ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

Public TV
1 Min Read
Muralikrishna Hasandka

ಮಂಗಳೂರು: ಗೋವುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಮನೆ ಮನೆಯ ಹೆಂಗಸರು ತಲವಾರುಗಳನ್ನು ಹಿಡಿದುಕೊಂಡು ಉತ್ತರ ನೀಡಲು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ವಾಮಂಜೂರಿನಲ್ಲಿ ನಡೆದ ಗೋವು ಕಳ್ಳತನ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋವು ಕಳ್ಳತನ ಮಾಡುವ ಒಬ್ಬ ಮತಾಂಧನಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮಹಿಳೆಯರನ್ನು ತಯಾರು ಮಾಡಲು ಹಿಂದೂ ಸಮಾಜ ಶ್ರಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಗೋವುಗಳ ರಕ್ತ ಭೂಮಿಗೆ ಬಿದ್ದರೆ, ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ಆಗುತ್ತದೆ. ಕೊನೆಗೆ ರಕ್ತಪಾತ ಆಯಿತು ಅಂತಾ ನಮ್ಮನ್ನು ದೂರಬೇಡಿ ಎಂದು ಹೇಳಿದ್ದಾರೆ.

ಗೋವಿನ ರಕ್ಷಣೆಗಾಗಿ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಒಬ್ಬ ಹಿಂದೂ ವ್ಯಕ್ತಿಯ ಕೆನ್ನೆ ಹೊಡೆದು ಯಾರು ನಮ್ಮ ತಂಟೆಗೆ ಬರುತ್ತಾರೋ, ಅವರ ಹತ್ತು ಕೆನ್ನೆಗಳಿಗೆ ಹೊಡೆಯುವ ಮೂಲಕ ಪ್ರತ್ಯುತ್ತರ ನೀಡುವ ಸಂಕಲ್ಪವನ್ನು ಹಿಂದೂ ಸಮಾಜ ಮಾಡುತ್ತದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *