Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Hassan

ದೇಶದಲ್ಲಿ ಆಡಳಿತ ನಡೆಸಿದವರ ಕುಟುಂಬದಿಂದ ಇಂಥ ಕೃತ್ಯ ಆಯ್ತಲ್ಲಾ ಎಂಬ ನೋವಿದೆ: ಶಿವಲಿಂಗೇಗೌಡ

Public TV
Last updated: May 9, 2024 2:51 pm
Public TV
Share
4 Min Read
Shivalinge Gowda 1
SHARE

– ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು?
– ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು

ಹಾಸನ: ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಈ ರಾಜ್ಯ, ಜಿಲ್ಲೆ, ದೇಶದಲ್ಲಿ ಎಂದೂ ನಡೆಯದ ಲೈಂಗಿಕ ಹಗರಣವೊಂದು ಹಾಸನದಲ್ಲಿ ಆಯ್ತಲ್ಲಾ ಎನ್ನುವ ದು:ಖದಲ್ಲಿದ್ದೇವೆ. ಮನಸ್ಸಿಗೆ ಬಹಳ ವೇದನೆಯಾಗಿದೆ. ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ. ಇಡೀ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ದುಷ್ಕೃತ್ಯ ಮಾಡಿರುವವರು ವಿದೇಶಕ್ಕೆ ಹೋದ ಮೇಲೆ ಎಲ್ಲಾ ಸುದ್ದಿ ಆಯ್ತು. ಇಡೀ ಹಾಸನ ಜಿಲ್ಲೆಗೆ ಕಳಂಕ ತಂದಿದೆ. ಪಕ್ಷಭೇದ, ಎಲ್ಲಾ ಭಾವನೆಗಳನ್ನು ಮರೆತು ಇಂತಹ ಒಂದು ಕೃತ್ಯ ನಡೆಯಬಾರದಿತ್ತು ಎಂದು ಎಲ್ಲರೂ ಖಂಡಿಸಬೇಕಿತ್ತು. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಹೀನ ಕೃತ್ಯ. ಅದರಲ್ಲೂ ಲೈಂಗಿಕ ದೌರ್ಜನ್ಯ ಎಸಗಿ ಆ ದೌರ್ಜನ್ಯದ ವಿಡಿಯೋಗಳನ್ನು ಅವರೇ ಚಿತ್ರೀಕರಿಸಿ ತಂದು ಇಡೀ ಪ್ರಪಂಚಕ್ಕೆ ಗೊತ್ತಾಗುವ ಥರ ಮಾಡಿದ್ದಾರೆ. ಇಡೀ ರಾಜ್ಯ, ದೇಶದ ಜನ ತಲೆ ತಗ್ಗಿಸುವಂತಾಗಿದೆ. ಮಾಡಿದಂತಹ ಹೀನ ಕೃತ್ಯವನ್ನು ತನ್ನ ಮೊಬೈಲ್‌ನಿಂದ ಹೊರಪ್ರಪಂಚಕ್ಕೆ ತಂದದ್ದು ದುಷ್ಕೃತ್ಯ. ಅದನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದು ಹೋಗುತ್ತವೆ. ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು? ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ

