Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾನುವಾರ ರಾತ್ರಿ ಲೈಟ್ ಆಫ್ ಮಾಡಿದ್ರೆ ಗ್ರಿಡ್‍ಗೆ ಸಮಸ್ಯೆ ಆಗುತ್ತಾ? ಭಾರತದ ಬೇಡಿಕೆ ಎಷ್ಟಿದೆ? – ಇಲ್ಲಿದೆ ಪೂರ್ಣ ಮಾಹಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಭಾನುವಾರ ರಾತ್ರಿ ಲೈಟ್ ಆಫ್ ಮಾಡಿದ್ರೆ ಗ್ರಿಡ್‍ಗೆ ಸಮಸ್ಯೆ ಆಗುತ್ತಾ? ಭಾರತದ ಬೇಡಿಕೆ ಎಷ್ಟಿದೆ? – ಇಲ್ಲಿದೆ ಪೂರ್ಣ ಮಾಹಿತಿ

Corona

ಭಾನುವಾರ ರಾತ್ರಿ ಲೈಟ್ ಆಫ್ ಮಾಡಿದ್ರೆ ಗ್ರಿಡ್‍ಗೆ ಸಮಸ್ಯೆ ಆಗುತ್ತಾ? ಭಾರತದ ಬೇಡಿಕೆ ಎಷ್ಟಿದೆ? – ಇಲ್ಲಿದೆ ಪೂರ್ಣ ಮಾಹಿತಿ

Public TV
Last updated: April 4, 2020 5:08 pm
Public TV
Share
4 Min Read
Electricity Board 4
SHARE

ನವದೆಹಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಮೇಣದ ದೀಪ/ ಮೊಬೈಲ್ ಟಾರ್ಚ್ ಬೆಳಗಿ ಎಂದು ಕರೆ ನೀಡಿರುವ ವಿಚಾರದ ಕುರಿತು ಪರ, ವಿರೋದ ಮಾತುಗಳು ಕೇಳಿಬಂದಿದೆ.

ದೇಶಾದ್ಯಂತ ಒಂದೇ ಸಮಯದಲ್ಲಿ ಒಂದೇ ಬಾರಿಗೆ ವಿದ್ಯುತ್ ದೀಪಗಳನ್ನು ಆಫ್ ಮಾಡಿದರೆ ಗ್ರಿಡ್‍ಗೆ ಸಮಸ್ಯೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿದರೆ, ಕೇಂದ್ರ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ಗ್ರಿಡ್‍ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

Modi 1

ಮೋದಿ ಹೇಳಿದ್ದು ಏನು?
ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತ ಒಂದಾಗಿ ಹೋರಾಡಬೇಕು. ಇದಕ್ಕಾಗಿ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಎಲ್ಲರು ವಿದ್ಯುತ್ ದೀಪ ಆಫ್ ಮಾಡಿ ದೀಪ/ ಮೇಣದ ಬತ್ತಿ/ ಮೊಬೈಲ್ ಟಾರ್ಚ್ ಅನ್ನು 9 ನಿಮಿಷಗಳ ಬೆಳಗಿಸಬೇಕು ಎಂದು ಕರೆ ನೀಡಿದ್ದರು.

ಸಮಸ್ಯೆ ಏನು?
ಸಾಮಾನ್ಯವಾಗಿ ರಾತ್ರಿ 7 ರಿಂದ 10 ಗಂಟೆಯ ಅವಧಿಯಲ್ಲಿ ದೇಶಾದ್ಯಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಸಂದರ್ಭದಲ್ಲಿ 9 ನಿಮಿಷಗಳ ಕಾಲ ಎಲ್ಲ ವಿದ್ಯುತ್ ದೀಪಗಳನ್ನು ಆಫ್ ಮಾಡಿದರೆ ವಿದ್ಯುತ್ ಮತ್ತೆ ಪವರ್ ಗ್ರಿಡ್‍ಗೆ ಹೋಗುತ್ತದೆ. ಒಂದೇ ಬಾರಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಮರಳಿದಾಗ ಆ ಒತ್ತಡವನ್ನು ಪವರ್ ಗ್ರಿಡ್ ತಡೆದುಕೊಳ್ಳುವುದು ಕಷ್ಟ. ನಿಗದಿತ ಮೆಗಾವ್ಯಾಟ್‍ನಲ್ಲಿ ವಿದ್ಯುತ್ ಪ್ರವಹಿಸದೇ ಇದ್ದಲ್ಲಿ ಏರುಪೇರಾಗಿ ಸಮಸ್ಯೆ ಆಗಬಹುದಲ್ಲ ಎನ್ನುವ ಪ್ರಶ್ನೆ ಎದ್ದಿದೆ.

