ಎಸ್‌ಎಂ ಕೃಷ್ಣ ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣ: ಗೋವಿಂದ ಕಾರಜೋಳ

Public TV
1 Min Read
SM Krishna 1 8

ಚಿತ್ರದುರ್ಗ: ಕೆಂಗಲ್ ಹನುಮಂತಯ್ಯ (Kengal Hanumanthaiah) ಕಟ್ಟಿಸಿದ ವಿಧಾನಸೌಧ (Vidhana Soudha) ಏಕೀಕರಣದ ಸಂಕೇತ. ಎಸ್‌ಎಂ ಕೃಷ್ಣ (SM Krishna) ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣವಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

Govinda Karajola 1

ಮಾಜಿ ಸಿಎಂ ಎಸ್‌ಎಂ ಕೃಷ್ಣ ನಿಧನಕ್ಕೆ ಗೋವಿಂದ ಕಾರಜೋಳ (Govinda Karajola) ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ವಿಕಾಸಸೌಧ ಆಧುನೀಕರಣ, ಜಾಗತೀಕರಣದ ಸಂಕೇತ ಆಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿಸಿದ ಕೀರ್ತಿ, ಗೌರವ ಎಸ್‌ಎಂ ಕೃಷ್ಣಗೆ ಸಲ್ಲುತ್ತದೆ. ಪ್ರಪಂಚದ ಗಣ್ಯ ವ್ಯಕ್ತಿಗಳು ಮೊದಲು ಬೆಂಗಳೂರಿಗೆ ಬರುವ ರೂಢಿ. ಬೆಂಗಳೂರು ಭೇಟಿ ಬಳಿಕ ದೆಹಲಿಗೆ ತೆರಳುವ ಕಾಲ ಎಸ್‌ಎಂ ಕೃಷ್ಣರ ಕಾಲದಲ್ಲಿ ಬಂತು ಎಂದು ತಿಳಿಸಿದರು. ಇದನ್ನೂ ಓದಿ: ಸಾವಿನಲ್ಲೂ ಹುಟ್ಟೂರಿನ ಒಳಿತನ್ನೇ ಬಯಸಿದ ಎಸ್‌ಎಂಕೆ

ಸಾರ್ವಜನಿಕ ಜೀವನದಿ ಕೀರ್ತಿ, ಗೌರವ ಹೆಚ್ಚಿಸಿದ ಸುಸಂಸ್ಕೃತ ರಾಜಕಾರಣಿ. ಎಸ್‌ಎಂ ಕೃಷ್ಣರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಕುಟುಂಬಕ್ಕಾದ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊಳ್ಳೇಗಾಲ ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನ

Share This Article