂಪು ಗುಲಾಬಿ ಮೇಲೆ ಕೊರೊನಾದ ಕರಿನೆರಳು- ಕಂಗಾಲಾದ ಕಾಫಿನಾಡ ರೈತ ಮಹಿಳೆ

Public TV
Last updated: April 23, 2020 11:43 am
Public TV
Share
3 Min Read
CKM Rose Farmers
SHARE

ಚಿಕ್ಕಮಗಳೂರು: ಎಕರೆಗೆ ಎರಡು ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಮೂರು ಎಕರೆಯಲ್ಲಿ ಬೆಳೆದಿರೋ ಕೆಂಪು ಗುಲಾಬಿ ಮೇಲೆ ಕೊರೊನಾ ಕರಿನೆರಳು ಬಿದ್ದ ಪರಿಣಾಮ ರೈತ ಮಹಿಳೆ ತಾನೇ ಬೆಳೆದ ಹೂವನ್ನ ತಾನೇ ತಿಪ್ಪೆಗೆ ಎಸೆಯುತ್ತಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ರೈತ ಮಹಿಳೆ ನಜ್ಮಾ ಮತಿಘಟ್ಟ ಎಂಬವರು ಮೂರು ಎಕರೆಯಲ್ಲಿ ಕೆಂಪು ಗುಲಾಬಿ ಬೆಳೆದಿದ್ದಾರೆ. ಮದುವೆ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳಿಗೆ ಸುಗಂಧ ರಾಜ ಹೂವಿನ ಜೊತೆ ಸೇರಿಸಿ ಕಟ್ಟುವ ಕೆಂಪು ಗುಲಾಬಿ ಹೊಲದ ಬದಿಯ ಗುಂಡಿಯಲ್ಲಿ ಸುಟ್ಟು ಬೂದಿಯಾಗುತ್ತಿದ್ರೆ, ಹಗಲಿರುಳು ಕಷ್ಟಪಟ್ಟು ಬೆಳೆದ ರೈತ ಮಹಿಳೆಯ ಕಣ್ಣಾಲಿಗಳು ತೇವಗೊಳುತ್ತಿವೆ.

CKM Rose Farmer 2

2018 ಹಾಗೂ 2019ರಲ್ಲಿ ಪ್ರಕೃತಿಯ ಕಣ್ಣಾಮುಚ್ಚಾಲೆ ಆಟಕ್ಕೆ ನಷ್ಟ ಅನುಭವಿಸಿದ್ದ ಕಾಫಿನಾಡಿನ ರೈತರು ಈ ವರ್ಷ ಕೊರೊನಾ ಕಾಟಕ್ಕೆ ಕಂಗಾಲಾಗಿದ್ದಾರೆ. ಕಳೆದ ವರ್ಷವೂ ಇದೇ ಜಾಗದಲ್ಲಿ ನಜ್ಮಾ ಚೆಂಡು ಹೂ ಬೆಳೆದಿದ್ದರು. 35 ಕ್ವಿಂಟಾಲ್ ಹೂವಿನ ನಿರೀಕ್ಷೆಯಲ್ಲಿದ್ದ ಇವರಿಗೆ ಕಳೆದ ವರ್ಷದ ಮಳೆ ಎಲ್ಲವನ್ನೂ ನುಂಗಿ ನೀರು ಕುಡಿದಿತ್ತು. ಹೊಲದಲ್ಲಿ ಗಿಡ ಅರ್ಧ ಮುಳುಗುವಂತೆ ನೀರು ನಿಂತಿದ್ರಿಂದ ಹರಿಯುತ್ತಿದ್ದ ನೀರಿನಲ್ಲಿ ಗಿಡವೂ ತೇಲಿ ಹೋಗಿತ್ತು. ಈ ವರ್ಷ ಗಿಡದ ತುಂಬಾ ಹೂವಿದೆ. ಸೂರ್ಯನ ಕಿರಣಕ್ಕೆ ಹೊಳೆಯುತ್ತಿದೆ. ಆದರೆ ಸಂಜೆಯಾಗುತ್ತಿದ್ದಂತೆ ತಿಪ್ಪೆಗೆ ಸೇರಿ ಸುಟ್ಟು ಬೂದಿಯಾಗುತ್ತಿದೆ. ಯಾಕಂದ್ರೆ ತಾನೇ ಮಕ್ಕಳಂತೆ ಬೆಳೆಸಿದ ಗಿಡಗಳನ್ನ ಕಿತ್ತು ನಜ್ಮಾ ತಾನೇ ತಿಪ್ಪೆಗೆ ಸುರಿಯುತ್ತಿದ್ದಾರೆ.

