Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Hassan

ದೇಶದಲ್ಲಿ ಆಡಳಿತ ನಡೆಸಿದವರ ಕುಟುಂಬದಿಂದ ಇಂಥ ಕೃತ್ಯ ಆಯ್ತಲ್ಲಾ ಎಂಬ ನೋವಿದೆ: ಶಿವಲಿಂಗೇಗೌಡ

Public TV
Last updated: May 9, 2024 2:51 pm
Public TV
Share
4 Min Read
Shivalinge Gowda 1
SHARE

– ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು?
– ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು

ಹಾಸನ: ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಈ ರಾಜ್ಯ, ಜಿಲ್ಲೆ, ದೇಶದಲ್ಲಿ ಎಂದೂ ನಡೆಯದ ಲೈಂಗಿಕ ಹಗರಣವೊಂದು ಹಾಸನದಲ್ಲಿ ಆಯ್ತಲ್ಲಾ ಎನ್ನುವ ದು:ಖದಲ್ಲಿದ್ದೇವೆ. ಮನಸ್ಸಿಗೆ ಬಹಳ ವೇದನೆಯಾಗಿದೆ. ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ. ಇಡೀ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ದುಷ್ಕೃತ್ಯ ಮಾಡಿರುವವರು ವಿದೇಶಕ್ಕೆ ಹೋದ ಮೇಲೆ ಎಲ್ಲಾ ಸುದ್ದಿ ಆಯ್ತು. ಇಡೀ ಹಾಸನ ಜಿಲ್ಲೆಗೆ ಕಳಂಕ ತಂದಿದೆ. ಪಕ್ಷಭೇದ, ಎಲ್ಲಾ ಭಾವನೆಗಳನ್ನು ಮರೆತು ಇಂತಹ ಒಂದು ಕೃತ್ಯ ನಡೆಯಬಾರದಿತ್ತು ಎಂದು ಎಲ್ಲರೂ ಖಂಡಿಸಬೇಕಿತ್ತು. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಹೀನ ಕೃತ್ಯ. ಅದರಲ್ಲೂ ಲೈಂಗಿಕ ದೌರ್ಜನ್ಯ ಎಸಗಿ ಆ ದೌರ್ಜನ್ಯದ ವಿಡಿಯೋಗಳನ್ನು ಅವರೇ ಚಿತ್ರೀಕರಿಸಿ ತಂದು ಇಡೀ ಪ್ರಪಂಚಕ್ಕೆ ಗೊತ್ತಾಗುವ ಥರ ಮಾಡಿದ್ದಾರೆ. ಇಡೀ ರಾಜ್ಯ, ದೇಶದ ಜನ ತಲೆ ತಗ್ಗಿಸುವಂತಾಗಿದೆ. ಮಾಡಿದಂತಹ ಹೀನ ಕೃತ್ಯವನ್ನು ತನ್ನ ಮೊಬೈಲ್‌ನಿಂದ ಹೊರಪ್ರಪಂಚಕ್ಕೆ ತಂದದ್ದು ದುಷ್ಕೃತ್ಯ. ಅದನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದು ಹೋಗುತ್ತವೆ. ನಾಲ್ಕು ಗೋಡೆ ಬಿಟ್ಟು ಹೊರಗೆ ತಲುಪಲು ಕಾರಣ ಏನು? ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ

