ಉಡುಪಿ: ಮೊಬೈಲ್ ಬಿಡಿ, ಕೈಯಲ್ಲಿ ತಲ್ವಾರ್ ಹಿಡೀರಿ. ಲಕ್ಷ ರೂಪಾಯಿ ಮೊಬೈಲ್ ಇಟ್ಟುಕೊಳ್ಳಬೇಡಿ. ಪ್ರತಿಯೊಬ್ಬರು ಕೈಯಲ್ಲಿ ಹತ್ಯಾರ್ ಹಿಡಿದುಕೊಳ್ಳಿ ಎಂದು ಕಾಶಿ ಮಠಾಧೀಶ ನರೇಂದ್ರ ಭಾಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಡುಪಿ ಧರ್ಮ ಸಂಸದ್ ನಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಚಾಕು, ಖಡ್ಗ ಇಟ್ಟುಕೊಳ್ಳಿ ಎಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ, ರಕ್ಷಣೆಗಾಗಿ ಮನೆಯಲ್ಲಿ ಕೋಲು ಇಟ್ಟುಕೊಳ್ಳಿ. ನಾಯಿ- ಬೆಕ್ಕುಗಳನ್ನು ಹೊಡೆದುರುಳಿಸಿ. ನಾಯಿ ಬೆಕ್ಕುಗಳೆಂದ್ರೆ ಈ ದೇಶದ ವಿರೋಧಿಗಳು. ದೇಶ ವಿರೋಧಿಗಳನ್ನು ಮುಗಿಸಿಬಿಡಿ. ಮೊದಲು ನಾವು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ದೇಶ ರಕ್ಷಣೆ ಮೊದಲು ಸಮರ್ಪಕವಾದರೆ, ನಂತರ ರಾಮ ಮಂದಿರ ಕಟ್ಟಬಹುದು ಎಂದರು.
ದೇಶದ್ರೋಹಿಗಳ ವಿರುದ್ಧ ಶಸ್ತ್ರಾಸ್ತ್ರ ಉಪಯೋಗಿಸಿ. ಪರವಾನಿಗೆ ಪಡೆದೋ, ಪಡೆಯದೆಯೋ ಶಸ್ತ್ರಾಸ್ತ್ರ ಬಳಸಿ ಎಂದು ಕರೆ ನೀಡಿದರು. ಹಿಂದೂಗಳು ಎರಡು ಮಕ್ಕಳನ್ನು ಮಾತ್ರ ಮಾಡ್ಬೇಕಾ? ಮುಸ್ಲಿಮರು ನಾಲ್ಕು ಮದುವೆಯಾಗಿ 20 ಮಕ್ಕಳನ್ನು ಹೊಂದಬಹುದಾ ಎಂದು ಪ್ರಶ್ನೆ ಹಾಕಿದ್ರು. ಚೈನಾ ಮಾದರಿಯ ಕಠಿಣ ಜನಸಂಖ್ಯಾ ನಿಯಂತ್ರಣ ಭಾರತದಲ್ಲಿ ಜಾರಿಯಾಗಲಿ. ಸಮಾನ ಕಾನೂನು ಜಾರಿಗೆ ಭಾರತದಲ್ಲಿ ಅವಕಾಶ ಇಲ್ಲವೇ ಎಂದು ಪ್ರಶ್ನಿಸಿದರು.
ಪೊಡವಿಗೊಡೆಯ ಕೃಷ್ಣನ ನಗರಿ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಎಂಬ ಅತಿವಿಶಿಷ್ಟ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ಪೇಜಾವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ದೇಶದ ಪ್ರಮುಖ ಧಾರ್ಮಿಕ ಮುಖಂಡರು ಭಾಗವಹಿಸಿದ್ದಾರೆ. #Udupi #SantaSammelana pic.twitter.com/J6UrIBGNJr
— B.S.Yediyurappa (@BSYBJP) November 24, 2017
ಪೊಡವಿಗೊಡೆಯ ಕೃಷ್ಣನ ನಗರಿ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಎಂಬ ಅತಿವಿಶಿಷ್ಟ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ಪೇಜಾವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ದೇಶದ ಪ್ರಮುಖ ಧಾರ್ಮಿಕ ಮುಖಂಡರು ಭಾಗವಹಿಸಿದ್ದಾರೆ. #Udupi #SantaSammelana pic.twitter.com/J6UrIBGNJr
— B.S.Yediyurappa (@BSYBJP) November 24, 2017
https://twitter.com/ShobhaBJP/status/934302285286457345