Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

Bengaluru City

ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

Public TV
Last updated: May 18, 2018 7:26 pm
Public TV
Share
3 Min Read
REDDY AUDIO 1
SHARE

ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಬಿಜೆಪಿ ಪರವಾಗಿ ಸ್ವತಃ ಜನಾರ್ದನ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಮತ್ತು ಪ್ರೊ ರಾಜೀವ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಅವರಿಗೆ ಕರೆ ಮಾಡಿ ಆಫರ್ ನೀಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ನೂರು, ನೂರೈವತ್ತು ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಅಮಿತ್ ಶಾ ಕೂಡ ಆಮಿಷವೊಡ್ಡಿದ್ದಾರೆ. ನೂರು ಕೋಟಿ ರೂ. ಜೊತೆಗೆ ಕ್ಯಾಬಿನೆಟ್ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಮ್ಮ ಶಾಸಕರ ಕುಟುಂಬದವರನ್ನ ಸಂಪರ್ಕಿಸಿ ಹಣ ನೀಡುವ ಕೆಲಸ ಮಾಡಿ, ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಮಾತುಕತೆಯ ವೇಳೆ ಜನಾರ್ದನ ರೆಡ್ಡಿ ನೇರವಾಗಿ ಅಮಿತ್ ಶಾ ಅವರೊಂದಿಗೆ ಕೂತು ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು, ಒನ್ ಟು ಓನ್ ನಾನೇ ಅಮಿತ್ ಶಾ ಬಳಿ ಮಾತನಾಡಿಸುತ್ತೇನೆ. ಈಗಿರುವ ಆಸ್ತಿಯ ನೂರರಷ್ಟು ಆಸ್ತಿಯನ್ನು ಮಾಡಿಕೊಳ್ಳಬಹುದು. ನಿನಗೆ ಒಳ್ಳೆಯ ಸಮಯ ಬಂದಿದೆ ಎಂದು ಆಫರ್ ನೀಡಿದ್ದಾರೆ.

ರೆಡ್ಡಿ ಅಮಿಷಕ್ಕೆ ಒಳಗಾಗದ ಬಸನಗೌಡ ಅವರು, ಕಾಂಗ್ರೆಸ್ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದಿದೆ. ಆದರೆ ನಿಮ್ಮ ಮೇಲೆ ಗೌರವವಿದೆ. ಆದರೆ ತಾನು ಪಕ್ಷಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

ಕಾಂಗ್ರೆಸ್ ಸುದ್ದಿಗೋಷ್ಠಿ ವೇಳೆ ಅಮಿತ್ ಶಾ ಅವರು ಸಹ ನಮ್ಮ ಶಾಸಕರಿಗೆ ಆಮಿಷ ನೀಡಿದ್ದಾರೆ. ಈ ವಿಡಿಯೋ ಸಹ ನಮ್ಮ ಬಳಿ ಇದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

REDDY AUDIO 2

ಮಾತುಕತೆಯಲ್ಲಿ ಏನಿತ್ತು?

ಜನಾರ್ದನ ರೆಡ್ಡಿ ಪಿಎ – ಹಲೋ
ಬಸವನಗೌಡ – ಹಲೋ..
ಜನಾರ್ದನ ರೆಡ್ಡಿ ಪಿಎ – ಹಲೋ, ಫ್ರೀ ಆದ್ರೆ ಸರ್, ಜನಾರ್ದನ್ ರೆಡ್ಡಿ ಸರ್ ಹತ್ತಿರ ಮಾತನಾಡಬೇಕು ಅಂದ್ರು?
ಬಸವನಗೌಡ – ಕೊಡಿ ಕೊಡಿ..

ಜನಾರ್ದನ್ ರೆಡ್ಡಿ – ಬಸವನಗೌಡ,
ಬಸವನಗೌಡ -ಸರ್ ಹೇಳಿ ಸರ್ ಹೇಳಿ, ನಮಸ್ಕಾರ
ಜನಾರ್ದನ ರೆಡ್ಡಿ – ಫ್ರೀ ಇದಿಯಾ..?

