ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆಯಲ್ಲಿರುವ ಅವಧೂತ ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೇಲಿ ಬಿದ್ದಿದೆ.
ಆಶ್ರಮಕ್ಕೆ ಹೋಗುವ ಮಾರ್ಗದ ನಂದಿಗೋಡು ಗ್ರಾಮಸ್ಥರು ತಮ್ಮ ಊರಿನ ಎಂಟ್ರಿಗೆ ಬೇಲಿ ಹಾಕಿದ್ದಾರೆ. ನಮ್ಮ ಊರಿಗೆ ಹೊರ ಭಾಗದವರು ಬರುವುದು ಬೇಡ, ಕೊರೊನಾನ ಹಬ್ಬಿಸುವುದು ಬೇಡವೆಂದು ಬೇಲಿ ಹಾಕಿದ್ದಾರೆ. ಹಾಗಾಗಿ ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೀಗ ಬಿದ್ದಂತಾಗಿದೆ.
ಕೊರೊನಾ ಸೋಂಕು ಕಡಿಮೆಯಾಗುವವರೆಗೂ ಬೇರೆ ಯಾವ ಊರಿನವರು ನಮ್ಮ ಊರಿಗೆ ಬರುವುದು ಬೇಡವೆಂದು ಗ್ರಾಮದ ಸಚಿನ್ ಹಾಗೂ ಸ್ನೇಹಿತರು ಬೇಲಿ ಹಾಕಿದ್ದಾರೆ. ಇದೇ ಮಾರ್ಗದಲ್ಲಿ ವಿನಯ್ ಗುರೂಜಿ ಆಶ್ರಮದ ಮಾರ್ಗ ಬಂದ್ ಆಗಿದೆ.