CKM Rose Farmer 3

ಸರ್ಕಾರಕ್ಕೆ ಮನವಿ: ಕಡೂರಿನ ಬರಪೀಡಿತ ಪ್ರದೇಶದಲ್ಲಿ ನಜ್ಮಾ ಅವರು ಬೆಳೆದಿರೋ ಈ ಗಿಡದಲ್ಲಿ ದಿನಂ ಪ್ರತಿ 50-60 ಕೆ.ಜಿ. ಹೂ ಸಿಗುತ್ತೆ. ಆದರೆ ಸಾಗಿಸೋದಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಜಾತ್ರೆ, ಮದುವೆ, ಸಭೆ-ಸಮಾರಂಭ ನಡೆಯುತ್ತಿಲ್ಲ. ಹೂವಿನ ವ್ಯಾಪಾರಿಗಳು ವ್ಯಾಪರವನ್ನೇ ನಿಲ್ಲಿಸಿದ್ದಾರೆ. ಫ್ಲವರ್ ಮಾರ್ಕೆಟ್ ಸಂಪೂರ್ಣ ನೆಲಕಚ್ಚಿದೆ. ಈ ಮಧ್ಯೆ ಪೊಲೀಸರು ಹಳ್ಳಿ ದಾಟೋದಕ್ಕೂ ಬಿಡ್ತಿಲ್ಲ. ಹೆಚ್ಚಾಗಿ ತುಮಕೂರು, ಹಾಸನ, ಶಿವಮೊಗ್ಗಕ್ಕೆ ಹೋಗುತ್ತಿದ್ದ ಈ ಹೂವು ಇಂದು ಜಮೀನು ಬದಿಯ ತಿಪ್ಪೆ ಸೇರುತ್ತಿದೆ. ಕಷ್ಟ ಪಟ್ಟು ಹೂ ಬೆಳೆದ ನಜ್ಮಾಗೆ ಮುಂದಿನ ದಾರಿಯೇ ಕಾಣದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ರೈತ ಮಹಿಳೆ ನಜ್ಮಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

CKM Rose Farmer 4

ಲಾಕ್‍ಡೌನ್ ಮಧ್ಯೆಯೂ ಸರ್ಕಾರ ರೈತರ ಕೃಷಿ ಚಟುವಟಿಕೆಗೆ ಅವಕಾಶ ನೀಡಿದ್ದು, ತಿಂಗಳಿಂದ ಮನೆಯಲ್ಲಿದ್ದ ರೈತರು ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ಕೂಲಿಗೆ ಬರೋ ಕೆಲಸಗಾರರಿಗೆ ಕೂಲಿ ಕೊಡೋದಕ್ಕು ನಜ್ಮಾಗೆ ಸಾಧ್ಯವಾಗ್ತಿಲ್ಲ. ಹೂವಿನ ತೋಟದಲ್ಲಿ ಕೆಲಸ ಮಾಡಲು ದಿನಂ ಪ್ರತಿ ಕನಿಷ್ಠ 15-20 ಜನ ಬೇಕು. ಅವರಿಗೆ ಸಂಬಳವೇ 4-5 ಸಾವಿರ ಆಗುತ್ತೆ. ಹೂವು ಸಂಪೂರ್ಣ ಹಾಳಾಗ್ತಿರೋದ್ರಿಂದ ಜನರನ್ನೂ ಕೆಲಸಕ್ಕೆ ತೆಗೆದಕೊಳ್ಳದೇ ಹೂವನ್ನ ಕಿತ್ತು ತಿಪ್ಪೆಗೆ ಹಾಕುತ್ತಿದ್ದಾರೆ. ಹೂವಿನ ಗಿಡಕ್ಕೆ ಡ್ರಿಪ್ ಮಾಡಿಸಿ, ಮೂರು ದಿನಕ್ಕೊಮ್ಮೆ ಔಷಧಿ ಸಿಂಪಡಿಸಿ ಬೆಳೆಸಿದ್ದ ಗಿಡ ಈಗ ಫಸಲು ಕೊಡ್ತಿದ್ದು ಶ್ರಮಕ್ಕೆ ತಕ್ಕ ಫಲ ಗಿಡದಲ್ಲಿದೆ. ಆದರೆ ಹಣದಲ್ಲಿಲ್ಲ ಎಂಬಂತಾಗಿದೆ. ಸರ್ಕಾರ ಇಂತಹ ರೈತರ ನೆರವಿಗೆ ಬಾರದಿದ್ರೆ ಲಕ್ಷಾಂತರ ರೈತರ ಕೋಟ್ಯಾಂತರ ರೂಪಾಯಿ ಹೊಲ-ಗದ್ದೆಗಳ ಮಣ್ಣಲ್ಲಿ ಗೊಬ್ಬರವಾಗೋದು ಗ್ಯಾರಂಟಿ ಅನ್ನೋದು ಖಾತ್ರಿಯಾದಂತಿದೆ.