ಬಸವನಗೌಡ – ಹೇಳಿ ಸರ್ ನಮಸ್ಕಾರ, ಫ್ರೀ ಇದ್ದೇನೆ.. ಹೇಳಿ
ಜನಾರ್ದನ ರೆಡ್ಡಿ – ಏನೇ ಇದ್ರು, ಕೆಟ್ಟ ಘಳಿಗೆಯನ್ನ ಮರೆತು ಹೋಗಿಬಿಡಿ. ನಾನ್ ನಿನಗೆ ಅರ್ಧ ರಾತ್ರಿಯಲ್ಲಿ ಹೇಳ್ತಾ ಇದ್ದೇನೆ. ನಿನ್ನ ಟೈಂ ಚೆನ್ನಾಗಿ ಶುರುವಾಗಿದೆ. ಮತ್ತೆ ನಿನ್ನ ಹತ್ತಿರ ನೇರವಾಗಿ ದೊಡ್ಡವ್ರು, ರಾಷ್ಟ್ರೀಯ ಅಧ್ಯಕ್ಷರು ಮಾತನಾಡುತ್ತಾರೆ. ನಿಮಗೆ ಏನ್ ಪದವಿ ಬೇಕು, ಏನ್ ಬೇಕು, ಒನ್ ಟು ಒನ್ ಕುತುಕೊಂಡು ಮಾತನಾಡಿ ಮುಂದಿನ ಹೆಜ್ಜೆ ಇಡೋಣ.

ಬಸವನಗೌಡ – ಇಲ್ಲ ಸರ್ ಇಲ್ಲ. ಯಾಕಂದ್ರೆ ಪರಿಸ್ಥಿತಿ ಚೆನ್ನಾಗಿಲ್ಲದಾಗ ಅವರು ನನ್ ಕೈ ಹಿಡಿದು ಮಾಡಿದ್ದಾರೆ.

ಜನಾರ್ದನ ರೆಡ್ಡಿ – ನಾನ್ ನಿನಗೆ ಒಂದೇ ಪಾಯಿಂಟ್ ಹೇಳ್ತೇನೆ, ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಮಾಡೋವಾಗ ತುಂಬ ಕೆಟ್ಟ ಸಂದರ್ಭದಲ್ಲಿ ಶ್ರೀರಾಮುಲು ಪಾರ್ಟಿ ಮಾಡಿದ್ದು, ತುಂಬ ವಿರೋಧದ ನಡುವೆ ಮಾಡಿದ್ದು, ನೀವೆಲ್ಲ ನಂಬಿಕೊಂಡು ಆಸ್ತಿ ಕಳೆದುಕೊಂಡಿದ್ದೀರಿ ಅನ್ನೋದ್ರಲ್ಲ ಎರಡನೇ ಮಾತೇ ಇಲ್ಲ.

ಜನಾರ್ದನ ರೆಡ್ಡಿ – ನಾನ್ ಹೇಳ್ತೇನೆ, ನೀನು ಅದಕ್ಕಿಂತ ನೂರಷ್ಟು ಬೆಳೆಯಬೇಕು. ಶಿವನಗೌಡ ನಾಯ್ಕ್ ಅವತ್ತು ನಾನ್ ಮಾತ್ ಕೇಳಿ ಬಂದು ಮಂತ್ರಿ ಆಗಿ ಉದ್ದಾರ ಆಗಿದ್ದು, ಇವತ್ತು ಎಂಎಲ್‍ಎಗೆ ಉಳಿದುಕೊಂಡು ತನ್ನಷ್ಟಕ್ಕೆ ತಾನು ಎಂಎಲ್‍ಎಗೆ ದುಡಿದುಕೊಂಡು ಶಕ್ತಿವಂತನಾಗಿದ್ದಾನಾ ಇಲ್ವಾ?

ಜನಾರ್ದನ ರೆಡ್ಡಿ – ನನ್ನಿಂದನೇ ಆಗಿದ್ದಲ್ವಾ? ರಾಜುಗೌಡ ನನ್ನಿಂದನೇ ಅಲ್ವಾ ಆಗಿದ್ದು?