h.d.revanna prajwal revanna

ಪೆನ್‌ಡ್ರೈವ್ ಹೊರಕ್ಕೆ ಬಿಟ್ಟವರು ಕಾರ್ತಿಕ್ ಹಾಗೂ ದೇವರಾಜೇಗೌಡ. ದೇವರಾಜೇಗೌಡಗೆ ಮಾತ್ರ ನಾನು ಪೆನ್‌ಡ್ರೈವ್ ಕೊಟ್ಟೆ ಅಂತ ಕಾರ್ತಿಕ್ ಹೇಳಿದ್ರು. ದೇವೇಗೌಡರ ಕುಟುಂಬಕ್ಕೂ ದೇವರಾಜೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಇದನ್ನು ಸುಖಾಂತ್ಯ ಮಾಡಲು ದೇವರಾಜೇಗೌಡ ಯಾಕೆ ಮನಸ್ಸು ಮಾಡಲಿಲ್ಲ? ಆರು ತಿಂಗಳು ಏಕೆ ಪೆನ್‌ಡ್ರೈವ್ ತಮ್ಮ ಬಳಿ ಇಟ್ಟುಕೊಂಡರು? ಕಾರ್ತಿಕ್‌ಗೆ ನ್ಯಾಯ ಕೊಡಿಸಲು ಆಗದಿದ್ದ ಮೇಲೆ ಪೆನ್‌ಡ್ರೈವ್ ಏಕೆ ತಮ್ಮ ಬಳಿ ಇಟ್ಕಂಡಿದ್ದರು? ಏಕೆ ಆರು ತಿಂಗಳು ಪೆನ್‌ಡ್ರೈವ್ ನಿಮ್ಮ ಬಳಿ ಇಟ್ಕಂಡಿದ್ದೀರಿ? ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಅದು ಬೆಳಕಿಗೆ ಬರಲೇಬೇಕು. ನೀವು ವಕೀಲರಾಗಿ ಜಡ್ಜ್ ಅಥವಾ ಪೊಲೀಸರ ಮುಂದೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ನೀವು ಹಾಗೆ ಮಾಡಿದ್ರೆ ಇಡೀ ವಕೀಲರಿಗೆ ಗೌರವ ಬರುತ್ತಿತ್ತು. ನಿಮ್ಮ ಘನತೆ, ಗೌರವ ಹೆಚ್ಚುತ್ತಿತ್ತು. ಸಂಸದ ಪ್ರಜ್ವಲ್ ರೇವಣ್ಣ ಅವರ ಅನರ್ಹ ಮಾಡಲು ಇದು ಕಾರಣ ಆಗದು. ಕೃತ್ಯ ಎಸಗಿದಷ್ಟೇ ಮಹಿಳೆಯರ ಮಾನ, ಮರ್ಯಾದೆ, ಘನತೆ ಗೌರವ ಹಾಳು ಮಾಡಿದ್ದಾರೆ. ಮಾನ, ಮರ್ಯಾದೆ ಇಲ್ಲದಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು. ಇವರು ಹೊರ ದೇಶಕ್ಕೆ ಹೋದರು. ಎಸ್‌ಐಟಿನೇ ಸರಿಯಿಲ್ಲ ಅಂತಾ ದೇವರಾಜೇಗೌಡ ಹೇಳ್ತಾರೆ. ಪೆನ್‌ಡ್ರೈವ್ ಹರಿಬಿಡಲು ಸರ್ಕಾರವೇ ಕಾರಣ ಅಂತ ದೇವರಾಜೇಗೌಡ ಹೇಳ್ತಾನೆ. ಅದನ್ನು ಕಟ್ಕಂಡು ಏಕಾಏಕಿ ಪ್ರತಿಭಟನೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಮಾತಿನಲ್ಲಿ ಹಿಡಿತಬೇಡ್ವಾ? ಎಲ್ಲರನ್ನೂ ಏಕವಚನದಲ್ಲೇ ಬೈತಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಪೆನ್‌ಡ್ರೈವ್ ಹರಿಬಿಟ್ಟವರು ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದೆ. ಈಗ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ

