ಬೆಂಗಳೂರು: ಕಾಂಗ್ರೆಸ್(Congress) ಪೇ ಸಿಎಂ(PayCM) ಕ್ಯಾಂಪೇನ್ಗೆ ರಾಜ್ಯ ಬಿಜೆಪಿ(BJP) ನಾಯಕರಿಗೆ ಹೈಕಮಾಂಡ್ ತೀವ್ರ ತರಾಟೆಗೆ ತೆಗೆದುಕೊಂಡ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ನಿನ್ನೆ ರಾತ್ರಿ ಬಂದ ಉಸ್ತುವಾರಿ ಅರುಣ್ ಸಿಂಗ್(Arun Singh) ತಡರಾತ್ರಿ 2 ಗಂಟೆಗಳ ಕಾಲ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್ ಜೊತೆ ಸಭೆ ನಡೆಸಿ ಗರಂ ಆಗಿದ್ದಾರೆ. ಹೈಕಮಾಂಡ್(BJP High Command) ನಾಯಕರ ಅಸಮಾಧಾನದ ಸಂದೇಶವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಎಕ್ಸ್ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್ಪ್ರೆಸ್
ಪೇ ಸಿಎಂ ಕ್ಯಾಂಪೇನ್ ಬಗ್ಗೆ ಮೊದಲೇ ಏಕೆ ತಿಳಿಯಲಿಲ್ಲ? ಅಭಿಯಾನ ನಡೆಯುವ ತನಕ ಸರ್ಕಾರ ಏನ್ ಮಾಡುತ್ತಿತ್ತು? ಪೇ ಸಿಎಂ ಕ್ಯಾಂಪೇನ್ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪೇ ಸಿಎಂ ಕೌಂಟರ್ ಅಟ್ಯಾಕ್ನಲ್ಲಿ ಸಿಎಂ ಮತ್ತು ಟೀಂ ವಿಫಲವಾಗಿದೆ. ಎಲೆಕ್ಷನ್ ಸಮಯದಲ್ಲಿ ಸಚಿವರು, ನಾಯಕರ ಸಪ್ಪೆ ವರ್ತನೆ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.