ಬಸವನಗೌಡ – ಹು.. ಹೌದು..

ಜನಾರ್ದನ ರೆಡ್ಡಿ – ನಿನಗೆ ತಿಳಿಸುವುದು ಇಷ್ಟೇ. ನಮ್ಮ ಬ್ಯಾಡ್ ಟೈಂನಲ್ಲಿ ನಿಂದು ಮ್ಯಾಚ್ ಆಗಿಲ್ಲ. ನನಗೆ ನಿಂಗೆ. ಇವತ್ತು ಶಿವನಗೌಡ ನಾಯ್ಕ್ ಗೆದ್ದು ಪ್ರಯೋಜನವಿಲ್ಲ. ಇವತ್ತು ನೀನ್ ಮಂತ್ರಿ ಆಗ್ತಿಯಾ.

ಜನಾರ್ದನ ರೆಡ್ಡಿ – ನಾನು ಹೇಳೋದು ಇನ್ನೊಂದಲ್ಲ.ನೇರವಾಗಿ ದೊಡ್ಡವರ ಹತ್ತಿರನೇ ಒನ್ ಟು ಒನ್ ಕುರಿಸಿ ಮಾತನಾಡಿಸುತ್ತೇನೆ. ನಾನೇ ಸ್ವತಃ ಮಾತನಾಡಿಸುತ್ತೇನೆ. ಏನ್ ದೇಶದಲ್ಲಿ ಅವರು ಆಡಳಿತ ಮಾಡುತ್ತಿದ್ದಾರೆ. ಆ ಮಾತು ಉಳಿಸಿಕೊಳ್ಳದಕ್ಕೆ ಆಗುತ್ತಾ ಇರೋದು. ನಾನು ಹೇಳುತ್ತೇನೆ. ನಿನ್ನ ಆಸ್ತಿ ಮಾಡಿಕೊಳ್ತಿಯಲ್ಲ. ಅದಕ್ಕಿಂತ ನೂರರಷ್ಟು ಮಾಡಿಕೊಳ್ತಿಯ ಬಸವನಗೌಡ.

ಬಸವನಗೌಡ – ಇಲ್ಲ ಸರ್ ಸಾರಿ. ಏಕೆಂದರೆ ಲಾಸ್ಟ್ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೇ ಮಾಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ದ್ರೋಹ ಮಾಡುವುದು ಅರ್ಥವಿಲ್ಲ. ನಿಮ್ಮ ಮೇಲೆ ಗೌರವವಿದೆ. ಕ್ಷಮಿಸಿ.

TAGGED:Amit ShahbengalurubjpcongressJanardhan ReddyMLA'sPublic TVಅಮಿತ್ ಶಾಕಾಂಗ್ರೆಸ್ಜನಾರ್ದನ ರೆಡ್ಡಿಪಬ್ಲಿಕ್ ಟಿವಿಬಿಜೆಪಿಬೆಂಗಳೂರುಶಾಸಕರು
Share This Article
Facebook Whatsapp Whatsapp Telegram

Cinema news

ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood

You Might Also Like

asia cup india pakistan toss
Cricket

ಭಾರತ, ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ?

Public TV
By Public TV
7 hours ago
Bengaluru Car Seize
Bengaluru City

ಬೆಂಗ್ಳೂರಿನಲ್ಲಿ ಮನಸೋ ಇಚ್ಛೆ ಮಾರ್ಪಡಿಸಿದ ಐಷಾರಾಮಿ ಕಾರು ಸೀಜ್‌

Public TV
By Public TV
7 hours ago
USA Cricket Team
Cricket

ನೆದರ್‌ಲ್ಯಾಂಡ್‌ ವಿರುದ್ಧ 93 ರನ್‌ಗಳ ಭರ್ಜರಿ ಜಯ – ವಿಶ್ವಕಪ್‌ನಲ್ಲಿ ಅಮೆರಿಕಗೆ ಮೊದಲ ಗೆಲುವು

Public TV
By Public TV
7 hours ago
01 7
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-1

Public TV
By Public TV
7 hours ago
02 8
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-2

Public TV
By Public TV
7 hours ago
03 7
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-3

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?