Electricity Facebook

ಗ್ರಿಡ್ ಎಂದರೇನು? ನಮ್ಮ ಸಾಮರ್ಥ್ಯ ಎಷ್ಟಿದೆ?
ಒಂದು ಭೌಗೋಳಿಕ ಪ್ರದೇಶಕ್ಕೆ ವಿದ್ಯುತ್ ರವಾನಿಸಲು ಮತ್ತು ವಿತರಿಸಲು ಬಳಸುವ ವಿದ್ಯುತ್ ತಂತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳ ಜಾಲವನ್ನು ಗ್ರಿಡ್ ಎಂದು ಕರೆಯಲಾಗುತ್ತದೆ. ಭಾರತ 370 ಗಿಗಾವ್ಯಾಟ್ ಸಾಮರ್ಥ್ಯ ಪ್ರಸರಣ ಜಾಲವನ್ನು ಹೊಂದಿದ್ದು ಸಾಧಾರಣವಾಗಿ 150 ಗಿಗಾವ್ಯಾಟ್ ವಿದ್ಯುತ್ ಬೇಡಿಕೆ ಇರುತ್ತದೆ. ರಾಷ್ಟ್ರೀಯ ಗ್ರಿಡ್ ನಿಯಂತ್ರಿಸುವ ಪವರ್ ಸಿಸ್ಟಂ ಆಪರೇಷನ್ ಕಾರ್ಪೋರೇಷನ್ ಲಿಮಿಟೆಡ್ ವಿದ್ಯುತ್ ಬೇಡಿಕೆ- ಪೊರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ.

Electricity

ಸಮಸ್ಯೆ ಆಗುತ್ತಾ?
ಭಾರತದಲ್ಲಿ ಕೃಷಿ ಮತ್ತು ಕೈಗಾರಿಕೆಗೆ ಕ್ರಮವಾಗಿ ಶೇ.40 ಮತ್ತು ಶೇ.20ರಷ್ಟು ವಿದ್ಯುತ್ ಬಳಕೆಯಾಗುತ್ತದೆ. ವಾಣಿಜ್ಯ ವಿದ್ಯುತ್ ಬಳಕೆ ಶೇ.8ರಷ್ಟಿದೆ. ಪ್ರಧಾನಿ ಮೋದಿಯವರು 9 ನಿಮಿಷದ ಮಾತ್ರ ವಿದ್ಯುತ್ ದೀಪ ಆರಿಸಿ ಎಂದು ಹೇಳಿದ್ದಾರೆಯೇ ವಿನಾ: ಮನೆಯಲ್ಲಿರುವ ಬೇರೆ ಉಪಕರಣಗಳನ್ನು ಆಫ್ ಮಾಡಿ ಎಂದು ಹೇಳಿಲ್ಲ. ಹೀಗಿರುವಾಗ ವಿದ್ಯುತ್ ಪ್ರಸರಣದಲ್ಲಿ ಯಾವುದೇ ದೊಡ್ಡ ಸಮಸ್ಯೆ ಆಗಲಾರದು ಎನ್ನುವ ಅಭಿಪ್ರಾಯ ಅಧಿಕಾರ ವರ್ಗದಿಂದ ಬಂದಿದೆ.

Lockdown 15

ವಿದ್ಯುತ್ ಬೇಡಿಕೆ ಎಷ್ಟು ಇಳಿಕೆಯಾಗಿದೆ?
ಕೊರೊನಾ ವೈರಸ್ ನಿಯಂತ್ರಿಸಲು ದೇಶದಲ್ಲಿ 21 ದಿನಗಳ ಲಾಕ್‍ಡೌನ್ ಘೋಷಣೆಯಾಗಿದೆ. ಲಾಕ್‍ಡೌನ್ ನಿರ್ಧಾರದಿಂದಾಗಿ ಕಂಪನಿಗಳು, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು.. ಮುಚ್ಚಿವೆ. ಇದರಿಂದಾಗಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಸಂಬಂಧ ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿದ್ಯುತ್ ಸರಬರಾಜಿಗೆ ಯಾವುದೇ ಸಮಸ್ಯೆಯಿಲ್ಲ. ಲಾಕ್‍ಡೌನ್ ನಿಂದಾಗಿ ಈಗಾಗಲೇ ಶೇ.20 ರಷ್ಟು ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಗ್ರಿಡ್ ಗಳು ದಿನದ ಯಾವ ಸಮಯದಲ್ಲಿ ಬೇಡಿಕೆ ಜಾಸ್ತಿ/ ಕಡಿಮೆ ಇದೆ ಎನ್ನುವುದನ್ನು ನೋಡಿಕೊಂಡು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಏಪ್ರಿಲ್ 5 ರಂದು ಬೇಡಿಕೆ ಕಡಿಮೆ ಬಂದರೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.

