ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು

Public TV
1 Min Read
Soldiers Bidar Agnepath Satyagraha Mike Congress 3

ಬೀದರ್: ಅಗ್ನಿಪಥ್ ಯೋಜನೆ ವಿರೋಧಿಸಿ ಬೀದರ್‌ನಲ್ಲಿ ಇಂದು ಕಾಂಗ್ರೆಸ್‍ನಿಂದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಧರಣಿ ಸತ್ಯಾಗ್ರಹದ ವೇದಿಕೆಯ ಮೈಕ್ ಭಾಷಣಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ರೇಕ್ ಹಾಕಿದೆ.

ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರು ಮೈಕ್‍ನಲ್ಲಿ ಭಾಷಣ ಮಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್‍ಪಿ ಸತೀಶ್ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದರು. ಡಿವೈಎಸ್‍ಪಿ ಬ್ರೇಕ್ ಹಾಕುತ್ತಿದಂತೆ ಕಾಂಗ್ರೆಸ್ ಮುಖಂಡರು ಮೈಕ್ ಭಾಷಣ ನಿಲ್ಲಿಸಿ, ಸ್ಥಳದಲ್ಲಿದ್ದ ಮೈಕ್ ಹೊತ್ತ ಆಟೋ ಅಲ್ಲಿಂದ ಕಣ್ಮರೆಯಾಯಿತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ

Soldiers Bidar Agnepath Satyagraha Mike Congress

ಅಗ್ನಿಪಥ್ ಯೋಜನೆ ವಿರೋಧಿಸಿ ಮಾಜಿ ಸಚಿವ ರಹೀಂಖಾನ್ ನೇತೃತ್ವದಲ್ಲಿ ಬೀದರ್‌ನಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿಯಲ್ಲೂ ಪ್ರತಿಭಟನೆ ಮಾಡಲಾಯಿತು.

Soldiers Bidar Agnepath Satyagraha Mike Congress 1

ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಟ್ರೈನಿಂಗ್ ಮಾಡಿ ಬಂದ ಮೇಲೆ ಯುವಕರಿಗೆ ವಾಚ್ ಮ್ಯಾನ್ ಕೆಲಸ ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ.

Soldiers Bidar Agnepath Satyagraha Mike Congress 2

ಮಿಲಿಟರಿ ಎಂದರೆ ದೇಶದಲ್ಲಿ ಗೌರವವಿದೆ. ಹಿಗಾಗೀ ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ರಹೀಂಖಾನ್ ಅವರು ಆಗ್ರಹಿಸಿದರು. ಇದನ್ನೂ ಓದಿ: ಶಿವ ಪೂಜೆಗೆ ಹೋದ ರೌಡಿಯ ಬರ್ಬರ ಹತ್ಯೆ

Live Tv

Share This Article