ಬೆಂಗಳೂರು: 2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಹೆಚ್ಡಿಕೆ ಅವರು ಸಂಸದರಾಗಿ ಕೇಂದ್ರದಲ್ಲಿ ಇರಲಿ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ತಿರುಗೇಟು ನೀಡಿದರು.ಇದನ್ನೂ ಓದಿ: ಬಿಜೆಪಿಯವರಿಗೆ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಬಾಯಿ ಪಾಠ ಆಗಿದೆ: ಲಕ್ಷ್ಮಣ್ ಸವದಿ
2028ಕ್ಕೆ ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂಬ ಹೆಚ್ಡಿಕೆ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಕುಮಾರಸ್ವಾಮಿಯವರು ಅದನ್ನೇ ಹೇಳಬೇಕು. ಪಾಪ ಅವರಿಗೆ ಬೇರೆ ಏನು ಹೇಳೋಕೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
2028ಕ್ಕೆ ನಾವೇ ಬರುತ್ತೀವಿ ಅಂತ ಅವರು ಹೇಳ್ತಾರೆ. ಮತ್ತೆ ನಾವೇ ಬರುತ್ತೀವಿ ಅಂತ ನಾವು ಹೇಳ್ತೀವಿ. ಕುಮಾರಸ್ವಾಮಿ ಅವರು ನಿರಂತರವಾಗಿ ಕೇಂದ್ರದಲ್ಲಿ ಇರಲಿ. ರಾಜ್ಯದಲ್ಲಿ 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಹೀಗಾಗಿ ರಾಜ್ಯಕ್ಕೆ ನೀವು ಬರೋದು ಬೇಡ. ಎಂಪಿ ಆಗಿಯೇ ಇರಿ ಎಂದು ಹೇಳಿದರು.ಇದನ್ನೂ ಓದಿ: ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ, ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ: ಲಕ್ಷ್ಮಣ್ ಸವದಿ