No call to switch off street lights or appliances in homes. Only lights should be switched off. The lights in hospitals &other essential services will remain on. Local bodies have been advised to keep street lights on for public safety: Ministry of Power https://t.co/l3cY8ajwH9

— ANI (@ANI) April 4, 2020

ವಿದ್ಯುತ್ ಇಲಾಖೆಯ ದಾಖಲೆಗಳ ಪ್ರಕಾರ ಈ ವರ್ಷದ ಏಪ್ರಿಲ್ 2 ರಂದು ಅತಿ ಹೆಚ್ಚು 1,25,817 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದರೆ ಕಳೆದ ವರ್ಷದ ಏಪ್ರಿಲ್ 2 ರಂದು 1,68,326 ಮೆಗಾವ್ಯಾಟ್ ಬೇಡಿಕೆ ಇತ್ತು.

An unprecedented drop in electricity demand at 9pm Sunday &an immediate surge at 9.09 pm could cause the electrical grid to crash. So Electricity Boards are contemplating load shedding from 8 pm & staggered return to normal after 9.09pm. One more thing the PM didn’t think about! pic.twitter.com/zbmcyYm838

— Shashi Tharoor (@ShashiTharoor) April 4, 2020

ಕರ್ನಾಟಕದಲ್ಲಿ ಸಮಸ್ಯೆ ಆಗುತ್ತಾ?
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಡಿ ರಾಜೇಶ್, ಕೆಪಿಟಿಸಿಎಲ್ ನಲ್ಲಿ ಲೋಡ್ ಕಡಿಮೆ ಹಾಗೂ ಲೋಡ್ ಹೆಚ್ಚಳ ಮಾಡುವ ವ್ಯವಸ್ಥೆ ಇದೆ. ನಾಲ್ಕು ಸಾವಿರ ಮೆಗಾ ವ್ಯಾಟ್ ಕಡಿಮೆಯಾಗಬಹುದು. ಈ ಸಂಬಂಧ ನ್ಯಾಷನಲ್ ಗ್ರಿಡ್ ಜೊತೆ ಮಾತುಕತೆ ನಡೆಸಿದ್ದೇವೆ. ತಾಂತ್ರಿಕವಾಗಿ ಗುಣಮಟ್ಟದ ವ್ಯವಸ್ಥೆ ಇರುವುದರಿಂದ ಸಮಸ್ಯೆ ಆಗಲಾರದು. ಜನ ಮೇನ್ ಸ್ವಿಚ್ ಆಫ್ ಮಾಡದೇ ಕೇವಲ ವಿದ್ಯುತ್ ಸ್ವಿಚ್ ಆಫ್ ಮಾಡಿದರೆ ಸಾಕು ಎಂದು ಹೇಳಿದ್ದಾರೆ

As somebody who has been associated with the power sector for almost three decades including as minister, the call to go dark for 9 min at 9pm on the 5th can have deep impact on the grid and its stability. I sincerely hope this is being properly managed.

— Jairam Ramesh (@Jairam_Ramesh) April 4, 2020

ರಾಜಕೀಯ ನಾಯಕರು ಹೇಳಿದ್ದು ಏನು?
ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಪ್ರತಿಕ್ರಿಯಿಸಿ, ವಿದ್ಯುತ್ ಕ್ಷೇತ್ರದ ಅನುಭವದ ಪ್ರಕಾರ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿದರೆ ಗ್ರಿಡ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೀತಿ ಯಾವುದೇ ಸಮಸ್ಯೆ ಆಗದಂತೆ ನಿರ್ವಹಣೆ ಆಗಬಹುದು ಎಂದು ನಾನು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

When people were asked to clap , they crowded the roads and beat drums , I just hope now they don't burn down their own houses , sir 'diya to jalalenge ' but please tell us what the government is doing to improve condition