SIDDU DKSHI

ವಕೀಲರು ವಕೀಲ ವೃತ್ತಿ ಮಾಡಿಕೊಂಡು ಇರಬೇಕು. ಸಾವಿರಾರು ಪೆನ್‌ಡ್ರೈವ್ ಹಂಚಿಕೆ ಆಗಬೇಕಾದರೆ ದೇವರಾಜೇಗೌಡ ಕಾರಣ. ಎ1 ಮಾಡ್ತಾರೆ ಅಂತಾ ದೇವರಾಜೇಗೌಡ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡ್ತಿದ್ದಾರೆ. ಕುಮಾರಣ್ಣ ಮೊದಲು ಉಪ್ಪು ತಿಂದ ಮೇಲೆ ನೀರು ಕುಡಿತಾನೆ ಅಂದರು. ನಮ್ಮ ಕುಟುಂಬ ಬೇರೆ, ಅವರ ಕುಟುಂಬವೇ ಬೇರೆ ಅಂದಿದ್ರು. ಈಗ ಡಿಫೈನ್ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಯನ್ನು ಬಿಟ್ಟು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತಾಡುತ್ತಿದ್ದಾರೆ. ನೀವು ಹೇಗೆ ಒಕ್ಕಲಿಗ ಸಮುದಾಯದ ನಾಯಕರೋ, ಹಾಗೆ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ನಾಯಕರೇ. ಅವರು ನಿಮ್ಮಂತೆ ಬೆಳೆದು ಬಂದು ಒಕ್ಕಲಿಗ ನಾಯಕರಾಗಿದ್ದಾರೆ. ನೀವು ಮುಖ್ಯಮಂತ್ರಿ ಆಗಿದ್ದಾಗಲೂ ಎಸ್‌ಐಟಿನೇ ಮಾಡಿದ್ರಿ. ಈ ಪ್ರಕರಣ ಅವರ ಪಕ್ಷವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವುದು ಖಂಡನೀಯ. ನಿಮ್ಮ ಪಕ್ಷದ ಮೇಲೆ ಬಂದಿರುವ ಆರೋಪವನ್ನು ಬೇರೆ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೇವರಾಜೇಗೌಡ ಇದರಲ್ಲಿ ಸಿಕ್ಕಿಕೊಳ್ತಾರೆ. ಇವರು ಪೆನ್‌ಡ್ರೈವನ್ನು ಉನ್ನತ ಅಧಿಕಾರಿಗೆ ಕೊಡಬೇಕಿತ್ತು. ಇದರಲ್ಲಿ ದೇವರಾಜೇಗೌಡ ಒಬ್ಬ ಅಪರಾಧಿ. ಡಿ.ಕೆ.ಶಿವಕುಮಾರ್ ಶ್ರೇಯಸ್ಸು, ಅವರ ಯಶಸ್ಸು ತಡೆಯಲಾರದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

Share This Article
Facebook Whatsapp Whatsapp Telegram

Cinema Updates

Vishal
47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್‌ – ಯಾರು ಗೊತ್ತಾ ಆ ಬೆಡಗಿ?
3 hours ago
Sanjjanaa Galrani 1
ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ
4 hours ago
twinkle khanna
ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ
5 hours ago
Upendra 2
ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಉಪ್ಪಿ-‘ಕರ್ವ’ ಡೈರೆಕ್ಟರ್ ಆ್ಯಕ್ಷನ್ ಕಟ್
6 hours ago

You Might Also Like

IPL 3
Cricket

ಹೈದರಾಬಾದ್‌ಗೆ 6 ವಿಕೆಟ್‌ಗಳ ಅಮೋಘ ಜಯ – ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಲಕ್ನೋ!

Public TV
By Public TV
53 minutes ago
Trump and Putin
Latest

ಉಕ್ರೇನ್ ಸಂಘರ್ಷ ಕೊನೆಗೊಳಿಸಲು ರಷ್ಯಾ ಸಿದ್ಧ – 2 ಗಂಟೆಗೂ ಹೆಚ್ಚುಕಾಲ ಟ್ರಂಪ್‌-ಪುಟಿನ್‌ ಮಾತುಕತೆ

Public TV
By Public TV
1 hour ago
Raichuru Crime
Latest

CRPF ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗಳು ಅರೆಸ್ಟ್

Public TV
By Public TV
2 hours ago
Elderly man who survived Shirur Landslide Tragedy dies after being struck by lightning
Districts

ಶಿರೂರು ದುರಂತದಲ್ಲಿ ಜೀವ ಉಳಿಸಿಕೊಂಡಿದ್ದ ವೃದ್ಧ ಸಿಡಿಲಿಗೆ ಬಲಿ

Public TV
By Public TV
2 hours ago
Pakistani spy
Latest

3 ದಿನಗಳಲ್ಲಿ 11 ಪಾಕ್ ಸ್ಪೈಗಳ ಬಂಧನ – ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್‌ಗಳಾಗಿದ್ದವರು ಬೇಹುಗಾರರಾಗಿ ಕೆಲಸ

Public TV
By Public TV
2 hours ago
Chikkaballapur Priest Murder
Chikkaballapur

ಕೈ, ಕಾಲು ಕಟ್ಟಿ ಪೂಜಾರಿಯ ಕೊಲೆ – 3 ವಾರಗಳ ಹಿಂದೆಯೇ ಅರಣ್ಯದಲ್ಲಿ ಬೀಸಾಡಿರುವ ಶಂಕೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?