CKM Rose Farmer 5

ಕಾಫಿನಾಡು ವಿಭಿನ್ನ ಹವಾಗುಣದ ಜಿಲ್ಲೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮೂರು ಹವಾಗುಣವನ್ನೂ ಹೊಂದಿದೆ. ಒಂದೊಂದು ಭಾಗದ್ದು ಒಂದೊಂದು ಗೋಳು. ಬೇಕಾದಾಗ ಬೇಕಾದಷ್ಟು ಮಳೆ ಬರಲ್ಲ. ಬೇಡವಾದಾಗ ಸೈತಾನನಂತೆ ಸುರಿದು ಇರೋ-ಬರೋದ್ನೆಲ್ಲಾ ಕೊಚ್ಚಿ ಹಾಕುತ್ತೆ. ಬೆಲೆಯೂ ಅಷ್ಟೆ. ಬೆಳೆ ಇದ್ದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರಲ್ಲ. ಕಾಫಿನಾಡ ಈ ಮೂರು ಹವಾಗುಣದಿಂದ ರೈತರು ಪ್ರತಿವರ್ಷ ಪ್ರಕೃತಿಯ ಜೊತೆ ಜೂಜಾಡುತ್ತಲೇ ಬದುಕುತ್ತಿದ್ದಾರೆ. ಪ್ರಕೃತಿ ಕಣ್ಣಾಮುಚ್ಚಾಲೆ ಆಟದಿಂದ ಅಲ್ಲ-ಸ್ವಲ್ಪವನ್ನಾದ್ರು ಕೈಗೆ ಸಿಗ್ತಿತ್ತು. ಆದ್ರೆ ಈ ಕೊರೊನಾ ಉಂಡು ಹೋದ, ಕೊಂಡು ಹೋದ ಎಂಬಂತೆ ಇರೋದನ್ನೂ ನುಂಗಿ ನೀರು ಕುಡಿತಿದೆ. ಹಗಲಿರುಳು ಕಷ್ಟಪಟ್ಟು ಹೂ ಬೆಳೆದ ನಜ್ಮಾ ಮೊಗದಲ್ಲಿ ಹೂವಿನ ಅಂದದಲ್ಲಿರೋ ನಗುವೇ ಇಲ್ಲದಂತಾಗಿದೆ.

TAGGED:agricultureChikkamagaluruCorona VirusCovid 19farmerflowerLockdownmarketroseಕೃಷಿಕೊರೊನಾ ವೈರಸ್ಕೋವಿಡ್ 19ಗುಲಾಬಿ ಹೂಚಿಕ್ಕಮಗಳೂರುಮಾರುಕಟ್ಟೆರೈತ ಮಹಿಳೆಲಾಕ್‍ಡೌನ್
Share This Article
Facebook Whatsapp Whatsapp Telegram

Cinema news

gilli hanumantha
ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವನೇ ಗೆಲ್ತಾನೆ: ಬಿಗ್ ಬಾಸ್ 11 ವಿನ್ನರ್ ಹನುಮಂತ ಮಾತು
Cinema Haveri Latest Main Post TV Shows
BBK 12 Gilli Nata Gym Ravi
ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಹೆಸರು ಕೇಳಿ ಬರ್ತಿದೆ: ಜಿಮ್ ರವಿ
Latest Sandalwood Top Stories TV Shows
bigg boss sudeep
ಬಿಗ್‌ ಬಾಸ್‌ ವಿನ್ನರ್‌ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗುತ್ತೆ: ಸುದೀಪ್‌
Cinema Latest Main Post TV Shows
bigg boss kannada 12 finalists
Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?
Cinema Latest Main Post TV Shows

You Might Also Like

Namaz
Crime

ಅನುಮತಿಯಿಲ್ಲದೇ ಖಾಲಿ ಮನೆಯಲ್ಲಿ ನಮಾಜ್‌ ಮಾಡ್ತಿದ್ದ 12 ಮಂದಿ ಪೊಲೀಸ್‌ ವಶಕ್ಕೆ

Public TV
By Public TV
11 seconds ago
Excise DC Lokayukta Raid
Bengaluru City

ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ – ಆಂತರಿಕ ತನಿಖೆಗೆ ಸೂಚನೆ

Public TV
By Public TV
2 minutes ago
bengaluru car fire
Bengaluru City

ಬೆಂಗಳೂರು| ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು

Public TV
By Public TV
2 minutes ago
Siddaramaiah and janardhana reddy
Districts

ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಜನಾರ್ದನ ರೆಡ್ಡಿಯದ್ದು ಗೂಂಡಾ ಸಂಸ್ಕೃತಿ, ಅವ್ರೇನು ನಮ್ಗೆ ಪಾಠ ಮಾಡ್ತಾರೆ – ಸಿಎಂ

Public TV
By Public TV
4 minutes ago
Bidar Death
Bidar

ಗಾಳಿಪಟ ಹಿಡಿಯಲು ಹೋಗಿ ಕಟ್ಟಡ ಮೇಲಿಂದ ಬಿದ್ದು ಯುವಕ ಸಾವು

Public TV
By Public TV
2 hours ago
car hits electric pole in bhatkal two dead
Crime

ಭಟ್ಕಳ | ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ದುರ್ಮರಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?