— Sanjay Raut (@rautsanjay61) April 3, 2020

ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಸೇನೆಯ ಸಂಜಯ್ ರಾವತ್, ಈ ಹಿಂದೆ ಜನತಾ ಕರ್ಫ್ಯೂ ದಿನ ಮೋದಿ ಅವರು ಚಪ್ಪಾಳೆ ತಟ್ಟಲು ಜನರಿಗೆ ಹೇಳಿದ್ದರು. ಆದರೆ ಅವರು ರಸ್ತೆಗಳಲ್ಲಿ ಕಿಕ್ಕಿರಿದು ಡ್ರಮ್‍ಗಳನ್ನು ಬಾರಿಸಿದ್ದರು. ಈಗ ಅವರು ತಮ್ಮ ಸ್ವಂತ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ ದೀಪಗಳನ್ನು ಬೆಳಗಿಸಿ ಆದರೆ ದಯವಿಟ್ಟು ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ ವ್ಯಂಗ್ಯವಾದ ಟ್ವೀಟ್ ಮಾಡಿದ್ದಾರೆ.

Come on Sir, we do this every year for Earth Hour. Nobody raises any such issues then. Let's not make mockery of our politics.

— Dr. Ketan Gandhi (@DrKetan) April 4, 2020

ಮೋದಿ ಅಭಿಮಾನಿಗಳು ಹೇಳೋದು ಏನು?
ಪ್ರಧಾನಿ ಮೋದಿಯವರು 9 ನಿಮಿಷ ವಿದ್ಯುತ್ ದೀಪ ಮಾತ್ರ ಆರಿಸಿ ಎಂದು ಹೇಳಿದ್ದಾರೆಯೇ ವಿನಾ: ನಿಮ್ಮ ಮನೆಯಲ್ಲಿರುವ ಫ್ರಿಡ್ಜ್, ಗ್ರೈಂಡರ್, ಇನ್ನಿತರ ವಿದ್ಯುತ್ ಉಪಕರಣಗಳನ್ನು ಆಫ್ ಮಾಡಿ ಎಂದು ಹೇಳಿಲ್ಲ. ದೀಪ ಆಫ್ ಮಾಡಬೇಕು ಎನ್ನುವುದು ಕಡ್ಡಾಯವಲ್ಲ. ಇಷ್ಟ ಇದ್ದವರು ಮಾಡುತ್ತಾರೆ. ಮೋದಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

TAGGED:Coronaindiakannada newsLockdownnarendra modiSwitch Offಕರ್ನಾಟಕಗ್ರಿಡ್ನರೇಂದ್ರ ಮೋದಿಭಾರತವಿದ್ಯುತ್
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

MUDA Scam Siddaramaiah
Bengaluru City

ಮುಡಾ ಹಗರಣ: ಇಂದು ಸಿಎಂ ಭವಿಷ್ಯ ನಿರ್ಧಾರ

Public TV
By Public TV
7 minutes ago
Mysuru ARREST
Crime

ಅಪಘಾತವಾಗಿ ಬಿದ್ದಿದ್ದವನ ಮೊಬೈಲ್‌ನಿಂದ 80 ಸಾವಿರ ದೋಚಿದ್ದ ಕದೀಮರು ಅರೆಸ್ಟ್‌!

Public TV
By Public TV
19 minutes ago
Rahul Gandhi
Latest

ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿಯಿಂದ ದಾಳಿ: ಜರ್ಮನಿಯಲ್ಲಿ ರಾಗಾ ಕಿಡಿ

Public TV
By Public TV
1 hour ago
H.D Kumaraswamy
Chikkamagaluru

ದೇವರ ಜೊತೆ ಮಾತಾಡಿದ್ದಾರಂತಲ್ಲ ಕಾದು ನೋಡೋಣ – ಡಿಕೆಶಿ ದೈವವಾಣಿ ಹೇಳಿಕೆಗೆ ಹೆಚ್‌ಡಿಕೆ ವ್ಯಂಗ್ಯ

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 23-12-2025

Public TV
By Public TV
2 hours ago
MGNREGA VB G RAM G
Latest

ಮನರೇಗಾ ರದ್ದು ಮೂಲಕ SC/ST, ಹಿಂದುಳಿದ ಭೂಹೀನರ ಅನ್ನ ಕಸಿಯುವ ಕುತಂತ್ರ – ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?