ಖಡಕ್ ಹಾಗೂ ನಿಷ್ಠುರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಸ್ವರ ಭಾಸ್ಕರ್, ಯಾವತ್ತೂ ತಮ್ಮ ಮಾತಿನಿಂದ ಹಿಂದೆ ಸರಿದವರು ಅಲ್ಲ. ಎಷ್ಟೇ ಕಷ್ಟಗಳು ಎದುರಾದರು ಮಾತಿಗೆ ಬದ್ಧರಾಗಿಯೇ ನಿಲ್ಲುವಂತವರು. ಹಾಗಾಗಿ ಬಾಲಿವುಡ್ ನಲ್ಲಿ ಸ್ವರ ಭಾಸ್ಕರ್ ಅಂದರೆ, ಅಲ್ಲೊಂದು ವಿವಾದ ಇದ್ದೇ ಇರುತ್ತದೆ ಎನ್ನುವಂತಾಗಿದೆ. ಮೀಟೂ ನಿಂದ ಹಿಡಿದು, ಬಾಲಿವುಡ್ ನಲ್ಲಿ ನಡೆಯುತ್ತಿರುವ ಪ್ರತಿಯೊಂದು ಅನ್ಯಾಯವನ್ನೂ ಎದುರಿಸುತ್ತಾ ಬಂದಿರುವ ಈ ನಟಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.
ವಾಹಿನಿಯೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸ್ವರ ಭಾಸ್ಕರ್, ಸುಖಾಸುಮ್ಮನೆ ರಾಹುಲ್ ಗಾಂಧಿಯನ್ನು ಉತ್ತರವಾಗಿ ಎಳೆದು ತಂದಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸಿನಿಮಾಗಳು ಸೋಲುತ್ತಿವೆಯಲ್ಲ, ಅದಕ್ಕೆ ಕಾರಣ ಏನಿರಬಹುದು ಎಂದು ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿಯೇ ಉತ್ತರ ನೀಡಿರುವ ಸ್ವರಾ, ಈ ಹಿಂದೆ ಆರ್ಥಿಕ ಹಿಂಜರಿತವೇ ಬಾಕ್ಸ್ ಆಫೀಸ್ ತುಂಬದೇ ಇರಲಿ ಕಾರಣ ಎನ್ನುತ್ತಿದ್ದರು. ಈಗ ಮತ್ತೊಂದು ರೂಪ ಪಡೆದುಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ
ಬಾಲಿವುಡ್ ಸಿನಿಮಾಗಳು ಸೋಲಿಗೆ ಕಾರಣವನ್ನು ಹೇಳಿದ ಅವರು, ಓಟಿಟಿಯು ಜನರನ್ನು ಥಿಯೇಟರ್ ಗೆ ಬಾರದಂತೆ ಮಾಡುತ್ತಿದೆ ಎಂದು ನೇರವಾಗಿಯೇ ಆರೋಪಿಸಿದರು. ಅಲ್ಲದೇ, ಬಾಲಿವುಡ್ ಅನ್ನು ರಾಹುಲ್ ಗಾಂಧಿಗೆ ಹೋಲಿಸಿದ ಸ್ವರ, ‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆಯುತ್ತಿದ್ದಾರೆ. ನಾನು ಅವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ಅವರಷ್ಟು ಬುದ್ಧಿವಂಥರು, ಸ್ಪಷತೆ ಇರುವಂಥವರು ಇಲ್ಲ. ಆದರೂ, ಪಪ್ಪು ಪಪ್ಪು ಎಂದು ಗೇಲಿ ಮಾಡಲಾಗುತ್ತಿದೆ. ಹಾಗೆಯೇ ಬಿಟೌನ್ ಪಪ್ಪುಫಿಕೇಶನ್ ನಲ್ಲಿ ನರಳುತ್ತಿದೆ ಎಂದಿದ್ದಾರೆ.