h.d.revanna prajwal revanna

ಪೆನ್‌ಡ್ರೈವ್ ಹೊರಕ್ಕೆ ಬಿಟ್ಟವರು ಕಾರ್ತಿಕ್ ಹಾಗೂ ದೇವರಾಜೇಗೌಡ. ದೇವರಾಜೇಗೌಡಗೆ ಮಾತ್ರ ನಾನು ಪೆನ್‌ಡ್ರೈವ್ ಕೊಟ್ಟೆ ಅಂತ ಕಾರ್ತಿಕ್ ಹೇಳಿದ್ರು. ದೇವೇಗೌಡರ ಕುಟುಂಬಕ್ಕೂ ದೇವರಾಜೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಇದನ್ನು ಸುಖಾಂತ್ಯ ಮಾಡಲು ದೇವರಾಜೇಗೌಡ ಯಾಕೆ ಮನಸ್ಸು ಮಾಡಲಿಲ್ಲ? ಆರು ತಿಂಗಳು ಏಕೆ ಪೆನ್‌ಡ್ರೈವ್ ತಮ್ಮ ಬಳಿ ಇಟ್ಟುಕೊಂಡರು? ಕಾರ್ತಿಕ್‌ಗೆ ನ್ಯಾಯ ಕೊಡಿಸಲು ಆಗದಿದ್ದ ಮೇಲೆ ಪೆನ್‌ಡ್ರೈವ್ ಏಕೆ ತಮ್ಮ ಬಳಿ ಇಟ್ಕಂಡಿದ್ದರು? ಏಕೆ ಆರು ತಿಂಗಳು ಪೆನ್‌ಡ್ರೈವ್ ನಿಮ್ಮ ಬಳಿ ಇಟ್ಕಂಡಿದ್ದೀರಿ? ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಅದು ಬೆಳಕಿಗೆ ಬರಲೇಬೇಕು. ನೀವು ವಕೀಲರಾಗಿ ಜಡ್ಜ್ ಅಥವಾ ಪೊಲೀಸರ ಮುಂದೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ನೀವು ಹಾಗೆ ಮಾಡಿದ್ರೆ ಇಡೀ ವಕೀಲರಿಗೆ ಗೌರವ ಬರುತ್ತಿತ್ತು. ನಿಮ್ಮ ಘನತೆ, ಗೌರವ ಹೆಚ್ಚುತ್ತಿತ್ತು. ಸಂಸದ ಪ್ರಜ್ವಲ್ ರೇವಣ್ಣ ಅವರ ಅನರ್ಹ ಮಾಡಲು ಇದು ಕಾರಣ ಆಗದು. ಕೃತ್ಯ ಎಸಗಿದಷ್ಟೇ ಮಹಿಳೆಯರ ಮಾನ, ಮರ್ಯಾದೆ, ಘನತೆ ಗೌರವ ಹಾಳು ಮಾಡಿದ್ದಾರೆ. ಮಾನ, ಮರ್ಯಾದೆ ಇಲ್ಲದಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಇಲ್ಲೇ ಇದ್ದು ಫೇಸ್ ಮಾಡಬೇಕಿತ್ತು. ಇವರು ಹೊರ ದೇಶಕ್ಕೆ ಹೋದರು. ಎಸ್‌ಐಟಿನೇ ಸರಿಯಿಲ್ಲ ಅಂತಾ ದೇವರಾಜೇಗೌಡ ಹೇಳ್ತಾರೆ. ಪೆನ್‌ಡ್ರೈವ್ ಹರಿಬಿಡಲು ಸರ್ಕಾರವೇ ಕಾರಣ ಅಂತ ದೇವರಾಜೇಗೌಡ ಹೇಳ್ತಾನೆ. ಅದನ್ನು ಕಟ್ಕಂಡು ಏಕಾಏಕಿ ಪ್ರತಿಭಟನೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಮಾತಿನಲ್ಲಿ ಹಿಡಿತಬೇಡ್ವಾ? ಎಲ್ಲರನ್ನೂ ಏಕವಚನದಲ್ಲೇ ಬೈತಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಪೆನ್‌ಡ್ರೈವ್ ಹರಿಬಿಟ್ಟವರು ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದೆ. ಈಗ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ

