ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

Public TV
2 Min Read
BC Patil Sriramulu

ಬೆಂಗಳೂರು: ಇದೂವರೆಗೂ ಬಿಜೆಪಿಯ ಜನಾರ್ದನ ರೆಡ್ಡಿ, ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಫರ್ ಕೊಟ್ಟಿರುವ ಆಡಿಯೋಗಳನ್ನು ಕೇಳಿದ್ದಾಯಿತು. ಇದೀಗ ಬಿಜೆಪಿ ಶಾಸಕ ಶ್ರೀರಾಮುಲು ಮತ್ತು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ ಆಗಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‍ಗೆ ಆಫರ್ ನೀಡಿರುವ ಆಡಿಯೋವನ್ನ ಕಾಂಗ್ರೆಸ್ ರಿಲೀಸ್ ಮಾಡಿದೆ. ಕೇಂದ್ರದಲ್ಲಿಯೇ ನಮ್ಮ ಸರ್ಕಾರವಿದೆ ಬಂದು ಬಿಡಿ. ಕೇಂದ್ರ ಸರ್ಕಾರ ನಮ್ಮದೇ ಇದೆ ಯಾವುದೇ ಅಮಾನತು ಆಗಲ್ಲ ಎಂದು ಭರವಸೆಯನ್ನು ನೀಡಿದ್ದಾರೆ.

ಆಡಿಯೋದಲ್ಲಿ ಏನಿದೆ?
ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
ಬಿ.ಸಿ. ಪಾಟೀಲ್: ಹಾ? ನಮಸ್ಕಾರ ಹೇಳಿ ಅಣ್ಣಾ? ಬ್ರದರ್
ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿ.ಸಿ.ಪಾಟೀಲ್: `ಸಾಹೇಬ್ರು’ ಹಂಗೆ ಹೇಳಿದ್ರು? ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿ.ಸಿ. ಪಾಟೀಲ್: ನೀವೇ ಹೇಳಬೇಕು.
ಶ್ರೀರಾಮುಲು: 25 ಅಂತ ಹೇಳಿದ್ದೆ.

ಬಿ.ಸಿ. ಪಾಟೀಲ್: ನನ್ನ ಜತೆಯಲ್ಲಿ 3-4 ಜನರಿದ್ದಾರೆ? ಅವರಿಗೆ ಕ್ಲಾರಿಫೈ ಮಾಡಬೇಕು
ಶ್ರೀರಾಮುಲು: ಅವರಿಗೆ 10ರಿಂದ 15 ಕೊಡ್ತೀವಿ
ಬಿ.ಸಿ. ಪಾಟೀಲ್: ಅಣ್ಣಾ? ಅಣ್ಣಾ?ಅವರ ಪೊಸಿಷನ್ ಏನು?
ಶ್ರೀರಾಮುಲು: ಅವರನ್ನೂ ಮಂತ್ರಿ ಮಾಡ್ತೀವಿ?
ಬಿ.ಸಿ. ಪಾಟೀಲ್: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ? ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ??
ಶ್ರೀರಾಮುಲು: ಡೋಂಟ್ ವರಿ? ಎಲೆಕ್ಶನ್ ಇರುವುದಿಲ್ಲ?ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ? ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ ? ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ? ಅವರಹತ್ತಿರ ಮಾತಾಡಿ?

ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್?
ಶ್ರೀರಾಮುಲು: ಇಲ್ಲಾ ಮಾತನಾಡಿ?
ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ?ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
ಬಿ.ಸಿ. ಪಾಟೀಲ್: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು? ನೀವು ಒಂದು ಫಿಗರ್ ಹೇಳಿ?
(ರಾಮುಲು ಮಧ್ಯಪ್ರವೇಶ)
ಶ್ರೀರಾಮುಲು: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ?ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು? ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು? ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು?

ಬಿ.ಸಿ. ಪಾಟೀಲ್: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್?
ಮುರಳೀಧರ್ ರಾವ್: ಸಾರ್? ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ? 38 ಹೇಗೆ ಸ್ಟೇಬಲ್ ಆಗುತ್ತದೆ.
ಬಿ.ಸಿ. ಪಾಟೀಲ್: ಯೆಸ್ ಸಾರ್. ಯೆಸ್ ಸಾರ್?!!

Share This Article
Leave a Comment

Leave a Reply

Your email address will not be published. Required fields are marked *