SIDDU DKSHI

ವಕೀಲರು ವಕೀಲ ವೃತ್ತಿ ಮಾಡಿಕೊಂಡು ಇರಬೇಕು. ಸಾವಿರಾರು ಪೆನ್‌ಡ್ರೈವ್ ಹಂಚಿಕೆ ಆಗಬೇಕಾದರೆ ದೇವರಾಜೇಗೌಡ ಕಾರಣ. ಎ1 ಮಾಡ್ತಾರೆ ಅಂತಾ ದೇವರಾಜೇಗೌಡ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡ್ತಿದ್ದಾರೆ. ಕುಮಾರಣ್ಣ ಮೊದಲು ಉಪ್ಪು ತಿಂದ ಮೇಲೆ ನೀರು ಕುಡಿತಾನೆ ಅಂದರು. ನಮ್ಮ ಕುಟುಂಬ ಬೇರೆ, ಅವರ ಕುಟುಂಬವೇ ಬೇರೆ ಅಂದಿದ್ರು. ಈಗ ಡಿಫೈನ್ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಯನ್ನು ಬಿಟ್ಟು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತಾಡುತ್ತಿದ್ದಾರೆ. ನೀವು ಹೇಗೆ ಒಕ್ಕಲಿಗ ಸಮುದಾಯದ ನಾಯಕರೋ, ಹಾಗೆ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ನಾಯಕರೇ. ಅವರು ನಿಮ್ಮಂತೆ ಬೆಳೆದು ಬಂದು ಒಕ್ಕಲಿಗ ನಾಯಕರಾಗಿದ್ದಾರೆ. ನೀವು ಮುಖ್ಯಮಂತ್ರಿ ಆಗಿದ್ದಾಗಲೂ ಎಸ್‌ಐಟಿನೇ ಮಾಡಿದ್ರಿ. ಈ ಪ್ರಕರಣ ಅವರ ಪಕ್ಷವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವುದು ಖಂಡನೀಯ. ನಿಮ್ಮ ಪಕ್ಷದ ಮೇಲೆ ಬಂದಿರುವ ಆರೋಪವನ್ನು ಬೇರೆ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೇವರಾಜೇಗೌಡ ಇದರಲ್ಲಿ ಸಿಕ್ಕಿಕೊಳ್ತಾರೆ. ಇವರು ಪೆನ್‌ಡ್ರೈವನ್ನು ಉನ್ನತ ಅಧಿಕಾರಿಗೆ ಕೊಡಬೇಕಿತ್ತು. ಇದರಲ್ಲಿ ದೇವರಾಜೇಗೌಡ ಒಬ್ಬ ಅಪರಾಧಿ. ಡಿ.ಕೆ.ಶಿವಕುಮಾರ್ ಶ್ರೇಯಸ್ಸು, ಅವರ ಯಶಸ್ಸು ತಡೆಯಲಾರದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

Share This Article
Facebook Whatsapp Whatsapp Telegram

You Might Also Like

Rishab Shetty
Bengaluru City

ರಿಷಬ್ ಶೆಟ್ಟಿ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್‌ – ʻಕಾಂತಾರ: ಚಾಪ್ಟರ್ 1ʼ ಹೊಸ ಪೋಸ್ಟರ್‌ ರಿಲೀಸ್‌

Public TV
By Public TV
26 minutes ago
Heart Attack 2
Districts

Heart Attack | ಹಾಸನ, ಶಿವಮೊಗ್ಗದಲ್ಲಿ ತಲಾ ಒಬ್ಬರು ರೈತರು ಹೃದಯಾಘಾತಕ್ಕೆ ಬಲಿ

Public TV
By Public TV
49 minutes ago
Mobile 02
Bengaluru City

ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

Public TV
By Public TV
1 hour ago
Fatal attack on a young man Video viral in Soladevanahalli Bengaluru
Bengaluru City

ಮಾಜಿ ಲವ್ವರ್‌ಗೆ ಅಶ್ಲೀಲ ಸಂದೇಶ – ರೇಣುಕಾಸ್ವಾಮಿ ಕೊಲೆ ಕೇಸ್‌ ಉಲ್ಲೇಖಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್‌

Public TV
By Public TV
1 hour ago
Texas Flood
Latest

100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

Public TV
By Public TV
2 hours ago
Shubhanshu Shukla
Bengaluru City

ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?